ಕರ್ನಾಟಕ

karnataka

PUBG ಆಟಕ್ಕೆ ಅಡ್ಡಿಯಾಗುತ್ತಿದ್ದ ಅಜ್ಜ- ಅಜ್ಜಿಯನ್ನು ಜೈಲಿಗೆ ಕಳುಹಿಸುವ ಪ್ಲಾನ್​: ಬಾಲಕನನ್ನು ಕೊಂದ ಕಿರಾತಕ

By

Published : Jul 8, 2022, 5:37 PM IST

ಆರೋಪಿಯ ಅಜ್ಜ ಅಜ್ಜಿ ಆನ್‌ಲೈನ್ ಗೇಮ್ ಆಡದಂತೆ ತಡೆದಿದ್ದಕ್ಕೆ ಅವರನ್ನು ಜೈಲಿಗೆ ಕಳುಹಿಸಲು ಇಲ್ಲೊಬ್ಬ ಕಿರಾತಕ ಬಾಲಕನನ್ನು ಕೊಂದಿದ್ದಾನೆ.

PUBG ಆಟಕ್ಕೆ ಅಡ್ಡಿಯಾಗುತ್ತಿದ್ದ ಅಜ್ಜ ಅಜ್ಜಿಯನ್ನು ಜೈಲಿಗೆ ಕಳುಹಿಸುವ ಪ್ಲಾನ್​ ಮಾಡಿ ಆರೋಪಿ ಅಂದರ್​
PUBG ಆಟಕ್ಕೆ ಅಡ್ಡಿಯಾಗುತ್ತಿದ್ದ ಅಜ್ಜ ಅಜ್ಜಿಯನ್ನು ಜೈಲಿಗೆ ಕಳುಹಿಸುವ ಪ್ಲಾನ್​ ಮಾಡಿ ಆರೋಪಿ ಅಂದರ್​

ಡಿಯೋರಿಯಾ (ಉತ್ತರ ಪ್ರದೇಶ): ಲಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಹರ್‌ಖೌಲಿ ನಿವಾಸಿಯಾದ ಹದಿನೆಂಟು ವರ್ಷದ ಪಬ್ಜಿ ವ್ಯಸನಿ ಭಯಾನಕ ಕೃತ್ಯ ಎಸಗಿದ್ದಾನೆ. ತನ್ನ ಅಜ್ಜನ ಬಳಿ ಖಾಸಗಿ ಟ್ಯೂಷನ್‌ಗೆ ಬಂದ ಆರು ವರ್ಷದ ವಿದ್ಯಾರ್ಥಿ ಸಂಸ್ಕರ್‌ ಎಂಬುವನನ್ನು ಕೊಂದು ತನಗೆ ಬುದ್ದಿ ಹೇಳುತ್ತಿದ್ದ ಅಜ್ಜ ಅಜ್ಜಿಯನ್ನು ಜೈಲಿಗೆ ಕಳುಹಿಸಲು ಮುಂದಾಗಿದ್ದಾನೆ. ಆದರೆ, ಈತನ ಪ್ಲಾನ್​ ಫೈಲ್​ ಆಗಿದೆ.

ಆರೋಪಿಯ ಅಜ್ಜ ಅಜ್ಜಿ ಆನ್‌ಲೈನ್ ಗೇಮ್ ಆಡದಂತೆ ಈತನನ್ನು ನಿಯಂತ್ರಣದಲ್ಲಿ ಇರಿಸಿದ್ದರಂತೆ. ಇದರಿಂದ ಕುಪಿತಗೊಂಡ ಈತ ಅಜ್ಜನ ವಿರುದ್ಧ ಸಂಚು ರೂಪಿಸಿದ್ದಾನೆ. ಪೊಲೀಸರು ಹನ್ನೆರಡು ಗಂಟೆಗಳ ಸುದೀರ್ಘ ತನಿಖೆಯ ನಂತರ ಆರೋಪಿಯನ್ನು ಬಂಧಿಸಿದ್ದಾರೆ.

ಘಟನೆ ಸಂಬಂಧ ಎಸ್ಪಿ ಸಂಕಲ್ಪ್ ಶರ್ಮಾ ಮಾತನಾಡಿ, ಅರ್ಜುನ್ ಶರ್ಮಾ (18) ಪಬ್ಜಿ ವ್ಯಸನಿಯಾಗಿದ್ದು, ತನ್ನ ಅಜ್ಜ ನರಸಿಂಗ್ ಶರ್ಮಾ (60) ರ ಬಳಿ ಬರುತ್ತಿದ್ದ ವಿದ್ಯಾರ್ಥಿಯನ್ನು ಅಪಹರಿಸಿ ಆ ಕುಟುಂಬದಿಂದ 5 ಲಕ್ಷ ರೂ. ಕೇಳಿದ್ದಾನೆ. ಈ ಪ್ರಕರಣದಲ್ಲಿ ತನ್ನ ಅಜ್ಜ ಅಜ್ಜಿಯರು ಸಿಲುಕಿ ಜೈಲು ಪಾಲಾಗುತ್ತಾರೆ ಎಂಬುವುದು ಆರೋಪಿಯ ಕುತಂತ್ರವಾಗಿತ್ತು ಎಂದು ತಿಳಿಸಿದ್ದಾರೆ.

ಬುಧವಾರ ಟ್ಯೂಷನ್‌ಗೆ ತೆರಳಿದ್ದ ಆರು ವರ್ಷದ ಸಂಸ್ಕರ್​ನನ್ನು ಕರೆದುಕೊಂಡು ಹೋಗಲು ತಂದೆ ಬಂದಾಗ ಸಂಸ್ಕರ್‌ ಟ್ಯೂಷನ್‌ಗೆ ಬಂದಿಲ್ಲ ಎಂದು ಈತ ತಿಳಿಸಿದ್ದಾನೆ. ಈ ವೇಳೆ, ಪೋಷಕರು ಪೊಲಿಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಈತನನ್ನು ವಿಚಾರಣೆಗೆ ಒಳಪಡಿಸಿದಾಗ, ಭಯಭೀತನಾಗಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಮತ್ತು ಶವವನ್ನು ಶೌಚಾಲಯದಲ್ಲಿ ಅಡಗಿಸಿಟ್ಟಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾನೆ.

ನನ್ನ ಅಜ್ಜ ಅಜ್ಜಿ ಪಬ್ಜಿ ಆಟವಾಡಬೇಡ ಎಂದು ನನ್ನನ್ನು ಗದರಿಸುತ್ತಿದ್ದರು. ಇದರಿಂದ ಕುಪಿತಗೊಂಡು ಸಂಸ್ಕರ್​ನನ್ನು ಕೊಂದು ಆ ಇಬ್ಬರನ್ನೂ ಜೈಲಿಗೆ ಕಳುಹಿಸಲು ಯೋಜಿಸಿದ್ದೆ. ಅದರಂತೆ ಬುಧವಾರ ಸಂಸ್ಕರ್ ಟ್ಯೂಷನ್‌ಗೆ ಬಂದಾಗ ನಾನು ಅವನ ಬಾಯಿಯನ್ನು ಫೆವಿಕ್ವಿಕ್‌ನಿಂದ ಅಂಟಿಸಿ ವಾಶ್‌ರೂಮ್‌ನಲ್ಲಿ ಕತ್ತು ಹಿಸುಕಿ ಸಾಯಿಸಿದೆ ಎಂದು ತಿಳಿಸಿದ್ದಾನೆ.

ಇದನ್ನೂ ಓದಿ:ಕಾರವಾರ: ಹೆಂಡತಿ - ಮಗನ ಕೊಂದು ಆತ್ಮಹತ್ಯೆಗೆ ವ್ಯಕ್ತಿ ಶರಣು.. ಓಡಿ ಹೋಗಿ ಬಚಾವಾದ ಇಬ್ಬರು ಮಕ್ಕಳು!

ABOUT THE AUTHOR

...view details