ಛತ್ರಪತಿ ಸಂಭಾಜಿನಗರ(ಮಹಾರಾಷ್ಟ್ರ):ಆತ ವೃತ್ತಿಯಲ್ಲಿ ಪ್ರಾಧ್ಯಾಪಕ. ಇಬ್ಬರು ಪುತ್ರಿಯರು, ಪತ್ನಿ ಇರುವ ಕೂಡು ಕುಟುಂಬ. ಇಷ್ಟಿದ್ದರೂ ಆತನಿಗೆ ಗಂಡು ಮಗು ಇಲ್ಲ ಎಂಬ ಕೊರಗು. ಇದನ್ನು ನೀಗಿಸಿಕೊಳ್ಳಲು ಆತ ಮಾಡಿದ ಪ್ಲಾನ್ ಮಾತ್ರ ಖತರ್ನಾಕ್. ಇದಕ್ಕೆ ಬಲಿಯಾಗಿದ್ದು ಕಾಲೇಜು ವಿದ್ಯಾರ್ಥಿನಿ. ಇವರ ದುಷ್ಕೃತ್ಯದ ವಿರುದ್ಧ ಕೇಸ್ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಘಟನೆಯ ವಿವರ:ಇಲ್ಲಿನ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಮರಾಠವಾಡ ವಿಶ್ವವಿದ್ಯಾಲಯದ ನಾಟಕ ವಿಭಾಗದ ಪ್ರಾಧ್ಯಾಪಕ ಅಶೋಕ್ ಬಂದಗರ್ ಮತ್ತು ಪಲ್ಲವಿ ಬಂದಗರ್ ಅವರು ಕಾಲೇಜು ವಿದ್ಯಾರ್ಥಿಯ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣದ ಎದುರಿಸುತ್ತಿದ್ದಾರೆ. ಇದಕ್ಕೆಲ್ಲ ಕಾರಣ ದಂಪತಿಗೆ ಗಂಡು ಮಗು ಜನಿಸದೇ ಇರುವುದು. ಮಕ್ಕಳಿಗೆ ಆದರ್ಶವಾಗಬೇಕಿದ್ದ ಪ್ರಾಧ್ಯಾಪಕ ಕಾಲೇಜು ವಿದ್ಯಾರ್ಥಿನಿಯ ಜೊತೆಗೆ ಅನುಚಿತವಾಗಿ ನಡೆದುಕೊಂಡು ಕೇಸ್ ಜಡಿಸಿಕೊಂಡಿದ್ದಾನೆ.
ವಿದ್ಯಾರ್ಥಿನಿಯೊಬ್ಬಳು ಕಾಲೇಜಿನಲ್ಲಿ ಪ್ರವೇಶ ಪಡೆದ ಬಳಿಕ ಆಕೆ ಹಾಸ್ಟೆಲ್ ಹುಡುಕಾಟದಲ್ಲಿದ್ದಳು. ಈ ವೇಳೆ, ಅದೇ ಕಾಲೇಜಿನ ಪ್ರಾಧ್ಯಾಪಕ ಅಶೋಕ್ ವಿದ್ಯಾರ್ಥಿನಿಗೆ ತನ್ನ ಮನೆಯಲ್ಲೇ ಪೇಯಿಂಗ್ ಗೆಸ್ಟ್ ರೀತಿಯಲ್ಲಿರುವ ಸಲಹೆ ನೀಡಿದ್ದಾನೆ. ಇದನ್ನು ವಿದ್ಯಾರ್ಥಿನಿ ನಂಬಿದ್ದಾರೆ. ಪ್ರಾಧ್ಯಾಪಕನ ಪತ್ನಿಯೂ ಮಗಳಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಕೆಲ ದಿನಗಳ ನಂತರ ಪ್ರಾಧ್ಯಾಪಕ ವಿದ್ಯಾರ್ಥಿನಿಗೆ ಕಿರುಕುಳ ನೀಡಲು ಶುರು ಮಾಡಿದ್ದಾರೆ ಎನ್ನಲಾಗಿದೆ. ಸಂತ್ರಸ್ತೆ ತನ್ನಿಂದ ದೂರ ಇರಲು ಸೂಚಿಸಿದ್ದಾರೆ. ಆದರೆ 2022 ರ ಜುಲೈನಲ್ಲಿ ಸಂತ್ರಸ್ತೆ ಮನೆಯಲ್ಲಿ ಮಲಗಿದ್ದಾಗ, ಅಶೋಕ್ ವಿದ್ಯಾರ್ಥಿನಿ ಮೇಲೆ ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ವಿದ್ಯಾರ್ಥಿನಿ ನಡೆದ ಘಟನೆಯನ್ನು ಪತ್ನಿಗೆ ತಿಳಿಸಿದ್ದಾರೆ. ಆದರೆ, ಆಕೆ ಅದನ್ನು ಸಲೀಸಾಗಿ ತೆಗೆದುಕೊಂಡು ಯಾರಿಗೂ ಹೇಳದಂತೆ ಬಾಯಿ ಮುಚ್ಚಿಸಿದ್ದಾರೆ.