ಕರ್ನಾಟಕ

karnataka

ರಿಯಲ್​ ಎಸ್ಟೇಟ್​ ವ್ಯವಹಾರದಲ್ಲಿ ನಷ್ಟ.. ಪತ್ನಿ, ಮಕ್ಕಳಿಗೆ ವಿಷಹಾಕಿ ನೇಣಿಗೆ ಶರಣಾದ ವ್ಯಕ್ತಿ

By

Published : Aug 21, 2022, 8:37 PM IST

ವ್ಯವಹಾರದಲ್ಲಿ ನಷ್ಟ ಅನುಭವಿಸಿದ ಕಾರಣ ಮತ್ತು ಸಾಲಗಾರರ ಕಿರುಕುಳ ತಡೆಯಲಾಗದೇ ಪತ್ನಿ ಮತ್ತು ಮಕ್ಕಳಿಗೆ ವಿಷಹಾಕಿ ತಾನು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ದುರಂತ ಘಟನೆ ತೆಲಂಗಾನದ ನಿಜಾಮಾಬಾದ್‌ನಲ್ಲಿ ನಡೆದಿದೆ.

A Realtor family suicide along with two children in Telangana
ಮಕ್ಕಳು ಮತ್ತು ಪತ್ನಿಗೆ ವಿಷಹಾಕಿ ತಾನು ನೇಣಿಗೆ ಶರಣಾದ ಪತಿ

ನಿಜಾಮಾಬಾದ್‌(ತೆಲಂಗಾಣ) :ನಗರದ ಹೋಟೆಲ್‌ವೊಂದರಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದಿಲಾಬಾದ್ ಮೂಲದ ಕೊತಕೋಟಾ ಸೂರ್ಯಪ್ರಕಾಶ್, ಅವರ ಪತ್ನಿ ಪ್ರತ್ಯೂಷಾ ಹಾಗೂ ಇಬ್ಬರು ಮಕ್ಕಳು ಮೃತರು.

ಸೂರ್ಯಪ್ರಕಾಶ್ ರಿಯಲ್​ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ವ್ಯವಹಾರದಲ್ಲಿ ನಷ್ಟ ಅನುಭವಿಸಿದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗ್ತಿದೆ. ಆತ್ಮಹತ್ಯೆ ಮಾಡಿಕೊಂಡ ಹೋಟೆಲ್​ನ ರೂಮ್​ನಲ್ಲಿ ಡೆತ್​ನೋಟ್​ ಸಿಕ್ಕಿರುವ ಬಗ್ಗೆ ಪೊಲೀಸರು ತಿಳಿಸಿದ್ದಾರೆ.

ಆದಿಲಾಬಾದ್​ನ ಸೂರ್ಯ ಪ್ರಕಾಶ್ ಹಲವು ವರ್ಷಗಳಿಂದ ಹೈದರಾಬಾದ್​ನಲ್ಲಿ ನೆಲೆಸಿದ್ದರು. 15 ದಿನಗಳ ಹಿಂದೆ ನಿಜಾಮಾಬಾದ್‌ಗೆ ಬಂದಿದ್ದ ಅವರು ಖಾಸಗಿ ಹೋಟೆಲ್‌ನಲ್ಲಿ ಕುಟುಂಬ ಸಮೇತ ತಂಗಿದ್ದರು. ಹೆಂಡತಿ ಮಕ್ಕಳಿಗೆ ಕ್ರಿಮಿನಾಶಕ ಕುಡಿಸಿ ನಂತರ ಸೂರ್ಯ ಪ್ರಕಾಶ್ ನೇಣಿಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಡೆತ್​ನೋಟ್​ ಮತ್ತು ಸಂಬಂಧಿಕರ ದೂರು ಆಧರಿಸಿ ತನಿಖೆ ನಡೆಸಲಾಗುವುದು ಎಂದು ಎಸಿಪಿ ವೆಂಕಟೇಶ್ವರ್ ತಿಳಿಸಿದ್ದಾರೆ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ನಿಜಾಮಾಬಾದ್ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

ನಿನ್ನೆ ರಾತ್ರಿ ಹೋಟೆಲ್ ಒಂದರಲ್ಲಿ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೂರ್ಯಪ್ರಕಾಶ್ ಅವರು ಬರೆದಿರುವ ಡೆತ್​ನೋಟ್​ ಸಿಕ್ಕಿದೆ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಪಾಲುದಾರರು ಮತ್ತು ಲೇವಾದೇವಿದಾರರ ಕಿರುಕುಳಕ್ಕೆ ಕೆಲವು ಆಸ್ತಿಗಳನ್ನು ಬರೆದುಕೊಟ್ಟಿದ್ದರು. ಆದರೂ ಕಿರುಕುಳ ನಿಲ್ಲದ ಕಾರಣ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಡೆತ್​ನೋಟ್​ನಲ್ಲಿ ಬರೆದಿದ್ದಾರೆ. ಇದನ್ನು ಆಧರಿಸಿ ತನಿಖೆ ನಡೆಸುತ್ತೇವೆ. - ನಿಜಾಮಾಬಾದ್ ಎಸಿಪಿ ವೆಂಕಟೇಶ್ವರ್

ABOUT THE AUTHOR

...view details