ಕರ್ನಾಟಕ

karnataka

ಪ್ರಾಣ ಪಣಕ್ಕಿಟ್ಟು ಗಾಯಾಳು ಸ್ಥಳಾಂತರಿಸಿದ ರಕ್ಷಣಾ ಸಿಬ್ಬಂದಿ - ವಿಡಿಯೋ

By

Published : Jul 31, 2021, 11:34 AM IST

ಪರ್ವತದ ತುದಿಯಿಂದ ರಭಸವಾಗಿ ಹರಿಯುತ್ತಿರುವ ನೀರಿನ ಮೇಲೆ ತಾತ್ಕಾಲಿಕ ಸೇತುವೆ ನಿರ್ಮಿಸಿ ರಕ್ಷಣಾ ಸಿಬ್ಬಂದಿ, ವ್ಯಕ್ತಿಯೊಬ್ಬರನ್ನು ಸ್ಥಳಾಂತರಿಸಿದ ವಿಡಿಯೋ ವೈರಲ್ ಆಗಿದೆ.

Rescue team carries injured person in HP Goes Viral
ರಕ್ಷಣಾ ಕಾರ್ಯದ ದೃಶ್ಯ

ಲಾಹೌಲ್ ಸ್ಪಿಟಿ :ಹಿಮಾಚಲ ಪ್ರದೇಶದಾದ್ಯಂತ ಸುರಿಯುತ್ತಿರುವ ಭಾರಿ ಮಳೆಗೆ ವಿವಿಧೆಡೆ ಅನಾಹುತಗಳು ಸಂಭವಿಸಿದ್ದು, ಹಲವರು ಪ್ರಾಣ ಕಳೆದುಕೊಂಡಿದ್ದಾರೆ.

ಹಿಮಾಲಯದ ತಪ್ಪಲ್ಲಿನಲ್ಲಿರುವುದರಿಂದ ರಾಜ್ಯದಲ್ಲಿ ಗುಡ್ಡ ಕುಸಿತ ಘಟನೆಗಳು ಹೆಚ್ಚಾಗಿ ಸಂಭವಿಸಿದ್ದು, ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪರ್ವತ ಪ್ರದೇಶಗಳಲ್ಲಿ ಅಪಾಯಕ್ಕೆ ಸಿಲುಕಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕಾರ್ಯವನ್ನು ರಕ್ಷಣಾ ತಂಡ ನಿರಂತರವಾಗಿ ಮಾಡುತ್ತಿದೆ.

ಲಾಹೌಲ್​ ಜಿಲ್ಲೆಯಜಹಲ್ಮಾನ್ ನಲ್ಲಾದಲ್ಲಿ ಪ್ರವಾಹಕ್ಕೆ ಸಿಲುಕಿ ಪ್ರಮುಖ ಸಂಪರ್ಕ ಸೇತುವೆ ಕೊಚ್ಚಿಕೊಂಡು ಹೋಗಿದ್ದು, ಗ್ರಾಮಸ್ಥರನ್ನು ರಕ್ಷಣಾ ಸಿಬ್ಬಂದಿ ರಕ್ಷಣೆ ಮಾಡುವ ದೃಶ್ಯವೊಂದು ವೈರಲ್ ಆಗಿದೆ.

ರಕ್ಷಣಾ ಕಾರ್ಯದ ದೃಶ್ಯ

ಓದಿ : ಜೈಲು ಗೋಡೆ ಕುಸಿತ: 22 ಕೈದಿಗಳಿಗೆ ಗಾಯ, ಓರ್ವನ ಸ್ಥಿತಿ ಚಿಂತಾಜನಕ

ಜಹಲ್ಮಾನ್ ನಲ್ಲಾ ಗ್ರಾಮದಿಂದ ಕೀಲಾಂಗ್ ಗ್ರಾಮಕ್ಕೆ ಗಾಯಗೊಂಡ ವ್ಯಕ್ತಿಯೊಬ್ಬರನ್ನು ರಭಸದಿಂದ ಹರಿಯುತ್ತಿರುವ ನೀರಿನ ಮೇಲೆ ತಾತ್ಕಾಲಿಕ ಸೇತುವೆ ನಿರ್ಮಿಸಿ, ಗ್ರಾಮಸ್ಥರು ಮತ್ತು ರಕ್ಷಣಾ ಸಿಬ್ಬಂದಿ ಸ್ಥಳಾಂತರ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ABOUT THE AUTHOR

...view details