ಕರ್ನಾಟಕ

karnataka

ETV Bharat / bharat

ಕಾಶ್ಮೀರದಿಂದ ಜಮ್ಮುವಿಗೆ ವಲಸೆ: 1990ರ ದಶಕಕ್ಕಿಂತಲೂ ಅಪಾಯಕಾರಿ ಎಂದ ಉದ್ಯೋಗಿ - targeted killings by terrorists has triggered another round of exits of migrant Hindus and Kashmiri Pandits

ಪಿಎಂ ಪ್ಯಾಕೇಜ್ ಅಡಿ ಕೆಲಸ ಮಾಡುತ್ತಿದ್ದ ಉದ್ಯೋಗಿಯೊಬ್ಬರು ಕಣಿವೆಯಲ್ಲಿನ ಪರಿಸ್ಥಿತಿ ಬಗ್ಗೆ ವಿವರಿಸಿದ್ದಾರೆ. ಗುರುವಾರ ರಾಜಸ್ಥಾನದ ಬ್ಯಾಂಕ್ ಮ್ಯಾನೇಜರ್ ಮತ್ತು ಬಿಹಾರದ ವಲಸೆ ಕಾರ್ಮಿಕನ ಹತ್ಯೆಯನ್ನು ಉಲ್ಲೇಖಿಸಿದ ಅವರು, ಅನೇಕ ಕುಟುಂಬಗಳು ಕಾಶ್ಮೀರವನ್ನು ತೊರೆದು ಇಂದು ಜಮ್ಮುವಿಗೆ ತಲುಪಿದ್ದಾರೆ ಎಂದು ಕೌಲ್ ಹೇಳಿದ್ದಾರೆ.

ಕಾಶ್ಮೀರದಿಂದ ಜಮ್ಮುವಿಗೆ ವಲಸೆ: 1990ರ ದಶಕಕ್ಕಿಂತಲೂ ಅಪಾಯಕಾರಿಯಾಗಿದೆ ಎಂದ ಉದ್ಯೋಗಿ
ಕಾಶ್ಮೀರದಿಂದ ಜಮ್ಮುವಿಗೆ ವಲಸೆ: 1990ರ ದಶಕಕ್ಕಿಂತಲೂ ಅಪಾಯಕಾರಿಯಾಗಿದೆ ಎಂದ ಉದ್ಯೋಗಿ

By

Published : Jun 3, 2022, 9:33 PM IST

ಶ್ರೀನಗರ: ಭಯೋತ್ಪಾದಕರ ಉದ್ದೇಶಿತ ಹತ್ಯೆಗಳ ಹೆಚ್ಚಳ ಹಿಂದೂಗಳು ಮತ್ತು ಕಾಶ್ಮೀರಿ ಪಂಡಿತರ ಮತ್ತೊಂದು ಸುತ್ತಿನ ನಿರ್ಗಮನವನ್ನು ಪ್ರಚೋದಿಸಿದೆ. ಪ್ರಧಾನಿಯವರ ಪರಿಹಾರ ಪ್ಯಾಕೇಜ್ ಅಡಿ ಕೆಲಸ ಮಾಡುತ್ತಿದ್ದ ಹಲವಾರು ಸರ್ಕಾರಿ ನೌಕರರು ಜಮ್ಮು ತಲುಪಿದ ನಂತರ ಕಾಶ್ಮೀರದಲ್ಲಿನ ಹದಗೆಟ್ಟ ಪರಿಸ್ಥಿತಿಯನ್ನು ಎತ್ತಿ ತೋರಿಸಿದ್ದಾರೆ.

ಪಿಎಂ ಪ್ಯಾಕೇಜ್ ಅಡಿಯಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಯೊಬ್ಬರು ಕಣಿವೆಯಲ್ಲಿನ ಪರಿಸ್ಥಿತಿ ಬಗ್ಗೆ ವಿವರಿಸಿದ್ದಾರೆ. ಗುರುವಾರ ರಾಜಸ್ಥಾನದ ಬ್ಯಾಂಕ್ ಮ್ಯಾನೇಜರ್ ಮತ್ತು ಬಿಹಾರದ ವಲಸೆ ಕಾರ್ಮಿಕನ ಹತ್ಯೆಯನ್ನು ಉಲ್ಲೇಖಿಸಿದ ಅವರು, ಅನೇಕ ಕುಟುಂಬಗಳು ಕಾಶ್ಮೀರವನ್ನು ತೊರೆದು ಇಂದು ಜಮ್ಮುವಿಗೆ ತಲುಪಿದ್ದಾರೆ ಎಂದು ಕೌಲ್ ಹೇಳಿದ್ದಾರೆ.

ಕಾಶ್ಮೀರದಿಂದ ಜಮ್ಮುವಿಗೆ ವಲಸೆ: 1990ರ ದಶಕಕ್ಕಿಂತಲೂ ಅಪಾಯಕಾರಿಯಾಗಿದೆ ಎಂದ ಉದ್ಯೋಗಿ

ಇಂದಿನ ಕಾಶ್ಮೀರವು 1990ರ ದಶಕಕ್ಕಿಂತಲೂ ಅಪಾಯಕಾರಿಯಾಗಿದೆ. ಪ್ರಶ್ನೆ ಎಂದರೆ ನಮ್ಮದೇ ಜನರು ನಮ್ಮ ಕಾಲೋನಿಗಳಲ್ಲಿ ಏಕೆ ಬೀಗ ಹಾಕಿದ್ದಾರೆ ಎಂಬುದು. ಸಂಬಂಧಿಸಿದ ಸರ್ಕಾರಿ ಇಲಾಖೆ ಈ ವೈಫಲ್ಯವನ್ನು ಏಕೆ ಮರೆಮಾಚುತ್ತಿದೆ ಎಂದು ಪ್ರಶ್ನಿಸಿದ್ದಾರೆ. ಇಲ್ಲಿ ಭದ್ರತಾ ಸಿಬ್ಬಂದಿಯೂ ಸಹ ಸುರಕ್ಷಿತವಾಗಿಲ್ಲ ಇನ್ನು ಕಾಶ್ಮೀರದಲ್ಲಿ ನಾಗರಿಕರು ಹೇಗೆ ತಾನೆ ತಮ್ಮನ್ನು ತಾವು ರಕ್ಷಿಸಿಕೊಳ್ಳುತ್ತಾರೆ ಎಂದಿದ್ದಾರೆ.

ಇದನ್ನೂ ಓದಿ:ಭಾರತದಲ್ಲಿ ವಿಶ್ವದ ಮೊದಲ ಲಿಕ್ವಿಡ್ ಮಿರರ್ ಟೆಲಿಸ್ಕೋಪ್ ಕಾರ್ಯಾರಂಭ

For All Latest Updates

TAGGED:

ABOUT THE AUTHOR

...view details