ನವದೆಹಲಿ:ಕಣ್ಣಿನ ಆಸ್ಪತ್ರೆಗಳನ್ನು ನಡೆಸುತ್ತಿರುವ ಪ್ರವರ್ತಕರ ಮೇಲೆ ವಿವಾದಗಳನ್ನು ಪರಿಹರಿಸಲು ಒತ್ತಡ ಹೇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಯಾಂಕ್ ತಿವಾರಿ ಅವರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ಸಿಬಿಸಿ ದಾಳಿ ಮಾಡಿ ಪರಿಶೀಲನೆ ಕೈಗೊಂಡಿತ್ತು. ಶೋಧದ ವೇಳೆ ಹಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅವುಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಸಿಬಿಐ ತಿಳಿಸಿದೆ. ಆದರೆ, ತಿವಾರಿ ಅವರನ್ನು ಇನ್ನೂ ಬಂಧಿಸಲಾಗಿಲ್ಲ.
ಪ್ರಧಾನಿ ಕಾರ್ಯಾಲಯದ (ಪಿಎಂಒ) ಅಧಿಕಾರಿಯಂತೆ ನಟಿಸಿ ವಿವಾದ ಬಗೆಹರಿಸುವಂತೆ ಒತ್ತಡ ಹೇರಿದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಸಂಬಂಧ ಸಿಬಿಐ ಇದೀಗ ತನಿಖೆ ಆರಂಭಿಸಿದೆ. ಈ ತನಿಖೆಗೆ ಸಂಬಂಧಿಸಿದಂತೆ ಸಿಬಿಐ ಅಹಮದಾಬಾದ್ನಲ್ಲಿರುವ ಮಯಾಂಕ್ ತಿವಾರಿ ಅವರ ಆವರಣದಲ್ಲಿ ಶೋಧ ನಡೆಸಿತು. ಇಂದೋರ್ನ ಆಸ್ಪತ್ರೆಯೊಂದರ ಪ್ರವರ್ತಕರ ಮೇಲೆ ಆರೋಪಿಗಳು 16 ಕೋಟಿ ರೂಪಾಯಿ ಬಾಕಿಯನ್ನು ಪಾವತಿಸದಂತೆ ಒತ್ತಡ ಹೇರಿದ್ದರು ಎಂದು ಸಿಬಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಿಬಿಐ ತಂಡ ತನ್ನ ಶೋಧದ ವೇಳೆ ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದೆ.
ಇಂದೋರ್ ಆಸ್ಪತ್ರೆಯು ಇನ್ನೊಂದು ಆಸ್ಪತ್ರೆಗೆ 16 ಕೋಟಿ ರೂಪಾಯಿ ಪಾವತಿಸಬೇಕಾಗಿತ್ತು. ಈ ಹಿನ್ನೆಲೆಯಲ್ಲಿ ತಿವಾರಿ ಅವರು ತಮ್ಮ ಮೊಬೈಲ್ ಫೋನ್ನಿಂದ ಕರೆಗಳು ಮತ್ತು ಸಂದೇಶಗಳ ಮೂಲಕ ಆಸ್ಪತ್ರೆಯೊಂದಿಗಿನ ವಿವಾದವನ್ನು ಪರಿಹರಿಸುವಂತೆ ಇಂದೋರ್ನ ಖಾಸಗಿ ಆಸ್ಪತ್ರೆಯ ಪ್ರವರ್ತಕರನ್ನು ಕೇಳಿದ್ದಾರೆ ಎಂದು ಸಿಬಿಐ ತನಿಖೆಯಿಂದ ತಿಳಿದು ಬಂದಿದೆ.