ರಾಂಚಿ : ಮೇ 22 ರಂದು ತಮ್ಮ ವಿರುದ್ಧದ 'ಮೋದಿ ಉಪನಾಮ' ಬಳಕೆ ವಿರುದ್ಧ ದಾಖಲಾದ ಮಾನನಷ್ಟ ಮೊಕದ್ದಮೆಯ ವಿಚಾರಣೆ ವೇಳೆ ಖುದ್ದು ವಿಚಾರಣೆ ಹಾಜರಾಗುವಂತೆ ಕೆಳ ನ್ಯಾಯಾಲಯ ನೀಡಿರುವ ಆದೇಶವನ್ನು ಪ್ರಶ್ನಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜಾರ್ಖಂಡ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಮೇ 3 ರಂದು ರಾಂಚಿಯ ಎಂಪಿ - ಎಂಎಲ್ಎ ನ್ಯಾಯಾಲಯವು ಪ್ರಕರಣದ ಸಂದರ್ಭದಲ್ಲಿ ಖುದ್ದು ಹಾಜರಾತಿಯಿಂದ ವಿನಾಯಿತಿ ನೀಡುವಂತೆ ಸಿಆರ್ಪಿಸಿಯ ಸೆಕ್ಷನ್ 305 ಗೆ ಸಂಬಂಧಿಸಿದಂತೆ ಗಾಂಧಿಯವರ ಅರ್ಜಿಯನ್ನು ತಿರಸ್ಕರಿಸಿತ್ತು. ಬದಲಾಗಿ ಈ ಸಂಬಂಧ ಮೇ 22 ರಂದು ನ್ಯಾಯಾಲಯಕ್ಕೆ ಖುದ್ದು ಹಾಜರಾಗುವಂತೆ ಕೆಳ ನ್ಯಾಯಾಲಯವು ಸೂಚಿಸಿತ್ತು. ಇದನ್ನು ಇಂದು ಹೈಕೋರ್ಟ್ನಲ್ಲಿ ಪ್ರಶ್ನಿಸಲಾಗಿದೆ.
ಗಾಂಧಿ ಪರವಾಗಿ ವಕೀಲ ದೀಪಂಕರ್ ರೈ ವಾದ : ಮೇ 22 ರ ಮೊದಲು ಅವರ ಅರ್ಜಿಯನ್ನು ಹೈಕೋರ್ಟ್ನಲ್ಲಿ ವಿಚಾರಣೆಗೆ ಒಳಪಡಿಸದಿದ್ದರೆ, ನಂತರ ಕೆಳ ನ್ಯಾಯಾಲಯದಲ್ಲಿ ವಿಸ್ತರಣೆಯನ್ನು ಕೋರಲಾಗುವುದು ಎಂದು ಗಾಂಧಿ ಪರವಾಗಿ ವಕೀಲ ದೀಪಂಕರ್ ರೈ ಹೇಳಿದರು.
ಕಾನೂನು ಎಲ್ಲರಿಗೂ ಸಮಾನ ಎಂದ ಹೈಕೋರ್ಟ್ : ಖುದ್ದು ಹಾಜರಾತಿಯಿಂದ ವಿನಾಯಿತಿ ಪಡೆಯಲು ಕಾಂಗ್ರೆಸ್ ನಾಯಕರು ಯಾವುದೇ ನಿರ್ದಿಷ್ಟ ಕಾರಣ ಅಥವಾ ಯಾವುದೇ ವಿಶೇಷ ಸಂದರ್ಭಗಳನ್ನು ಉಲ್ಲೇಖಿಸಿಲ್ಲ ಎಂದು ಸಂಸದ-ಶಾಸಕರ ನ್ಯಾಯಾಲಯವು ಗಾಂಧಿಯವರ ಅರ್ಜಿಯನ್ನು ವಜಾಗೊಳಿಸಿತ್ತು. ಕಾನೂನು ಎಲ್ಲರಿಗೂ ಸಮಾನವಾಗಿದ್ದು, ವಿಚಾರಣೆ ವೇಳೆ ಗಾಂಧಿ ಹಾಜರಿರಬೇಕು ಎಂದು ಕೋರ್ಟ್ ಕಟ್ಟು ನಿಟ್ಟಿನ ಆದೇಶ ನೀಡಿತ್ತು.
ಇದನ್ನೂ ಓದಿ:ಬಿಜೆಪಿಗೆ 40ರ ಮೇಲೆ ಪ್ರೀತಿ, ಅವರಿಗೆ 40 ಸ್ಥಾನ ಮಾತ್ರ ಕೊಡಿ: ರಾಹುಲ್ ಗಾಂಧಿ