ನವದೆಹಲಿ :ರಾಷ್ಟ್ರ ರಾಜಧಾನಿಯಲ್ಲಿನ ವಿದ್ಯುತ್ ಪರಿಸ್ಥಿತಿಯ ಬಗ್ಗೆ ದೆಹಲಿ ಸರ್ಕಾರವು ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡುವ ಮೂಲಕ ದಾರಿ ತಪ್ಪಿಸುತ್ತಿದೆ ಎಂದು ಕೇಂದ್ರ ವಿದ್ಯುತ್ ಸಚಿವ ಆರ್ ಕೆ ಸಿಂಗ್ ಆರೋಪಿಸಿದ್ದಾರೆ. ದೆಹಲಿಯ ವಿದ್ಯುತ್ ಸಚಿವರು ಬರೆದ ಪತ್ರಕ್ಕೆ ಪ್ರತಿಕ್ರಿಯಿಸಿರುವ ಅವರು, ದೆಹಲಿ ಸರ್ಕಾರವು ತಪ್ಪು ಮಾಹಿತಿಗಳ ಮೂಲಕ ಸಾರ್ವಜನಿಕರನ್ನು ದಾರಿ ತಪ್ಪಿಸುತ್ತಿದೆ ಅಂತಾ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದೆಹಲಿಯ ಎನ್ಸಿಟಿಗೆ ವಿದ್ಯುತ್ ಪೂರೈಸುವ ಕೆಲವು ಎನ್ಟಿಪಿಸಿ ಸ್ಟೇಷನ್ಗಳ ಕಲ್ಲಿದ್ದಲು ದಾಸ್ತಾನುಗಳ ಅಂಕಿ-ಅಂಶಗಳ ಬಗ್ಗೆ ದೆಹಲಿಯ ವಿದ್ಯುತ್ ಸಚಿವರು ಬರೆದ ಪತ್ರಕ್ಕೆ ಉತ್ತರಿಸಿರುವ ಕೇಂದ್ರ ವಿದ್ಯುತ್ ಸಚಿವ ಆರ್ ಕೆ ಸಿಂಗ್, ದೆಹಲಿಯ ವಿದ್ಯುತ್ ಸಚಿವರು ನೀಡಿರುವ ಅಂಕಿ-ಅಂಶಗಳು ತಪ್ಪಾಗಿರುವುದಾಗಿ ಹೇಳಿದ್ದಾರೆ.
ಸಿಂಗ್ ಅವರ ಪ್ರಕಾರ, ದಾದ್ರಿ ಸ್ಥಾವರದಲ್ಲಿ ಸುಮಾರು 202.40 ಸಾವಿರ ಟನ್ಗಳಷ್ಟು ಕಲ್ಲಿದ್ದಲಿದ್ದು, ಇದು 8 ದಿನಗಳವರೆಗೆ ಸಾಕಾಗುತ್ತದೆ ಎಂದು ಹೇಳಿದ್ದಾರೆ. ಅಂತೆಯೇ ಉಂಚಹಾರ್ ಸ್ಥಾವರದಲ್ಲಿ ಸುಮಾರು 97.62 ಸಾವಿರ ಟನ್ಗಳಷ್ಟು ಕಲ್ಲಿದ್ದಲು ಇದ್ದು, ಇದು 4 ದಿನಗಳವರೆಗೆ ಸಾಕಾಗುವಷ್ಟು ಇದೆ ಎಂದು ಹೇಳಿದ್ದಾರೆ.