ಕರ್ನಾಟಕ

karnataka

ಪ್ರಯಾಗರಾಜ್‌ನಲ್ಲಿ ಪ್ರಿಯಾಂಕಾ ಗಾಂಧಿ: ಮೀನುಗಾರರ ಭೇಟಿ, ಮಾತುಕತೆ

By

Published : Feb 21, 2021, 4:14 PM IST

Updated : Feb 21, 2021, 4:35 PM IST

ಉತ್ತರಪ್ರದೇಶದ ಉಸ್ತುವಾರಿ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಪ್ರಯಾಗರಾಜ್‌ನಲ್ಲಿ ಮೀನುಗಾರ ಕುಟುಂಬದ ಸದಸ್ಯರನ್ನು ಭೇಟಿಯಾಗಿ, ಸ್ಥಳೀಯ ಪೊಲೀಸರಿಂದ ಕಿರುಕುಳಕ್ಕೊಳಗಾದ ದೋಣಿಗಾರರಿಗೆ ತಮ್ಮ ಬೆಂಬಲವನ್ನು ನೀಡಿದರು.

ಪ್ರಯಾಗರಾಜ್‌ನಲ್ಲಿ ಪ್ರಿಯಾಂಕಾ ಗಾಂಧಿ
ಪ್ರಯಾಗರಾಜ್‌ನಲ್ಲಿ ಪ್ರಿಯಾಂಕಾ ಗಾಂಧಿ

ಪ್ರಯಾಗರಾಜ್ (ಉತ್ತರ ಪ್ರದೇಶ): ಸ್ಥಳೀಯ ಪೊಲೀಸರಿಂದ ಕಿರುಕುಳಕ್ಕೊಳಗಾದ ಮೀನುಗಾರರಿಗೆ ಬೆಂಬಲ ನೀಡುವ ಸಲುವಾಗಿ ಉತ್ತರ ಪ್ರದೇಶದ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಭಾನುವಾರ ಪ್ರಯಾಗರಾಜ್ ತಲುಪಿದ್ದಾರೆ.

ಗ್ರಾಮಸ್ಥರು ಮತ್ತು ಮೀನುಗಾರರ ಕುಟುಂಬ ಸದಸ್ಯರೊಂದಿಗೆ ಪ್ರಿಯಾಂಕಾ ಮಾತುಕತೆ ನಡೆಸಿದರು. ಈ ಹಿಂದೆ ಅವರು ಮೌನಿ ಅಮವಾಸ್ಯೆ ದಿನ ಗಂಗಾನದಿಯ ಸಂಗಮ ಸ್ಥಳವಾದ ಸಂಗಮ್​​ನಲ್ಲಿ ಪುಣ್ಯಸ್ನಾನ ಮಾಡಿದ ನಂತರ, ಸುಜಿತ್​ ನಿಷಾದ್​ ಅವರ ದೋಣಿಯಲ್ಲಿ ಪ್ರಯಾಣಿಸಿದ್ದರು. ಇದರ ವಿಡಿಯೋವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದರು.

ಪ್ರಯಾಗರಾಜ್‌ನಲ್ಲಿ ಪ್ರಿಯಾಂಕಾ ಗಾಂಧಿ

ಮೀನುಗಾರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಪ್ರಿಯಾಂಕಾ ಅವರಿಗೆ ನಿಷಾದ್ ಈ ಸಮಯದಲ್ಲಿ ತಿಳಿಸಿದ್ದರು. ಅಲ್ಲದೇ ಮೀನುಗಾರರ ಮೇಲೆ ಪೊಲೀಸರು ದೌರ್ಜನ್ಯ ಎಸಗಿ, ಅವರ ಬೋಟ್​ಗಳನ್ನು ಹಾಳು ಮಾಡುತ್ತಾರೆ ಎಂದು ಹೇಳಿದ್ದರು. ಪೊಲೀಸರ ದಬ್ಬಾಳಿಕೆಯ ವಿರುದ್ಧ ಧ್ವನಿ ಎತ್ತಲು ನಿಷಾದ್​ ಪ್ರಿಯಾಂಕಾ ಸಹಾಯ ಕೋರಿದ್ದರು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಓದಿ: ಕಾಶ್ಮೀರ: ಬಾರ್ಡರ್​​​ ಪೋಸ್ಟ್‌, ಗ್ರಾಮ ಗುರಿಯಾಗಿಸಿ ಪಾಕ್​ನಿಂದ ಗುಂಡಿನ ದಾಳಿ

ಒಬಿಸಿ (ಇತರ ಹಿಂದುಳಿದ ವರ್ಗ) ಜಾತಿಯ ನಿಷಾದ್ ಸಮುದಾಯಕ್ಕೆ ಸೇರಿದ ಕೆಲವರ ದೋಣಿಗಳನ್ನು ಪೊಲೀಸರು ಹಾಗೂ ಆಡಳಿತ ಅಧಿಕಾರಿಗಳು ಧ್ವಂಸಗೊಳಿಸಿದ್ದರು ಎಂದು ಹೇಳಲಾಗಿತ್ತು.

ಉತ್ತರ ಪ್ರದೇಶ ಸರ್ಕಾರ 24 ಜೂನ್ 2019 ರಂದು ರಾಜ್ಯಾದ್ಯಂತ ಮರಳು ಗಣಿಗಾರಿಕೆಯಲ್ಲಿ ದೋಣಿಗಳ ಬಳಕೆಯನ್ನು ನಿಷೇಧಿಸಿತು. ಇದರಿಂದ ಇದ್ದಕ್ಕಿದ್ದಂತೆ ಲಕ್ಷಾಂತರ ನಿಷಾದ್‌ಗಳು ನಿರುದ್ಯೋಗಿಗಳಾದರು. ಲಕ್ಷಾಂತರ ನಿಷಾದ್‌ಗಳು ಉತ್ತರಪ್ರದೇಶದಲ್ಲಿ ತಮ್ಮ ಜೀವನೋಪಾಯಕ್ಕಾಗಿ ನದಿಗಳನ್ನು ಅವಲಂಬಿಸಿದ್ದಾರೆ.

Last Updated : Feb 21, 2021, 4:35 PM IST

ABOUT THE AUTHOR

...view details