ಕರ್ನಾಟಕ

karnataka

ETV Bharat / bharat

ನಾಳೆ ರೈತರ ಖಾತೆಗೆ 8ನೇ ಕಂತಿನ ಪಿಎಂ ಕಿಸಾನ್ ಯೋಜನೆ ಮೊತ್ತ.. ಅನ್ನದಾತರೊಂದಿಗೆ ನಮೋ ಸಂವಾದ - ರೈತರ ಖಾತೆಗೆ ಪಿಎಂ ಸಮ್ಮಾನ್ ನಿಧಿ

ಪಿಎಂ ಕಿಸಾನ್​ ಸಮ್ಮಾನ್ ನಿಧಿ ಯೋಜನೆಯ 19,000 ಕೋಟಿ ರೂಪಾಯಿ ನಾಳೆ ರಿಲೀಸ್ ಆಗುತ್ತಿದ್ದು, 9.5 ಕೋಟಿ ರೈತರು ಇದರ ಪ್ರಯೋಜನ ಪಡೆಯಲಿದ್ದಾರೆ.

PM-KISAN
PM-KISAN

By

Published : May 13, 2021, 3:08 PM IST

ನವದೆಹಲಿ:ಅನ್ನದಾತರ ಖಾತೆಗಳಿಗೆ ನಾಳೆ 8ನೇ ಕಂತಿನ ಪಿಎಂ ಕಿಸಾನ್​ ಸಮ್ಮಾನ್​ ನಿಧಿ ಯೋಜನೆ ಮೊತ್ತ ವರ್ಗಾವಣೆಗೊಳ್ಳಲಿದೆ. ಇದರ ಬೆನ್ನಲ್ಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿ ರೈತರೊಂದಿಗೆ ಸಂವಾದ ನಡೆಸಲಿದ್ದಾರೆ.

ನಾಳೆ ಬೆಳಗ್ಗೆ 11 ಗಂಟೆಗೆ ಪ್ರಧಾನಿ ಮೋದಿ ದೇಶದ ರೈತರೊಂದಿಗೆ ಸಂವಾದ ನಡೆಸಲಿದ್ದು, ಅದಕ್ಕೂ ಮೊದಲು 19,000 ಕೋಟಿ ರೂ.ಯನ್ನು 9.5 ಕೋಟಿ ರೈತರ ಖಾತೆಗಳಿಗೆ ಬಿಡುಗಡೆ ಮಾಡಲಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್​ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ಕಳೆದ ಕೆಲ ತಿಂಗಳಿಂದ ರೈತರ ಖಾತೆಗಳಿಗೆ ಪಿಎಂ ಕಿಸಾನ್ ಯೋಜನೆ ಹಣ ಜಮಾವಣೆ ಆಗಿರಲಿಲ್ಲ. ಆದರೆ ಶುಕ್ರವಾರ ಅನ್ನದಾತರ ಖಾತೆಗಳಿಗೆ ಹಣ ಬರಲಿದೆ.

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಪ್ರಕಾರ ಪ್ರತಿ ವರ್ಷ ರೈತರ ಖಾತೆಗಳಿಗೆ ಮೂರು ಹಂತಗಳಲ್ಲಿ 6 ಸಾವಿರ ರೂ. ಜಮಾವಣೆಯಾಗುತ್ತಿದ್ದು, ಪ್ರತಿ ನಾಲ್ಕು ತಿಂಗಳಿಗೆ ಒಂದು ಸಲ 2 ಸಾವಿರ ರೂ. ವರ್ಗಾವಣೆಯಾಗುತ್ತದೆ.

ABOUT THE AUTHOR

...view details