ಬೆತುಲ್(ಮಧ್ಯಪ್ರದೇಶ): ಒಂದು ವಾರದ ಹಿಂದೆ ಬೆತುಲ್ನಲ್ಲಿ ನಡೆದ ಚಿನ್ನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 8 ಮಂದಿ ಖದೀಮರನ್ನು ಬಂಧಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಎಸ್ಪಿ ಸಿಮಲ ಪ್ರಸಾದ್, "ಮೇ 31 ರಂದು ಚಿಂದ್ವಾರ ನಿವಾಸಿ ರಾಜಕುಮಾರ ಸೋನಿ ಎಂಬವರಿಂದ 2.5 ಲಕ್ಷ ರೂ. ನಗದು ಮತ್ತು 2 ಲಕ್ಷ ರೂ. ಮೌಲ್ಯದ ಐದು ವಜ್ರಗಳನ್ನು ಖದೀಮರು ದೋಚಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಅದರ ಸಹಾಯದಿಂದ ಪೊಲೀಸರು ಜಾರ್ಖಂಡ್ನ ಅಮ್ಡೋ ನಿವಾಸಿ ಕರಣ್ ಎಂಬಾತನನ್ನು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸಲಾಗಿದೆ ಎಂದರು.