ಕರ್ನಾಟಕ

karnataka

By

Published : Feb 6, 2021, 12:50 PM IST

ETV Bharat / bharat

ಕೃಷ್ಣಮೃಗ ಬೇಟೆ ಪ್ರಕರಣ: ಸಲ್ಮಾನ್​ಖಾನ್​ಗೆ ಹಾಜರಾತಿ ವಿನಾಯ್ತಿ ನೀಡಿದ ಕೋರ್ಟ್​

ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ರಾಜಸ್ಥಾನ ನ್ಯಾಯಾಲಯ ಸಲ್ಮಾನ್ ಖಾನ್​ಗೆ ವೈಯಕ್ತಿಕ ಹಾಜರಾತಿಯಿಂದ ವಿನಾಯಿತಿ ನೀಡಿದೆ. ವರ್ಚುಯಲ್ ಮೂಲಕ ಸಲ್ಮಾನ್ ಜಾಮೀನು ಬಾಂಡ್ ಸಲ್ಲಿಸಬಹುದು.

Rajasthan latest breaking news of today 6 February 2021
ಸಲ್ಮಾನ್​ ಖಾನ್​ಗೆ​ ಹಾಜರಾತಿಗೆ ವಿನಾಯ್ತಿ ನೀಡಿದ ಕೋರ್ಟ್​

ಜೋಧಪುರ್​/ರಾಜಸ್ಥಾನ:ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ರಾಜಸ್ಥಾನ್ ಹೈಕೋರ್ಟ್‌ ನ ಜೋಧ್​ಪುರ್​ ಮುಖ್ಯ ಪೀಠದಿಂದ ಕೊಂಚ ರಿಲೀಫ್​ ಸಿಕ್ಕಂತಾಗಿದೆ.

ಸಲ್ಮಾನ್ ಖಾನ್ ಇನ್ನು ಮುಂದೆ ಜೋಧ್ಪುರ ಜಿಲ್ಲಾ ನ್ಯಾಯಾಲಯಕ್ಕೆ ಖುದ್ದಾಗಿ ಹಾಜರಾಗಬೇಕಿಲ್ಲ. ಅವರು ವರ್ಚುಯಲ್ ಮುಖೇನ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಹಾಜರಾಗಲು ಅವಕಾಶ ನೀಡಲಾಗಿದೆ. ಮುಖ್ಯ ನ್ಯಾಯಮೂರ್ತಿ ಇಂದ್ರಜಿತ್ ಮಹಾಂತಿ ಮತ್ತು ನ್ಯಾಯಾಧೀಶ ಮನೋಜ್ ಕುಮಾರ್ ಗರ್ಗ್ ಅವರ ವಿಭಾಗೀಯ ನ್ಯಾಯಪೀಠ, ಸಲ್ಮಾನ್ ಖಾನ್ ಪರವಾಗಿ ಅರ್ಜಿಯನ್ನು ವಿಚಾರಣೆ ನಡೆಸಿದ್ದು, ಸಲ್ಮಾನ್​​ಗೆ ಹಾಜರಾತಿಗೆ ವಿನಾಯ್ತಿ ನೀಡಿದೆ.

ಪ್ರಕರಣದ ವಿಚಾರಣೆಯ ವೇಳೆ ರಾಜ್ಯ ಸರ್ಕಾರದ ಪರವಾಗಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ಫರ್ಜಂದ್ ಅಲಿ ಅವರು ತಮ್ಮ ಪರವಾಗಿ ಮಂಡಿಸಿದರು. ಸಲ್ಮಾನ್ ಖಾನ್ ಪರವಾಗಿ ಹಾಜರಾದ ವಕೀಲ ಹಸ್ತಿಮಲ್ ಸರಸ್ವತ್ ಅವರು ಸಲ್ಮಾನ್​ ಖಾನ್​ಗೆ​ ಹಾಜರಾತಿಗೆ ವಿನಾಯ್ತಿ ನೀಡುವಂತೆ ಕೋರಿದ್ದು, ಅದನ್ನು ನ್ಯಾಯಾಲಯವು ಅಂಗೀಕರಿಸಿತು, ವರ್ಚುಯಲ್ ಬಾಂಡ್ ಅನ್ನು ಪ್ರಸ್ತುತಪಡಿಸಲು ಅವಕಾಶ ನೀಡಿತು. ಅದೇ ಸಮಯದಲ್ಲಿ, ಮುಂಬರುವ ಯಾವುದೇ ಮೇಲ್ಮನವಿಯ ವಿಚಾರಣೆಗೆ ಹಾಜರಾಗುವಂತೆ ಸಲ್ಮಾನ್​ ಖಾನ್​​ಗೆ ಕೋರ್ಟ್​ ಸೂಚನೆ ನೀಡಿದೆ.

ಇದನ್ನೂ ಓದಿ:ಕೃಷ್ಣ ಮೃಗ ಬೇಟೆ ಪ್ರಕರಣ: ಸಲ್ಮಾನ್​ ಖಾನ್​ಗೆ ರಿಲೀಫ್​​​​

ABOUT THE AUTHOR

...view details