ಕರ್ನಾಟಕ

karnataka

By

Published : Jun 3, 2023, 8:59 AM IST

ETV Bharat / bharat

ರಿಲಯನ್ಸ್ ನೇತೃತ್ವದಲ್ಲಿ ಗತವೈಭವ ಮರಳಿ ಪಡೆಯಲಿದೆ 'ಕಾಳಿಘಾಟ್ ದೇವಾಲಯ'

ಕಾಳಿಘಾಟ್ ದೇವಾಲಯದ ಪುನಶ್ಚೇತನ ಕಾರ್ಯದ ಉಸ್ತುವಾರಿಯನ್ನು ರಿಲಯನ್ಸ್ ವಹಿಸಿಕೊಂಡಿದೆ.

Kalighat temple
ಕಾಳಿಘಾಟ್ ದೇವಾಲಯ

ಕೋಲ್ಕತ್ತಾ(ಪ.ಬಂಗಾಳ):ದೇಶ ಮತ್ತು ವಿಶ್ವದ ಅತಿದೊಡ್ಡ ಕಾರ್ಪೊರೇಟ್ ಸಂಸ್ಥೆಗಳಲ್ಲಿ ಒಂದಾದ ರಿಲಯನ್ಸ್ ಕಾಳಿಘಾಟ್ ದೇವಾಲಯದೊಂದಿಗೆ ಇದೀಗ ಸಂಬಂಧ ಹೊಂದಲಿದೆ. ಈ ಕಾರ್ಪೊರೇಟ್ ಸಂಸ್ಥೆ ಕಾಳಿಘಾಟ್ ದೇವಾಲಯದ ಜೀರ್ಣೋದ್ಧಾರದಿಂದ ಪ್ರಾರಂಭವಾಗಿ ಅದರ ಸೌಂದರ್ಯೀಕರಣದ ಜವಾಬ್ದಾರಿ ಕೈಗೊಳ್ಳಲು ಸಜ್ಜಾಗಿದೆ. ಕೋಲ್ಕತ್ತಾ ಮುನ್ಸಿಪಲ್ ಕಾರ್ಪೊರೇಷನ್ (ಕೆಎಂಸಿ) ಪ್ರಕಾರ ಕಾಳಿಘಾಟ್ ದೇವಾಲಯದ ಪುನಶ್ಚೇತನ ಕಾರ್ಯ ಡಿಸೆಂಬರ್ 2023 ರೊಳಗೆ ಪೂರ್ಣಗೊಳ್ಳಲಿದೆ ಎಂದು ತಿಳಿದು ಬಂದಿದೆ.

ಕೋಲ್ಕತ್ತಾ ಮುನ್ಸಿಪಲ್ ಕಾರ್ಪೊರೇಶನ್‌ನಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಮುನ್ಸಿಪಲ್ ಕಾರ್ಪೊರೇಶನ್, ರಿಲಯನ್ಸ್ ಗ್ರೂಪ್ ಪ್ರತಿನಿಧಿಗಳು ಹಾಗೂ ದೇವಾಲಯದ ಸಮಿತಿ ಸದಸ್ಯರು ಭಾಗವಹಿಸಿದ್ದರು. ಈ ವೇಳೆ, ಸುಧಾರಣೆಗಳ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು. ಮೂಲಗಳ ಪ್ರಕಾರ "ದೇವಾಲಯದ ಗರ್ಭಾ ಗೃಹ, ಕುಂದಾ ಕೊಳ, ಭೋಗ್ ಘರ್, ನಾಟ್ ಮಂದಿರ, ಒಳಗಿನ ಚಾಟಲ್ ಮತ್ತು ಹೊರಗಿನ ಗೋಡೆಗಳನ್ನು ಪುನಶ್ಚೇತನಗೊಳಿಸಲಾಗುತ್ತದೆ" ಎಂದು ವರದಿಯಾಗಿದೆ.

ಗರ್ಭಾ ಗೃಹ, ನಾಟ್ ಮಂದಿರ ಮತ್ತು ಭೋಗ್ ಘರ್ ಪಾರಂಪರಿಕ ಕಟ್ಟಡಗಳ 'ಎ ಗ್ರೇಟ್' ಪಟ್ಟಿಯಲ್ಲಿರುವುದರಿಂದ, ಪಾರಂಪರಿಕ ಅಂಶವನ್ನು ಗಮನದಲ್ಲಿಟ್ಟುಕೊಂಡು ಪುನಶ್ಚೇತನ ಕಾರ್ಯ ಮಾಡಲಾಗುವುದು. ಕೆಎಂಸಿಯ ಹೆರಿಟೇಜ್ ಶಾಖೆಯ ಅನುಮೋದನೆಯೊಂದಿಗೆ ಟೈಲ್ಸ್ ಅಳವಡಿಸಲಾಗುವುದು. ಪ್ರವೇಶ ದ್ವಾರದಿಂದ ಆದಿಗಂಗೆಯವರೆಗಿನ ರಸ್ತೆಯನ್ನು ಸುಂದರಗೊಳಿಸುವ ಯೋಜನೆಯೂ ಇದೆ.

ಪುರಸಭೆಯಲ್ಲಿ ನಡೆದ ಸಭೆಯ ನಂತರ ಈಟಿವಿ ಭಾರತದೊಂದಿಗೆ ಮಾತನಾಡಿದ ದೇವಸ್ಥಾನ ಸಮಿತಿ ಸದಸ್ಯ ಬಬ್ಲು ಹಲ್ದರ್ ಮಾತನಾಡಿ "ಕೆಲವು ದಿನಗಳ ಹಿಂದೆ ಪ್ರಾಥಮಿಕ ಚರ್ಚೆ ನಡೆದಿದ್ದು, ಕಾಮಗಾರಿ ಶೀಘ್ರ ಆರಂಭವಾಗಲಿದೆ. ಸ್ಕೈ ವಾಕ್ ನಂತೆ ದೇವಸ್ಥಾನದ ಜೀರ್ಣೋದ್ಧಾರ, ಅಲಂಕಾರ ಕಾರ್ಯವೂ ನಡೆಯಲಿದೆ. ಈ ವರ್ಷ ಡಿಸೆಂಬರ್‌ನೊಳಗೆ ಪೂರ್ಣಗೊಳಿಸಲಾಗುತ್ತದೆ" ಎಂದು ತಿಳಿಸಿದರು.

ಜವಾಬ್ದಾರಿ ಹಸ್ತಾಂತರದ ಬಗ್ಗೆ ಪ್ರಶ್ನೆ: ಈ ಕಾಮಗಾರಿಯ ಉಸ್ತುವಾರಿಯನ್ನು ಬಹಳ ಕಾಲ ಕಲ್ಕತ್ತಾ ಕಾರ್ಪೊರೇಷನ್​ಗೆ ವಹಿಸಲಾಗಿತ್ತು. ಪಾಲಿಕೆ ಕಾಮಗಾರಿಯನ್ನು ಸ್ವಲ್ಪ ಮುಂದಕ್ಕೆ ಕೊಂಡೊಯ್ದಿದೆ. ಇಂತಹ ಪರಿಸ್ಥಿತಿಯಲ್ಲಿ ರಿಲಯನ್ಸ್ ಕೈಗೆ ಜವಾಬ್ದಾರಿ ಹಸ್ತಾಂತರದ ಬಗ್ಗೆ ಪ್ರಶ್ನೆಗಳು ಉದ್ಭವಿಸಿವೆ. ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಬಹಳ ದಿನಗಳಿಂದ ನಡೆಯುತ್ತಿತ್ತು. ಇತ್ತೀಚೆಗಷ್ಟೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ವೇಳೆ ನವೀಕರಣ ಕಾಮಗಾರಿಯನ್ನು ಪರಿಶೀಲಿಸಿದ್ದರು. ಉಳಿದ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿಗಳು ಆದೇಶಿಸಿದ್ದರು.

ಅದಲ್ಲದೇ ಕೆಲ ದಿನಗಳ ಹಿಂದೆ ರಾಜ್ಯದ ಮುಖ್ಯ ಕಾರ್ಯದರ್ಶಿ ಕೂಡ ಸ್ಕೈವಾಕ್ ಬಗ್ಗೆ ಪ್ರತ್ಯೇಕ ಸಭೆ ನಡೆಸಿದ್ದರು. ಅಲ್ಲಿಯೂ ಉಳಿದ ಕಾಮಗಾರಿ ಪೂರ್ಣಗೊಳಿಸುವಂತೆ ಆದೇಶಿಸಿದ್ದರು. ಈಗ ಪುನಶ್ಚೇತನ ಕಾರ್ಯ ಹಗಲು ರಾತ್ರಿ ನಡೆಯುತ್ತಿದೆ. ಎಲ್ಲಿ ಮತ್ತು ಎಷ್ಟು ಕಾಮಗಾರಿ ನಡೆದಿದೆ ಎಂಬುದನ್ನು ಪರಿಶೀಲಿಸಿ. ಉಳಿದ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ರಾಜ್ಯ ಆಡಳಿತ ಮಂಡಳಿ ಆದೇಶ ನೀಡಿದೆ. ಈ ಮಧ್ಯೆ ರಿಲಯನ್ಸ್ ನವೀಕರಣದಿಂದ ಪ್ರಾರಂಭವಾಗುವ ಸೌಂದರ್ಯೀಕರಣದ ಜವಾಬ್ದಾರಿಯನ್ನು ತೆಗೆದುಕೊಳ್ಳಲಿದೆ.

ಕಾಳಿಘಾಟ್ ದೇವಾಲಯದ ಬಗ್ಗೆ ಒಂದಿಷ್ಟು ಮಾಹಿತಿ..:ಪುರಾತನವಾದ ಮತ್ತು ಅತ್ಯಂತ ಪ್ರಸಿದ್ಧವಾದ ಶಕ್ತಿ ಪೀಠಗಳಲ್ಲಿ ಒಂದಾಗಿದೆ. ಕಾಳಿಘಾಟ್ ದೇವಾಲಯದಲ್ಲಿ ಹಿಂದೂ ದೇವತೆ ಕಾಳಿಯನ್ನು ಪೂಜಿಸಲಾಗುತ್ತದೆ. ದೇವಾಲಯವು ಹೂಗ್ಲಿ ನದಿಯ ದಡದಲ್ಲಿ ನೆಲೆಸಿದೆ. ಆದರೆ ನದಿ ತನ್ನ ಮಾರ್ಗವನ್ನು ಬದಲಿಸಿದೆ. ಹಾಗಾಗಿ ಇದು ಪ್ರಸ್ತುತ ಹೂಗ್ಲಿಗೆ ಹೋಗುವ ಕಿರಿದಾದ ಕಾಲುವೆಯ ಪಕ್ಕದಲ್ಲಿದೆ.

ಇದನ್ನೂ ಓದಿ:ಗಾಳಿ, ಮಳೆಯಿಂದ ಉಜ್ಜಯಿನಿಯ ಸಪ್ತಋಷಿ ಪ್ರತಿಮೆಗಳಿಗೆ ಹಾನಿ: ಬಿಜೆಪಿ ವಿರುದ್ಧ ಕಾಂಗ್ರೆಸ್​ ವಾಗ್ದಾಳಿ

ABOUT THE AUTHOR

...view details