ಕರ್ನಾಟಕ

karnataka

ಲಖೀಮ್​ಪುರ ಹಿಂಸಾಚಾರ: ಮೃತ ರೈತನ ಕುಟುಂಬಸ್ಥರಿಗೆ ಧೈರ್ಯ ತುಂಬಿದ ರಾಹುಲ್, ಪ್ರಿಯಾಂಕಾ

ಲಖೀಮ್​ಪುರ ಖೇರಿ ಹಿಂಸಾಚಾರದಲ್ಲಿ ಮೃತ ರೈತನ ಮನೆಗೆ ಕಾಂಗ್ರೆಸ್ ನಿಯೋಗ ಭೇಟಿ ನೀಡಿ ಸಾಂತ್ವನ ಹೇಳಿದೆ.

By

Published : Oct 7, 2021, 5:01 AM IST

Published : Oct 7, 2021, 5:01 AM IST

Priyanka, Rahul Gandhi
Priyanka, Rahul Gandhi

ಲಖೀಮ್​ಪುರ ಖೇರಿ (ಉತ್ತರ ಪ್ರದೇಶ):ಲಖೀಮ್​ಪುರ ಖೇರಿ ಹಿಂಸಾಚಾರದಲ್ಲಿ ಮೃತಪಟ್ಟ ರೈತನ ಕುಟುಂಬಸ್ಥರನ್ನು ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ನೇತೃತ್ವದ ಕಾಂಗ್ರೆಸ್ ನಿಯೋಗ ಬುಧವಾರ ಭೇಟಿ ಮಾಡಿ ಧೈರ್ಯ ತುಂಬಿದೆ.

ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ರಣದೀಪ್ ಸುರ್ಜೆವಾಲಾ, ಕೆ. ಸಿ. ವೇಣುಗೋಪಾಲ್, ಛತ್ತೀಸ್​​ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್, ರಾಜಸ್ಥಾನ ಮುಖ್ಯಮಂತ್ರಿ ಚರಣ್ ಜಿತ್ ಸಿಂಗ್ ಚನ್ನಿ ಹಾಗೂ ಪಕ್ಷದ ಮುಖಂಡ ದೀಪೆಂದ್ರ ಹೂಡಾ ಲಖೀಮ್​ಪುರ್​ಗೆ ಭೇಟಿ ನೀಡಿದರು. ಹಿಂಸಾಚಾರದಲ್ಲಿ ಮೃತಪಟ್ಟ ರೈತ ಲವ್​ಪ್ರೀತ್ ಸಿಂಗ್ ಅವರ ಕುಟುಂಬಸ್ಥರ ಮನೆಗೆ ತೆರಳಿ ಸಾಂತ್ವನ ಹೇಳಿದರು. ಗುರುವಾರ ಕೂಡ ಹಿಂಸಾಚಾರದಲ್ಲಿ ಮೃತಪಟ್ಟವರ ಕುಟುಂಬಸ್ಥರನ್ನು ಕಾಂಗ್ರೆಸ್ ನಾಯಕರು ಭೇಟಿಯಾಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮೃತ ರೈತನ ಕುಟುಂಬಸ್ಥರಿಗೆ ಧೈರ್ಯ ತುಂಬಿದ ರಾಹುಲ್, ಪ್ರಿಯಾಂಕಾ

ಬಳಿಕ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, 'ಲವ್​ಪ್ರಿತ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದೇವೆ. ಆದ್ರೆ ಅವರಿಗೆ ನ್ಯಾಯ ಸಿಗುವವರೆಗೆ ಈ ಸತ್ಯಾತ್ರಹ ಮುಂದುವರಿಯಲಿದೆ. ನಿಮ್ಮ ತ್ಯಾಗವನ್ನು ಮರೆಯಲ್ಲ ಲವ್​ಪ್ರೀತ್​' ಎಂದು ಬರೆದುಕೊಂಡಿದ್ದಾರೆ.

ಮೃತ ರೈತನ ಕುಟುಂಬಸ್ಥರಿಗೆ ಧೈರ್ಯ ತುಂಬಿದ ರಾಹುಲ್, ಪ್ರಿಯಾಂಕಾ

ಲಖೀಮ್​ಪುರ ಭೇಟಿಗೆ ಪ್ರತಿಪಕ್ಷ ಹಾಗೂ ಕಾಂಗ್ರೆಸ್ ನಾಯಕರಿಗೆ ಉತ್ತರ ಪ್ರದೇಶ ಸರ್ಕಾರ ಅವಕಾಶ ನೀಡಿದ ನಂತರ ಕಾಂಗ್ರೆಸ್ ನಿಯೋಗ ತೆರಳಿತ್ತು. ಇದಕ್ಕೂ ಮುನ್ನ ಪ್ರಿಯಾಂಕಾ ಗಾಂಧಿ ಅವರನ್ನು ಸೀತಾಪುರದ ಪಿಎಸಿ ಅತಿಥಿ ಗೃಹದಿಂದ ಬಿಡುಗಡೆ ಮಾಡಲಾಗಿತ್ತು.

ಭಾನುವಾರ ಲಖೀಮ್​ಪುರದಲ್ಲಿ ನಡೆದ ಹಿಂಸಾಚಾರದಲ್ಲಿ ನಾಲ್ವರು ರೈತರು ಸೇರಿ 8 ಜನ ಮೃತಪಟ್ಟಿದ್ದರು.

ABOUT THE AUTHOR

...view details