ಕರ್ನಾಟಕ

karnataka

ETV Bharat / bharat

ರಜಿನಿ ಚುನಾವಣೆ ಪ್ರವೇಶ ಇನ್ನೂ ನಿಗೂಢ: ಅಡ್ಡಗೋಡೆ ಮೇಲೆ ದೀಪ ಇಟ್ಟ ತಲೈವಾ

ಚುನಾವಣೆ ಸ್ಪರ್ಧೆ ಕುರಿತಂತೆ ಸೂಪರ್​ಸ್ಟಾರ್ ರಜಿನಿಕಾಂತ್ ಸ್ಪಷ್ಟ ನಿಲುವು ಪ್ರಕಟಿಸದೇ ಸುಮ್ಮನಾಗಿದ್ದಾರೆ. ಇಂದು ಕರೆದಿದ್ದ ಸಭೆಯ ಬಳಿಕ ಸ್ಪಷ್ಟ ಮಾಹಿತಿ ನೀಡದೇ ಮುಂದಿನ ನಿರ್ಧಾರ ತಿಳಿಸುತ್ತೇವೆ ಎಂದು ತೆರಳಿದ್ದಾರೆ.

By

Published : Nov 30, 2020, 12:46 PM IST

Updated : Nov 30, 2020, 7:35 PM IST

Actor Rajinikant
ನಟ ರಜಿನಿಕಾಂತ್

ಚೆನ್ನೈ :2021ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಸೂಪರ್​ಸ್ಟಾರ್ ರಜಿನಿಕಾಂತ್​ ತಮ್ಮ ನಿರ್ಧಾರವನ್ನು ಘೋಷಿಸದೇ ಮತ್ತೆ ನಿಗೂಢತೆ ಕಾಯ್ದುಕೊಂಡಿದ್ದಾರೆ. ಇಂದು ನಡೆದ ಕಾರ್ಯದರ್ಶಿಗಳ ಸಭೆಯಲ್ಲಿ ನಿರ್ಧಾರ ಕೈಗೊಳ್ಳುವ ಬಗ್ಗೆ ತೀರ್ಮಾನಿಸಲಾಗುವುದು ಎನ್ನಲಾಗಿತ್ತು. ಆದರೆ, ಸಭೆಯ ಬಳಿಕ ಮಾತನಾಡಿ ಈ ಬಗ್ಗೆ ಮುಂದಿನ ದಿನಗಳಲ್ಲಿ ನಿರ್ಧಾರ ಪ್ರಕಟಿಸುತ್ತೇವೆ ಎಂದಿದ್ದಾರೆ.

ನನ್ನ ರಾಜಕೀಯ ಪ್ರವೇಶ ಕುರಿತು ಸದ್ಯದಲ್ಲೇ ಮಾಹಿತಿ ನೀಡಲಿದ್ದೇನೆ ಎಂದು ನಟ ರಜಿನಿಕಾಂತ್ ತಿಳಿಸಿದ್ದಾರೆ. ಇಂದು ನಡೆದ ಪಕ್ಷ ಕಾರ್ಯದರ್ಶಿಗಳ ಸಭೆ ಬಳಿಕ ಮಾತನಾಡಿದ ಅವರು, ರಾಜಕೀಯ ಪ್ರವೇಶ ಕುರಿತು ಮುಂದೆ ನಿರ್ಧಾರ ಮಾಡಲಿದ್ದೇನೆ ಎಂದಿದ್ದಾರೆ.

ರಜಿನಿ ರಾಜಕೀಯ ಪ್ರವೇಶ ಕುರಿತು ಪ್ರತಿಕ್ರಿಯೆ

ಪಕ್ಷದ ಕಾರ್ಯದರ್ಶಿಗಳ ಅಭಿಮತ ಕೇಳಿದ್ದೇನೆ, ನನ್ನ ಪರವಾಗಿ ನಿಲ್ಲುವುದಾಗಿ ತಿಳಿಸಿದ್ದಾರೆ. ಪಕ್ಷದ ಕುರಿತ ನನ್ನ ಅಭಿಪ್ರಾಯವನ್ನು ಅವರೊಂದಿಗೆ ಹಂಚಿಕೊಂಡಿದ್ದೇನೆ. ಹೀಗಾಗಿ ನನ್ನ ರಾಜಕೀಯ ಪ್ರವೇಶ ಇಷ್ಟೆರಲ್ಲೇ ತಿಳಿಸಲಿದ್ದೇನೆ ಎಂದಿದ್ದಾರೆ.

ಪಕ್ಷದ ಕಾರ್ಯದರ್ಶಿಗಳೊಂದಿಗಿನ ಸಭೆ ಅಂತ್ಯ: ಸದ್ಯದಲ್ಲೆ ನಿರ್ಧಾರ ಪ್ರಕಟಿಸಲಿರುವ ರಜಿನಿ

ತಮಿಳುನಾಡಿನಲ್ಲಿ ಕರುಣಾನಿಧಿ ಹಾಗೂ ಜಯಲಲಿತಾ ರಾಜಕಾರಣದ ಬಳಿಕ ರಜಿನಿಕಾಂತ್ ರಾಜಕೀಯ ಪ್ರವೇಶ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಕಳೆದ 2017ರ ಡಿಸೆಂಬರ್​ನಲ್ಲಿ ರಜಿನಿ ರಾಜಕೀಯ ಪ್ರವೇಶ ಕುರಿತು ಸುಳಿವು ಬಿಟ್ಟುಕೊಟ್ಟಿದ್ದರು. ಆದರೆ, ಅಲ್ಲಿಂದ ಯಾವುದೇ ಪಕ್ಷದೊಂದಿಗೆ ಗುರುತಿಸಿಕೊಳ್ಳದೆ, ಚುನಾವಣೆಗೂ ಸ್ಪರ್ಧಿಸದೇ ಕುತೂಹಲ ಮೂಡಿಸಿತ್ತು.

2021ರ ಚುನಾವಣೆ ಸ್ಪರ್ಧೆ ಕುರಿತು ನಿರ್ಧಾರ ಪ್ರಕಟಿಸಲೆಂದೇ ಇಂದು ಮಕ್ಕಳ್ ಮಂದ್ರಂ ಪಕ್ಷದ ಜಿಲ್ಲಾ ಕಾರ್ಯದರ್ಶಿಗಳ ಸಭೆ ಕರೆದಿದ್ದರು. ಈಗ ಸಭೆ ಅಂತ್ಯಗೊಂಡ ಬಳಿಕ ಮಾತನಾಡಿ ಮತ್ತೊಮ್ಮೆ ಅಡ್ಡಗೋಡೆಯ ಮೇಲೆ ದೀಪವಿಟ್ಟು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ.

ಇದನ್ನೂ ಓದಿ:ರಾಜಕೀಯ ಪ್ರವೇಶ ಕುರಿತು ರಜಿನಿ ಭವಿಷ್ಯ ತೀರ್ಮಾನ.. ಕಾರ್ಯದರ್ಶಿಗಳ ಸಭೆ ನಡೆಸುತ್ತಿರುವ ತಲೈವಾ

Last Updated : Nov 30, 2020, 7:35 PM IST

ABOUT THE AUTHOR

...view details