ಕರ್ನಾಟಕ

karnataka

ಮಾನನಷ್ಟ ಮೊಕದ್ದಮೆ: ರಾಹುಲ್ ಗಾಂಧಿ ಪರವಾಗಿ ಮಂಡಿಸಿದ ಅಂಶಗಳ ಪಟ್ಟಿ..

By

Published : Apr 29, 2023, 4:48 PM IST

ಗುಜರಾತ್ ಸೆಷನ್ಸ್ ನ್ಯಾಯಾಲಯದಿಂದ ಪರಿಹಾರ ಸಿಗದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಗುಜರಾತ್ ಹೈಕೋರ್ಟಿನಿಂದ ಪರಿಹಾರ ಸಿಗುತ್ತದೋ ಅಥವಾ ಹಿನ್ನಡೆಯಾಗುತ್ತದೋ ಕಾದು ನೋಡಬೇಕಿದೆ.

Rahul Gandhi
ರಾಹುಲ್ ಗಾಂಧಿ

ಅಹಮದಾಬಾದ್ (ಗುಜರಾತ್): ರಾಹುಲ್ ಗಾಂಧಿ ಅವರ 'ಮೋದಿ ಉಪನಾಮ' ಹೇಳಿಕೆಯನ್ನು ಒಳಗೊಂಡ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆ ಪ್ರಕ್ರಿಯೆಯು ಕಾಂಗ್ರೆಸ್ ನಾಯಕನಿಗೆ "ಗಂಭೀರವಾಗಿ ದೋಷಪೂರಿತ ಸಂಗತಿಗಳ ಆಧಾರದ ಮೇಲೆ" ಶಿಕ್ಷೆಗೆ ಕಾರಣವಾಯಿತು ಎಂದು ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಶನಿವಾರ ಗುಜರಾತ್ ಹೈಕೋರ್ಟ್‌ಗೆ ತಿಳಿಸಿದರು.

ಸಿಂಘ್ವಿ ಅವರು ಹೈಕೋರ್ಟ್‌ನಲ್ಲಿ ರಾಹುಲ್​ ಗಾಂಧಿ ಪರವಾಗಿ ವಾದ ಮಂಡಿಸುವಾಗ ಈ ಹೇಳಿಕೆ ನೀಡಿದ್ದಾರೆ. ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ತಮ್ಮ ಶಿಕ್ಷೆಗೆ ತಡೆ ನೀಡದಿರುವ ಸೂರತ್ ಸೆಷನ್ಸ್ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ರಾಹುಲ್ ಗಾಂಧಿ ಸಲ್ಲಿಸಿರುವ ಅರ್ಜಿಯನ್ನು ಹೈಕೋರ್ಟ್ ವಿಚಾರಣೆ ನಡೆಸುತ್ತಿದೆ. ಸೆಷನ್ಸ್ ನ್ಯಾಯಾಲಯದ ಏಪ್ರಿಲ್ 20ರ ಆದೇಶವನ್ನು ಪ್ರಶ್ನಿಸಿ ಗಾಂಧಿ ಸಲ್ಲಿಸಿದ ಕ್ರಿಮಿನಲ್ ಪರಿಷ್ಕರಣೆ ಅರ್ಜಿಯನ್ನು ನ್ಯಾಯಮೂರ್ತಿ ಹೇಮಂತ್ ಪ್ರಚಕ್ ಆಲಿಸಿದರು.

ವಿಚಾರಣೆಯಿಂದ ಹಿಂದೆ ಸರಿದಿದ್ದ ನ್ಯಾಯಮೂರ್ತಿ ಗೋಪಿ: ಹೈಕೋರ್ಟ್ ಈ ಅರ್ಜಿಯನ್ನು ಅಂಗೀಕರಿಸಿದರೆ, ರಾಹುಲ್​ ಗಾಂಧಿಯನ್ನು ಮತ್ತೆ ಸಂಸತ್ತಿನ ಸದಸ್ಯರನ್ನಾಗಿ ಮಾಡಲು ಅದು ದಾರಿ ಮಾಡಿಕೊಡುತ್ತದೆ. ಇದಕ್ಕೂ ಮುನ್ನ, ನ್ಯಾಯಮೂರ್ತಿ ಗೀತಾ ಗೋಪಿ ಅವರ ನ್ಯಾಯಾಲಯದ ಮುಂದೆ ತುರ್ತು ವಿಚಾರಣೆಗಾಗಿ ವಿಷಯವನ್ನು ಉಲ್ಲೇಖಿಸಲಾಗಿತ್ತು. ನಂತರ ನ್ಯಾಯಮೂರ್ತಿ ಗೋಪಿ ಅವರು ವಿಚಾರಣೆಯಿಂದ ಹಿಂದೆ ಸರಿದರು ಮತ್ತು ನಂತರ ಪ್ರಕರಣವನ್ನು ನ್ಯಾಯಮೂರ್ತಿ ಪ್ರಚಕ್ ಅವರಿಗೆ ವಹಿಸಲಾಯಿತು.

ಹೈಕೋರ್ಟ್‌ನಲ್ಲಿ ವಾದ ಮಂಡಿಸಿದ ವಕೀಲ ಸಿಂಘ್ವಿ:ವಿಚಾರಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ "ಗಂಭೀರ ದೋಷಪೂರಿತ ಸಂಗತಿಗಳು" ಶಿಕ್ಷೆಗೆ ಕಾರಣ ಎಂದು ವಕೀಲ ಸಿಂಘ್ವಿ ಅವರು ಹೈಕೋರ್ಟ್‌ನಲ್ಲಿ ವಾದಿಸಿದರು. ಒಬ್ಬ ಸಾರ್ವಜನಿಕ ಸೇವಕ ಅಥವಾ ಸಂಸದನ ವಿಷಯದಲ್ಲಿ, ಅದು ಆ ವ್ಯಕ್ತಿಗೆ ಮತ್ತು ಕ್ಷೇತ್ರಕ್ಕೆ ತುಂಬಾ ಗಂಭೀರವಾದ ಪರಿಣಾಮಗಳನ್ನು ಉಂಟುಮಾಡುತ್ತದೆ. ಅದನ್ನು ನಂತರ ಬದಲಾಯಿಸಲಾಗುವುದಿಲ್ಲ. ಇದು ಮರುಚುನಾವಣೆಯ ಬಗ್ಗೆ ಕಠಿಣ ಪರಿಣಾಮಗಳನ್ನು ಹೊಂದಿದೆ ಎಂದು ವಾದ ಮಂಡಿಸಿದರು.

ಇದನ್ನೂ ಓದಿ:ಆಪರೇಷನ್ ಕಾವೇರಿ: ಸುಡಾನ್​ನಿಂದ ಶಿವಮೊಗ್ಗಕ್ಕೆ ಬಂದ ಹಕ್ಕಿಪಿಕ್ಕಿ ಜನರು

ಸದ್ಯ ಜಾಮೀನಿನ ಮೇಲೆ ಹೊರಗಿರುವ ರಾಹುಲ್ ಗಾಂಧಿ:ಗುಜರಾತ್‌ನಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಶಾಸಕ ಪೂರ್ಣೇಶ್ ಮೋದಿ ಅವರು 2019ರಲ್ಲಿ ಸಲ್ಲಿಸಿದ ಪ್ರಕರಣದಲ್ಲಿ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 499 ಮತ್ತು 500 (ಕ್ರಿಮಿನಲ್ ಮಾನನಷ್ಟ) ಅಡಿಯಲ್ಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷರನ್ನು ಮಾರ್ಚ್ 23 ರಂದು ಸೂರತ್‌ನ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ದೋಷಿ ಎಂದು ತೀರ್ಪು ನೀಡಿದೆ.

ಇದರಿಂದ ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ತೀರ್ಪಿನ ನಂತರ, ಪ್ರಜಾಪ್ರತಿನಿಧಿ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಗಾಂಧಿ ಅವರನ್ನು ಸಂಸತ್ತಿನ ಸದಸ್ಯತ್ವದಿಂದ ಅನರ್ಹಗೊಳಿಸಲಾಯಿತು. ರಾಹುಲ್ ಗಾಂಧಿ ಅವರು 2019ರಲ್ಲಿ ಕೇರಳದ ವಯನಾಡಿನಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. ಏಪ್ರಿಲ್ 20 ರಂದು, ಸೂರತ್‌ನ ಸೆಷನ್ಸ್ ನ್ಯಾಯಾಲಯವು ಕಾಂಗ್ರೆಸ್ ನಾಯಕನ ಶಿಕ್ಷೆಗೆ ತಡೆ ನೀಡುವ ಅವರ ಮನವಿಯನ್ನು ತಿರಸ್ಕರಿಸಿತು. ಈ ಪ್ರಕರಣದಲ್ಲಿ ರಾಹುಲ್ ಗಾಂಧಿ ಸದ್ಯ ಜಾಮೀನಿನ ಮೇಲೆ ಹೊರಗಿದ್ದಾರೆ.

ಇದನ್ನೂ ಓದಿ:ಕಾರಿನಲ್ಲಿ ಕೂರುವ ವೇಳೆ ಸ್ಲಿಪ್​​​ ಆದ ಸಿದ್ದರಾಮಯ್ಯ: ನೀರು ಕೊಟ್ಟು ಆರೈಕೆ ಮಾಡಿದ ಸಹಾಯಕ

ABOUT THE AUTHOR

...view details