ರಾಯಪೂರ( ಛತ್ತೀಸ್ಗಢ): ಅಮರ್ ಜವಾನ್ ಜ್ಯೋತಿ' ಶಂಕುಸ್ಥಾಪನೆಗಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಛತ್ತೀಸ್ಗಢದ ರಾಯ್ಪುರಕ್ಕೆ ಭೇಟಿ ನೀಡಲಿದ್ದಾರೆ. ಇದಲ್ಲದೇ, ರಾಜೀವ್ ಗಾಂಧಿ ಗ್ರಾಮೀಣ ಭೂಮಿಹೀನ್ ಕೃಷಿ ಮಜ್ದೂರ್ ಯೋಜನೆಗೂ ಅವರು ಚಾಲನೆ ನೀಡಲಿದ್ದಾರೆ.
ಅಮರ್ ಜವಾನ್ ಜ್ಯೋತಿಯನ್ನು 4 ನೇ ಬೆಟಾಲಿಯನ್ ಆವರಣದಲ್ಲಿ ನಿರ್ಮಾಣ ಮಾಡಲು ನಿರ್ಧರಿಸಲಾಗಿದ್ದು, ಹುತಾತ್ಮರ ಗೌರವಾರ್ಥವಾಗಿ ಅಮರ್ ಜವಾನ್ ಜ್ಯೋತಿ ಬೆಳಗಿಸಲಾಗುವುದು ಎಂದು ಅಧಿಕೃತ ಮಾಹಿತಿಗಳಿಂದ ಗೊತ್ತಾಗಿದೆ.
ಈ ನಡುವೆ, ಕಾಂಗ್ರೆಸ್ ಪಕ್ಷವು ತ್ಯಾಗದ ಇತಿಹಾಸವನ್ನು ಹೊಂದಿದೆ ಮತ್ತು ದೇಶ ಸೇವೆಗಾಗಿ ಸರ್ವಸ್ವವನ್ನು ಅರ್ಪಿಸಿರುವ ಅನೇಕ ಮಹಾನ್ ನಾಯಕರನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ ಪಕ್ಷಕ್ಕೆ ತ್ಯಾಗವನ್ನು ಹೇಗೆ ಗೌರವಿಸಬೇಕು ಎಂದು ತಿಳಿದಿದೆ. ಹುತಾತ್ಮರನ್ನು ಗೌರವಿಸದ ಯಾವುದೇ ಸಮಾಜಕ್ಕೂ ಬೆಲೆ ಇರುವುದಿಲ್ಲ ಎಂಬುದಕ್ಕೆ ಇತಿಹಾಸ ಸಾಕ್ಷಿಯಾಗಿದೆ ಎಂದು ಮುಖ್ಯಮಂತ್ರಿ ಭೂಪೇಶ್ ಬಘೇಲ್ ಹೇಳಿದ್ದಾರೆ.