ಕರ್ನಾಟಕ

karnataka

By

Published : Jan 17, 2022, 2:39 PM IST

Updated : Jan 17, 2022, 2:51 PM IST

ETV Bharat / bharat

ಪಂಜಾಬ್​ ವಿಧಾನಸಭೆ ಎಲೆಕ್ಷನ್​​ ಮುಂದೂಡಿಕೆ: ಹೊಸ ಡೇಟ್​​ ಘೋಷಿಸಿದ ಚು.ಆಯೋಗ

ರಾಜ್ಯದಲ್ಲಿ ಗುರು ರವಿದಾಸ್​ ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಚುನಾವಣೆ ಮುಂದೂಡುವಂತೆ ಮುಖ್ಯಮಂತ್ರಿ ಚರಣ್​ಜಿತ್​ ಸಿಂಗ್ ಚನ್ನಿ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದರು. ಈ ಬಗ್ಗೆ ಬಿಜೆಪಿ ಹಾಗೂ ಶಿರೋಮಣಿ ಅಕಾಲಿ ದಳ ಕೂಡ ಮನವಿ ಮಾಡಿದ್ದವು.

Punjab Assembly election
Punjab Assembly election

ನವದೆಹಲಿ:ಫೆಬ್ರವರಿ 14ರಂದು ಘೋಷಣೆಯಾಗಿದ್ದ ಪಂಜಾಬ್​ ವಿಧಾನಸಭೆ ಚುನಾವಣೆ ಮುಂದೂಡಿಕೆಯಾಗಿದೆ. ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗ ಮಹತ್ವದ ಪ್ರಕಟಣೆ ಹೊರಡಿಸಿದೆ.

ಇದೀಗ ಹೊರಬಿದ್ದಿರುವ ಮಾಹಿತಿ ಪ್ರಕಾರ, ಫೆ.20ರಂದು ಮತದಾನ ನಡೆಸಲು ನಿರ್ಧರಿಸಲಾಗಿದೆ. ಹೀಗಾಗಿ ಎಲ್ಲ 117 ವಿಧಾನಸಭೆ ಕ್ಷೇತ್ರಗಳಿಗೂ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ.

ಚುನಾವಣೆ ಮುಂದೂಡಿದ್ದು ಏಕೆ?

ರಾಜ್ಯದಲ್ಲಿ ಗುರು ರವಿದಾಸ್​ ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಚುನಾವಣೆ ಮುಂದೂಡುವಂತೆ ಮುಖ್ಯಮಂತ್ರಿ ಚರಣ್​ಜಿತ್​ ಸಿಂಗ್ ಚನ್ನಿ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದರು. ಈ ಬಗ್ಗೆ ಬಿಜೆಪಿ ಹಾಗೂ ಶಿರೋಮಣಿ ಅಕಾಲಿ ದಳ ಕೂಡ ಮನವಿ ಮಾಡಿದ್ದವು.

ಪಂಜಾಬ್​ನಲ್ಲಿ ಶೇ. 32ಕ್ಕೂ ಅಧಿಕ ಪರಿಶಿಷ್ಠ ಜಾತಿ ಸಮುದಾಯದವರಿದ್ದು, ಎಲ್ಲರೂ ಗುರು ರವಿದಾಸ್​​ ಅವರ ಜನ್ಮದಿನದ ಪ್ರಯುಕ್ತ ಉತ್ತರ ಪ್ರದೇಶದ ಬನಾರಸ್​ಗೆ ಭೇಟಿ ನೀಡಿ ಜಯಂತಿಯಲ್ಲಿ ಭಾಗಿಯಾಗುತ್ತಾರೆ. ಇದೇ ಕಾರಣಕ್ಕಾಗಿ ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗಲು ಸಾಧ್ಯವಾಗುವುದಿಲ್ಲ. ಹಾಗಾಗಿ, ಚುನಾವಣೆ ದಿನಾಂಕವನ್ನು ಮುಂದೂಡುವಂತೆ ಒತ್ತಾಯಿಸಲಾಗಿತ್ತು.

ಈ ಹಿಂದೆ ಫೆ. 14ರಂದು ಗೋವಾ, ಉತ್ತರಾಖಂಡ ಹಾಗೂ ಪಂಜಾಬ್​ನಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಸಲು ಆಯೋಗ ನಿರ್ಧರಿಸಿತ್ತು.

Last Updated : Jan 17, 2022, 2:51 PM IST

ABOUT THE AUTHOR

...view details