ಕರ್ನಾಟಕ

karnataka

ETV Bharat / bharat

ಮುಂದುವರಿದ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ.. ಕೇಸರೀಕರಣದಿಂದ ಖಾಸಗೀಕರಣ ಎಂದ ಕಾಂಗ್ರೆಸ್​ ನಾಯಕ - ಕೇಸರೀಕರಣದಿಂದ ಖಾಸಗೀಕರಣ

ದೇಶದಲ್ಲಿ ಕೇಸರೀಕರಣದ ರಾಜಕಾರಣದಿಂದ ಭಯದ ವಾತಾವರಣ ನಿರ್ಮಾಣವಾಗಿದೆ. ಪ್ರತಿಯೊಂದು ಕ್ಷೇತ್ರವೂ ಖಾಸಗೀಕರಣದತ್ತ ಸಾಗುತ್ತಿದ್ದು ಅದು ದೇಶದ ಹಿತಾಸಕ್ತಿಗೆ ಪೂರಕವಾಗಿಲ್ಲ ಎಂದ ರಾಜಸ್ಥಾನ ಸಮಗ್ರ ಸೇವಾ ಸಂಘದ ಅಧ್ಯಕ್ಷ ಸವಾಯಿ ಸಿಂಗ್.

Rahul Gandhi Bharat Jodo Yatra resumed
ಪುನರಾರಂಭಗೊಂಡ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ

By

Published : Dec 10, 2022, 3:53 PM IST

ಬುಂಡಿ(ರಾಜಸ್ಥಾನ):ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ಶನಿವಾರ ಬುಂಡಿ ಜಿಲ್ಲೆಯಿಂದ ಪುನಾರಂಭಗೊಂಡಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಆರಂಭವಾದ ಭಾರತ್ ಜೋಡೋ ಯಾತ್ರೆಯು ವಿರಾಮದ ನಂತರ ಶುಕ್ರವಾರ ಪುನಾರಂಭಗೊಂಡಿದೆ.

ಇಂದು ರಾಜಸ್ಥಾನದಲ್ಲಿ ಆರನೇ ದಿನವಾದ ಭಾರತ್ ಜೋಡೋ ಯಾತ್ರೆಯು ಬುಂಡಿ ಜಿಲ್ಲೆಯ ಕೇಶೋರಾಯಪಟ್ಟಣದಿಂದ ಪ್ರಾರಂಭವಾಗಿದೆ. ಸಿಎಂ ಅಶೋಕ್ ಗೆಹ್ಲೋಟ್ ಸೇರಿದಂತೆ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಗೋವಿಂದ್ ಸಿಂಗ್ ದೋಟಸಾರಾ, ಕ್ರೀಡಾ ಸಚಿವ ಅಶೋಕ್ ಚಂದ್ನಾ, ಸಚಿವ ರಮೇಶ್ ಮೀನಾ, ಶಾಸಕ ಕೃಷ್ಣ ಪೂನಿಯಾರ ಜೊತೆಗೆ ಹಲವು ಶಾಸಕರು ಮತ್ತು ಸಚಿವರು ಯಾತ್ರೆಯಲ್ಲಿ ಭಾಗವಹಿಸಿದ್ದಾರೆ.

ಭಾರತ್ ಜೋಡೋ ಯಾತ್ರೆಯು ಬೆಳಗ್ಗೆ 8:30 ಕ್ಕೆ ರಿಲಯನ್ಸ್ ಪೆಟ್ರೋಲ್ ಪಂಪ್, ರಂಗಪುರಿಯಾ, ಕೇಶವರಾಯಪಟ್ಟಣ, ಲಾಲ್ಸೋಟ-ಕೋಟಾ ಹೆದ್ದಾರಿಯಿಂದ ಅರ್ನೆತಾ ಗ್ರಾಮವನ್ನು ತಲುಪಿ ವಿಶ್ರಾಂತಿ ಪಡೆದಿದೆ. ನಂತರ ಮಧ್ಯಾಹ್ನ 3:30 ಕ್ಕೆ ಪ್ರಯಾಣದ ಎರಡನೇ ಹಂತವು ಪ್ರಾರಂಭಗೊಂಡು ಬಾಲಾಪುರ್ ಛೇದಕ ಕಪ್ರೆನ್​ನ್ನು ತಲುಪಲಿದ್ದು ಪ್ರಯಾಣದ ಅಂತಿಮ ಹಂತವನ್ನು ಬಾಲಾಪುರ್ ಚೌರಾಹಾದಲ್ಲಿ ನಿಗದಿಸಲಾಗಿದೆ. ಜೊತೆಗೆ ಇಂದು ಭಾರತ್ ಜೋಡೋ ಯಾತ್ರೆಯಲ್ಲಿ ಸ್ವಚ್ಛತೆಯ ಯೋಧ ಸ್ವೀಪರ್ಸ್ ಕೂಡ ಸೇರಿಕೊಂಡಿದ್ದಾರೆ.

ರಾಜಸ್ಥಾನ ಸಮಗ್ರ ಸೇವಾ ಸಂಘದ ಅಧ್ಯಕ್ಷ ಸವಾಯಿ ಸಿಂಗ್ ಮಾತನಾಡಿ, ದೇಶದಲ್ಲಿ ಕೇಸರೀಕರಣದ ರಾಜಕಾರಣದಿಂದ ಭಯದ ವಾತಾವರಣ ನಿರ್ಮಾಣವಾಗಿದೆ. ಪ್ರತಿಯೊಂದು ಕ್ಷೇತ್ರವೂ ಖಾಸಗೀಕರಣದತ್ತ ಸಾಗುತ್ತಿದ್ದು, ಅದು ದೇಶದ ಹಿತಾಸಕ್ತಿಗೆ ಪೂರಕವಾಗಿಲ್ಲ ಎಂದರು.

ಇಂದಿನ ಯಾತ್ರೆಯಲ್ಲಿ ನೂರಾರು ಜನರು ಭಾಗಿಯಾಗಿದ್ದಾರೆ. ಜೊತೆಗೆ ಇಂದು ಭಾರತ್ ಜೋಡೋ ಯಾತ್ರೆಯಲ್ಲಿ ಸ್ವಚ್ಛತೆಯ ಯೋಧ ಸ್ವೀಪರ್ಸ್ ಕೂಡ ಸೇರಿಕೊಂಡಿದ್ದಾರೆ. ರಾಹುಲ್​ ಗಾಂಧಿ ಅವರು ಕೇಶೋರಾಯಪಟ್ಟಣ ಪುರಸಭೆಯ ನೈರ್ಮಲ್ಯ ಕಾರ್ಮಿಕರೊಂದಿಗೆ ಸಂವಾದ ನಡೆಸಿದ್ದಾರೆ ಮತ್ತು ಅವರು ಯಾವ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಮಾತುಕತೆ ನಡೆಸಿದ್ದಾರೆ.

ಈ ವೇಳೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕೂಡ ಜೈಪುರದಿಂದ ಯಾತ್ರೆಯಲ್ಲಿ ಪಾಲ್ಗೊಂಡರು. ಇದಲ್ಲದೇ ಲೋಕಸಭೆಯ ವಿರೋಧ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ಕೂಡ ಬೂಂಡಿ ತಲುಪಿದ್ದು, ರಾಹುಲ್ ಗಾಂಧಿ ಜೊತೆ ಅವರು ನಡೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಯಾತ್ರ ಪರಿಣಾಮ ಇಂದು ಇದ್ದ ಮಹಿಳಾ ನಡಿಗ ಕಾರ್ಯಕ್ರಮವನ್ನೂ ಡಿಸೆಂಬರ್ 12 ಕ್ಕೆ ಮುಂದೂಡಲಾಗಿದೆ.

ಹಾಗೆ ಶನಿವಾರದಂದು ಬುಂಡಿಯ ಕೇಶೋರೈಪಟನ್ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದ ರಾಕೇಶ್ ಬೋಯಾಟ್ ಅವರು ಭೇಟಿಯ ವೇಳೆ ರಾಹುಲ್ ಗಾಂಧಿ ಅವರೊಂದಿಗೆ ಸಂವಾದ ನಡೆಸಿದರು. ಇಂದಿನ ಯಾತ್ರಾಕ್ಕಾಗಿ 100ಕ್ಕೂ ಹೆಚ್ಚು ಬಸ್‌ಗಳು ಕೂಡ ಬಂದಿವೆ. ಶಾಸಕರಾದ ಮನೀಶಾ ಪನ್ವಾರ್, ದಿವ್ಯಾ ಮದೆರ್ನಾ, ಜೋಧ್‌ಪುರ ಮಾಜಿ ಮೇಯರ್ ರಾಮೇಶ್ವರ್ ದಾಧಿ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.

ಇದನ್ನು ಓದಿ :ಗುಜರಾತ್​ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಭೂಪೇಂದ್ರ ಪಟೇಲ್.. 2ನೇ ಬಾರಿಗೆ ಸಿಎಂ ಪಟ್ಟ

ABOUT THE AUTHOR

...view details