ಕರ್ನಾಟಕ

karnataka

By

Published : May 3, 2021, 12:52 PM IST

ETV Bharat / bharat

'ಇದು ಸಾವೋ ಅಥವಾ ಕೊಲೆಯೋ?': ಚಾಮರಾಜನಗರ ಆಕ್ಸಿಜನ್​ ದುರಂತಕ್ಕೆ ರಾಹುಲ್​ ಕಿಡಿ

ಚಾಮರಾಜನಗರ ಆಕ್ಸಿಜನ್​ ದುರಂತಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಂಬನಿ ಮಿಡಿದಿದ್ದು, ಆಡಳಿತ ವ್ಯವಸ್ಥೆ ಎಚ್ಚರಗೊಳ್ಳಲು ಇನ್ನೆಷ್ಟು ಸಾವು-ನೋವುಗಳಾಗಬೇಕೆಂದು ಕೇಳಿದ್ದಾರೆ.

Rahul Gandhi reaction on Chamarajanagar Oxygen tragedy
ಚಾಮರಾಜನಗರ ಆಕ್ಸಿಜನ್​ ದುರಂತಕ್ಕೆ ರಾಹುಲ್​ ಗಾಂಧಿ ಕಿಡಿ

ಚಾಮರಾಜನಗರ/ನವದೆಹಲಿ: ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿನ ದುರಂತಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಿಡಿಕಾರಿದ್ದು, ಇದು ಸಾವೋ ಅಥವಾ ಕೊಲೆಯೋ ಎಂದು ಪ್ರಶ್ನಿಸಿದ್ದಾರೆ.

ಈ ಕುರಿತು, ಟ್ವೀಟ್ ಮಾಡಿರುವ ರಾಗಾ, ಆಡಳಿತ ವ್ಯವಸ್ಥೆ ಎಚ್ಚರಗೊಳ್ಳಲು ಇನ್ನೆಷ್ಟು ಸಾವು-ನೋವುಗಳಾಗಬೇಕೆಂದು ಹೇಳಿ ಮೃತರ ಕುಟುಂಬಗಳಿಗೆ ಸಾಂತ್ವನ ತಿಳಿಸಿದ್ದಾರೆ.

ಇದನ್ನೂ ಓದಿ: ಚಾಮರಾಜನಗರದ 24 ಜನರ ಸಾವಿಗೆ ಯಾರು ಹೊಣೆ?.. ಸರ್ಕಾರದ ವಿರುದ್ಧ ಡಿಕೆಶಿ ಕಿಡಿ

ಚಾಮರಾಜನಗರ ಕೋವಿಡ್​ ಆಸ್ಪತ್ರೆಯಲ್ಲಿ 24 ಗಂಟೆಗಳಲ್ಲಿ 24 ರೋಗಿಗಳು ಮೃತಪಟ್ಟಿದ್ದು, ಇವರಲ್ಲಿ 13 ಮಂದಿ ಆಕ್ಸಿಜನ್ ಕೊರತೆಯಿಂದ ಕೊನೆಯುಸಿರೆಳೆದಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ABOUT THE AUTHOR

...view details