ಪ್ರಯಾಗರಾಜ್: ಉತ್ತರಪ್ರದೇಶದ ಹಲವೆಡೆ ಮಳೆಯಾಗುತ್ತಿರುವುದರಿಂದ ದಿನೇದಿನೆ ಗಂಗಾ ನದಿಯ ನೀರಿನ ಪ್ರಮಾಣ ಹೆಚ್ಚಾಗುತ್ತಿದೆ. ಇದರಿಂದಾಗಿ ಪಕ್ಕದಲ್ಲಿರುವ ಫಫಮೌ ಘಾಟ್ಗೆ ನದಿಯ ನೀರಿನ ಅಲೆಗಳು ಜೋರಾಗಿ ಅಪ್ಪಳಿಸುತ್ತಿದ್ದು, ನದಿ ತೀರದಲ್ಲಿ ಸವೆತ ಉಂಟಾಗಿದೆ.
ಕಳೆದ ಒಂದೂವರೆ ತಿಂಗಳಿಂದ ಮೃತಪಟ್ಟಿದ್ದ ಕೋವಿಡ್ ರೋಗಿಗಳನ್ನು ದಡದಲ್ಲಿಯೇ ಸಮಾಧಿ ಮಾಡಿದ್ದರಿಂದ, ಹೆಣಗಳು ತೇಲಿ ಬರುವ ಸಾಧ್ಯತೆಯಿದೆ. ಒಂದು ವೇಳೆ ಶವಗಳು ತೇಲಿ ಬಂದರೆ ಮಾಲಿನ್ಯ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಹಾಗಾಗಿ ಜಿಲ್ಲಾಡಳಿತವು ಈಗಾಗಲೇ ಹೂಳಲಾಗಿರುವ ಮೃತದೇಹಗಳನ್ನು ಹೊರತೆಗೆದು ವಿಲೇವಾರಿ ಮಾಡಲು ಮುಂದಾಗಿದೆ.
ಜಿಲ್ಲೆಯಲ್ಲಿ ಫಫಮೌ, ಶ್ರೀಂಗ್ವರ್ಪುರ್ ಮತ್ತು ದಿಯೋರಖ್ ಘಾಟ್ ಪ್ರಮುಖ ಸ್ಮಶಾನಗಳಾಗಿವೆ. ಸ್ಥಳೀಯ ಸರ್ಕಾರಿ ಸಂಸ್ಥೆಗಳು ಘಟ್ಟಗಳ ಮೇಲೆ ಸಮಾಧಿ ಮಾಡುವುದನ್ನು ನಿಷೇಧಿಸಿದೆ. ಹಾಗಾಗಿ ಮೃತದೇಹಗಳನ್ನು ಸುಡಲು ಜಿಲ್ಲಾಡಳಿತ ಮುಂದಾಗಿದೆ.