ಕರ್ನಾಟಕ

karnataka

ETV Bharat / bharat

ಯುಪಿಯ ಸಹರಾನ್‌ಪುರದಲ್ಲಿ ಹೃದಯಾಘಾತದಿಂದ ಮತಗಟ್ಟೆ ಅಧಿಕಾರಿ ಸಾವು - ಸಹರಾನ್‌ಪುರದಲ್ಲಿ ಮತಗಟ್ಟೆ ಅಧಿಕಾರಿ ರಶೀದ್ ಅಲಿ ಖಾನ್ ಸಾವು

ಉತ್ತರಪ್ರದೇಶದಲ್ಲಿ ಇಂದು ಎರಡನೇ ಹಂತದ ಚುನಾವಣೆ ನಡೆಯುತ್ತಿದ್ದು, ಒಟ್ಟಾರೆ ಏಳು ಹಂತದ ವಿಧಾನಸಭಾ ಚುನಾವಣೆ ಇಲ್ಲಿ ನಡೆಯಲಿದೆ. ಈ ನಡುವೆ ಮತಗಟ್ಟೆಗೆ ನಿಯೋಜನೆಗೊಂಡಿದ್ದ ಅಧಿಕಾರಿ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ.

ಯುಪಿಯ ಸಹರಾನ್‌ಪುರದಲ್ಲಿ ಮತಗಟ್ಟೆ ಅಧಿಕಾರಿ ಹೃದಯಾಘಾತದಿಂದ ಸಾವು
ಯುಪಿಯ ಸಹರಾನ್‌ಪುರದಲ್ಲಿ ಮತಗಟ್ಟೆ ಅಧಿಕಾರಿ ಹೃದಯಾಘಾತದಿಂದ ಸಾವು

By

Published : Feb 14, 2022, 3:43 PM IST

ಸಹರಾನ್‌ಪುರ (ಯುಪಿ): ಸಹರಾನ್‌ಪುರದಲ್ಲಿ ಮತಗಟ್ಟೆ ಅಧಿಕಾರಿ ರಶೀದ್ ಅಲಿ ಖಾನ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರು ಬ್ಲಾಕ್ ಸರ್ಸಾವಾ ಪ್ರದೇಶದಲ್ಲಿ ಬೂತ್ 227 ರಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಉತ್ತರಪ್ರದೇಶದಲ್ಲಿ ಇಂದು ಎರಡನೇ ಹಂತದ ಚುನಾವಣೆ ನಡೆಯುತ್ತಿದ್ದು, ಒಟ್ಟಾರೆ ಏಳು ಹಂತದ ವಿಧಾನಸಭಾ ಚುನಾವಣೆ ಇಲ್ಲಿ ನಡೆಯಲಿದೆ.

ಸಹರಾನ್‌ಪುರ, ಬಿಜ್ನೋರ್, ಮೊರಾದಾಬಾದ್, ಸಂಭಾಲ್, ರಾಂಪುರ, ಅಮ್ರೋಹಾ, ಬದೌನ್, ಬರೇಲಿ ಮತ್ತು ಶಹಜಹಾನ್‌ಪುರದ ಒಂಬತ್ತು ಜಿಲ್ಲೆಗಳಲ್ಲಿ 55 ಸ್ಥಾನಗಳಲ್ಲಿ ಇಂದು ಚುನಾವಣೆ ನಡೆಯುತ್ತಿದೆ. ಈ ಹಂತದಲ್ಲಿ 586 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಎರಡು ಕೋಟಿಗೂ ಹೆಚ್ಚು ಮತದಾರರು ಇವರ ಭವಿಷ್ಯ ನಿರ್ಧಾರ ಮಾಡಲಿದ್ದಾರೆ.

ಇದನ್ನೂ ಓದಿ: ಹಿಜಾಬ್ ಅರ್ಜಿಗಳ ವಿಚಾರಣೆ ಪ್ರಾರಂಭ.. ಮಾಧ್ಯಮಗಳು ಜವಾಬ್ದಾರಿಯಿಂದ ನಡೆದಕೊಳ್ಳಬೇಕು.. ಸಿಜೆ ಮನವಿ

1,07,61,476 ಪುರುಷ ಮತದಾರರು ಮತ್ತು 93,79,704 ಮಹಿಳೆಯರು ಇದ್ದು, ಭಾರತೀಯ ಚುನಾವಣಾ ಆಯೋಗವು ಈ ಹಂತದಲ್ಲಿ 12,544 ಮತಗಟ್ಟೆಗಳನ್ನು ಸ್ಥಾಪಿಸಿದೆ.

ABOUT THE AUTHOR

...view details