ಕರ್ನಾಟಕ

karnataka

ETV Bharat / bharat

ವಾಂತಿ ಮಾಡಲೆಂದು ಬಸ್​ ಕಿಟಕಿಯಿಂದ ತಲೆ ಹೊರಹಾಕಿದ ಬಾಲಕಿ: ಮುಂದಾಗಿದ್ದು ದೊಡ್ಡ ಅನಾಹುತ! - ಬಸ್ ಕಿಟಕಿ

ವಾಂತಿ ಮಾಡಲೆಂದು ಬಸ್ಸಿನ ಕಿಟಕಿಯಿಂದ ಬಾಲಕಿಯೋರ್ವಳು ತಲೆ ಹೊರಹಾಕಿರುವುದು ಆಕೆಯ ಪ್ರಾಣಕ್ಕೆ ಎರವಾಗಿದೆ.

bus window in khandwa
bus window in khandwa

By

Published : Mar 31, 2021, 4:06 PM IST

ಖಂಡವಾ (ಮಧ್ಯಪ್ರದೇಶ):ಬಸ್​​ನಲ್ಲಿ ಪ್ರಯಾಣಿಸುತ್ತಿದ್ದ ಬಾಲಕಿಯೋರ್ವಳು ವಾಂತಿ ಮಾಡಲೆಂದು ಕಿಟಕಿಯಿಂದ ತಲೆ ಹೊರಹಾಕಿದ್ದು, ಆಕೆಯ ಪ್ರಾಣಕ್ಕೆ ಎರವಾಗಿದೆ. ಟ್ರಕ್​​ವೊಂದು ತಲೆಗೆ ಬಡಿದು ರುಂಡ, ಮುಂಡ ಬೇರೆ ಬೇರೆಯಾಗಿದೆ.

ವಾಂತಿ ಮಾಡಲೆಂದು ಬಸ್​ ಕಿಟಕಿಯಿಂದ ತಲೆ ಹೊರಹಾಕಿದ ಬಾಲಕಿ

ಕುಟುಂಬದೊಂದಿಗೆ ಸೇರಿ ಬಸ್​ನಲ್ಲಿ ಕುಳಿತುಕೊಂಡಿದ್ದ ಬಾಲಕಿ ಇಂದೋರ್​ಗೆ ಪ್ರಯಾಣ ಬೆಳೆಸಿದ್ದಳು. ಖಂಡವಾದಿಂದ 20 ಕಿಲೋ ಮೀಟರ್ ದೂರು ಪ್ರಯಾಣಿಸಿದ ವೇಳೆ ಆಕೆಗೆ ವಾಂತಿ ಬಂದಿದ್ದು, ಈ ವೇಳೆ ಬಸ್​ ಕಿಟಕಿಯಿಂದ ತಲೆ ಹೊರಹಾಕಿದ್ದಾಳೆ. ಈ ವೇಳೆ ಎದುರುಗಡೆಯಿಂದ ಬರುತ್ತಿದ್ದ ಟ್ರಕ್​ ಆಕೆಯ ತಲೆಗೆ ಜೋರಾಗಿ ಹೊಡೆದಿರುವ ಕಾರಣ ತಲೆ ಕತ್ತರಿಸಿ ರುಂಡ, ಮುಂಡ ಬೇರೆ ಬೇರೆಯಾಗಿವೆ.

ಇದನ್ನೂ ಓದಿ: ಕೃಷಿ ಕಾಯ್ದೆಗಳ ಪರಿಶೀಲನೆ: ಸುಪ್ರೀಂಕೋರ್ಟ್ ರಚಿತ ಸಮಿತಿಯಿಂದ ವರದಿ ಸಲ್ಲಿಕೆ

ಘಟನೆ ನಡೆಯುತ್ತಿದ್ದಂತೆ ಟ್ರಕ್​ ಚಾಲಕ ಅಲ್ಲಿಂದ ಪರಾರಿಯಾಗಿದ್ದಾನೆ. ಸ್ಥಳಕ್ಕಾಗಮಿಸಿದ ಪೊಲೀಸರು ಮೃತ ಬಾಲಕಿ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದು, ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ABOUT THE AUTHOR

...view details