ವಲ್ಸಾದ್(ಗುಜರಾತ್):ಧರಂಪುರ್ ವಲ್ಸಾದ್ ರಸ್ತೆ ಹತ್ತಿರವಿರುವ ಹೋಟೆಲ್ ಹೊರೈಜಾನ್ ಸಮೀಪ ರಾಜ್ಯ ಸಾರಿಗೆ ಬಸ್ ಅಪಘಾತ ಸಂಭವಿಸಿದೆ. ಮದ್ಯದ ಅಮಲಿನಲ್ಲಿದ ಬಸ್ ಚಾಲಕ ನಿಯಂತ್ರಣ ಕಳೆದುಕೊಂಡು ಪಾದಚಾರಿಗೆ ಡಿಕ್ಕಿ ಹೊಡೆದಿದ್ದಾನೆ.
ಸೋಮವಾರ ಮಧ್ಯಾಹ್ನ 1 ಗಂಟೆಗೆ ಧರಂಪುರ್ - ಭರೂಚ್ ಬಸ್ ಚಾಲಕ ವಿಜಯಸಿಂಗ್ ಡೋಲತ್ಸಿನ್ಹ್ ಸೋಲಂಕಿ ನಂ40ರ ಬ್ಯಾಚ್ನ ಚಾಲಕ ಎಂದು ಗುರುತಿಸಲಾಗಿದೆ. ಧರಂಪುರದಿಂದ ಪ್ರವಾಸಿಗರನ್ನು ಭರೂಚ್ಗೆ ಕರೆತರುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಡಿಪೋದಿಂದ ನಿರ್ಗಮಿಸುವಾಗ ಚಾಲಕ ಪಾನಮತ್ತನಾಗಿದ್ದ ಮೊದಲು ಖೇರ್ಗಾಮ್ ರಸ್ತೆ ಬೈಪಾಸ್ ಬಳಿ ಬಸ್ ಡಿವೈಡರ್ಗೆ ಡಿಕ್ಕಿಯಾಗಿದೆ ಒಳಗಿದ್ದ ಪ್ರವಾಸಿಗರು ಜೀವ ಭಯದಿಂದ ಚಿರಾಡಿದ್ದಾರೆ. ನಂತರ ಬಸ್ ಧರಂಪುರ್ ವಲ್ಸಾದ್ ರಸ್ತೆಯ ಹೊಟೇಲ್ ಹೊರೈಜಾನ್ ಸಮೀಪದ ರಸ್ತೆ ಬದಿಯಲ್ಲಿ ನಿಂತಿದ್ದ ಮನೋಜ್ ವಸಾನಿಗೆ ಡಿಕ್ಕಿಯಾಗಿದೆ ಕೂಡಲೇ ಅವರನ್ನು ಶ್ರೀಮದ್ ರಾಜಚಂದ್ರ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ
ಕಂಡಕ್ಟರ್ ನ ಸಮಯ ಪ್ರಜ್ಞೆ: ಘಟನೆ ನಡೆದ ತಕ್ಷಣ ಕಂಡಕ್ಟರ್ ಚಾಲಕನಿಂದ ಬಸ್ ಕೀಯನ್ನು ತೆಗೆದುಕೊಂಡಿದ್ದಾರೆ. ಚಾಲಕನನ್ನು ಬಸ್ನಿಂದ ಕೆಳಗಿಳಿಯುವಂತೆ ಸೂಚಿಸಿದ್ದಾರೆ. ಆದರೆ, ಚಾಲಕ ನಿಲ್ಲಲು ಸಾಧ್ಯವಾಗದಷ್ಟು ಕುಡಿದಿರುವುದು ತಿಳಿದು ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಸ್ ಚಾಲಕನ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡು ಆತನನ್ನು ಬಂಧಿಸಿದ್ದಾರೆ.
ಇದನ್ನೂ ಓದಿ:ಕಂಡಕ್ಟರ್ ಮೇಲೆ ಪ್ರಯಾಣಿಕರಿಂದ ಹಲ್ಲೆ.. ಬಸ್ನೊಂದಿಗೆ ಪೊಲೀಸ್ ಠಾಣೆಗೆ ಬಂದ ಚಾಲಕ