ಕರ್ನಾಟಕ

karnataka

ETV Bharat / bharat

ಪ್ರಧಾನಮಂತ್ರಿ ಎಂಬುದನ್ನು ಮರೆತು ರಾಜನಂತೆ ಯೋಚಿಸುತ್ತಿದ್ದಾರೆ: ರಾಹುಲ್ ಗಾಂಧಿ - Rahul Gandhi on central govt

ಓರ್ವ ವ್ಯಕ್ತಿ ದೇಶದ ಪ್ರಧಾನಮಂತ್ರಿ ಎಂಬುದನ್ನು ಮರೆತು ರಾಜನಂತೆ ಯೋಚಿಸುತ್ತಿರುವ ಕಾರಣದಿಂದ ನಾವು ಸಂಸತ್​ನಲ್ಲಿ ಮಾತನಾಡಲು ಸಾಧ್ಯವಾಗುತ್ತಿಲ್ಲ ಎಂದು ರಾಹುಲ್ ಗಾಂಧಿ, ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

Rahul Gandhi attacks PM, alleges nobody can get justice without fearing consequences
ಪ್ರಧಾನಿ ಮಂತ್ರಿ ಎಂಬುದನ್ನು ಮರೆತು ರಾಜನಂತೆ ಯೋಚಿಸುತ್ತಿದ್ದಾರೆ: ರಾಹುಲ್

By

Published : Feb 17, 2021, 8:36 PM IST

ಪುದುಚೇರಿ:ಪರಿಣಾಮಗಳ ಬಗ್ಗೆ ಭಯ ಪಡದೇ ಇದ್ದರೆ ಯಾವ ವ್ಯಕ್ತಿಯೂ ನ್ಯಾಯಾಂಗ ವ್ಯವಸ್ಥೆಯಲ್ಲಿ ನ್ಯಾಯ ಪಡೆಯಲು ಸಾಧ್ಯವಾಗುವುದಿಲ್ಲ ಎಂದು ರಾಹುಲ್ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.

ಪುದುಚೇರಿಯಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪತ್ರಕರ್ತರಿಗೆ ಜೀವಬೆದರಿಕೆಯಲ್ಲಿ ಬದುಕುತ್ತಿದ್ದಾರೆ. ಪಾರ್ಲಿಮೆಂಟ್​ನಲ್ಲಿ ಚರ್ಚೆ ನಡೆಯದೇ ಮಸೂದೆಗಳು ಪಾಸ್ ಆಗುತ್ತವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಓರ್ವ ವ್ಯಕ್ತಿ ದೇಶದ ಪ್ರಧಾನಮಂತ್ರಿ ಎಂಬುದನ್ನು ಮರೆತು ರಾಜನಂತೆ ಯೋಚಿಸುತ್ತಿರುವ ಕಾರಣದಿಂದ ನಾವು ಸಂಸತ್​ನಲ್ಲಿ ಮಾತನಾಡಲು ಸಾಧ್ಯವಾಗುತ್ತಿಲ್ಲ ಎಂದು ರಾಹುಲ್, ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ :ಕೃಷಿ ಕಾಯ್ದೆ ವಿರೋಧಿಸಿ ನಾಳೆ ದೇಶಾದ್ಯಂತ 'ರೈಲು ರೋಕೊ' ಚಳವಳಿ!

ಪುದುಚೇರಿಯಲ್ಲಿ ಕಾಂಗ್ರೆಸ್ ಸರ್ಕಾರ ಸರಿಯಾಗಿ ಕೆಲಸ ಮಾಡಲು ಐದು ವರ್ಷದಿಂದ ಪ್ರಧಾನಿ ಮೋದಿ ಅವಕಾಶ ನೀಡುತ್ತಿಲ್ಲ ಎಂದು ಈಗಿನ ರಾಜಕೀಯ ಸ್ಥಿತಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.

ಪ್ರಧಾನಿ ಮೋದಿ ಲೆಫ್ಟಿನೆಂಟ್​ ಗವರ್ನರ್ ಹುದ್ದೆಯನ್ನು ಹಾಳು ಮಾಡಿದ್ದಾರೆ. ಜನಾಭಿಪ್ರಾಯಕ್ಕೆ ಮನ್ನಣೆ ನೀಡುತ್ತಿಲ್ಲ. ನಿಮ್ಮ ಕನಸುಗಳು, ನಿರೀಕ್ಷೆಗಳ ಜೊತೆಗೆ ಎಲ್ಲಾ ಸಂಸ್ಥೆಗಳನ್ನು ನಾಶ ಮಾಡಲಾಗಿದೆ ಎಂದು ರಾಹುಲ್ ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೂ ಮೊದಲು ಮೀನುಗಾರ ಸಮುದಾಯದೊಂದಿಗೆ ಸಂವಾದ ನಡೆಸಿದ್ದ ರಾಹುಲ್ ಗಾಂಧಿ, ಕೇಂದ್ರ ಸರ್ಕಾರ ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳ ಮೇಲೆ ದಾಳಿ ಮಾಡುತ್ತಿದೆ ಎಂದು ಆರೋಪಿಸಿದ್ದರು.

ABOUT THE AUTHOR

...view details