ಕರ್ನಾಟಕ

karnataka

By ETV Bharat Karnataka Team

Published : Jan 18, 2024, 3:37 PM IST

ETV Bharat / bharat

ಅಯೋಧ್ಯೆ ರಾಮಮಂದಿರ ಸ್ಮರಣಾರ್ಥ ಅಂಚೆ ಚೀಟಿ ಬಿಡುಗಡೆ ಮಾಡಿದ ಪ್ರಧಾನಿ ಮೋದಿ

ಅಯೋಧ್ಯೆ ರಾಮ ಮಂದಿರದ ಸ್ಮರಣಾರ್ಥ ಇಂದು ಪ್ರಧಾನಿ ಮೋದಿ ವಿಶೇಷ ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಿದರು.

PM Modi launches postage stamps on Ayodhya's Ram Mandir
PM Modi launches postage stamps on Ayodhya's Ram Mandir

ನವದೆಹಲಿ:ಅಯೋಧ್ಯೆಯ ರಾಮ ಮಂದಿರದ ಸ್ಮರಣಾರ್ಥ ಅಂಚೆ ಚೀಟಿಗಳನ್ನು ಮತ್ತು ವಿಶ್ವಾದ್ಯಂತ ಭಗವಾನ್ ರಾಮನ ಬಗ್ಗೆ ಬಿಡುಗಡೆ ಮಾಡಲಾದ ಅಂಚೆ ಚೀಟಿಗಳ ಪುಸ್ತಕವನ್ನು ಪ್ರಧಾನಿ ನರೇಂದ್ರ ಮೋದಿ ಗುರುವಾರ ಬಿಡುಗಡೆ ಮಾಡಿದರು. ರಾಮ ಮಂದಿರ, ಚೌಪೈ 'ಮಂಗಲ್ ಭವನ ಅಮಂಗಲ್ ಹರಿ', ಸೂರ್ಯ, ಸರಯೂ ನದಿ, ದೇವಾಲಯದ ಮತ್ತು ಸುತ್ತಮುತ್ತಲಿನ ಶಿಲ್ಪಗಳ ಚಿತ್ರಗಳನ್ನು ಅಂಚೆ ಚೀಟಿಗಳು ಒಳಗೊಂಡಿವೆ. ರಾಮ ಮಂದಿರ, ಗಣೇಶ, ಹನುಮಾನ್, ಜಟಾಯು, ಕೇವತ್ರಾಜ್ ಮತ್ತು ಮಾ ಶಬ್ರಿ ಎಂಬ 6 ಅಂಚೆ ಚೀಟಿಗಳನ್ನು ಇಂದು ಬಿಡುಗಡೆ ಮಾಡಲಾಗಿದೆ.

'ಪಂಚಭೂತಗಳು' ಅಥವಾ ಐದು ಭೌತಿಕ ಅಂಶಗಳಾದ ಆಕಾಶ, ಗಾಳಿ, ಬೆಂಕಿ, ಭೂಮಿ ಮತ್ತು ನೀರು ಇವುಗಳ ಸಂಕೇತಗಳನ್ನು ಒಳಗೊಂಡಿರುವುದರಿಂದ ಈ ಅಂಚೆ- ಚೀಟಿಗಳು ವಿಶಿಷ್ಟವಾಗಿವೆ. ವಿವಿಧ ವಿನ್ಯಾಸ ಅಂಶಗಳ ಮೂಲಕ, ಅಂಚೆ ಚೀಟಿಗಳು ಪಂಚಮಹಾಭೂತಗಳ ಪರಿಪೂರ್ಣ ಸಾಮರಸ್ಯವನ್ನು ಸಂಕೇತಿಸುತ್ತವೆ. ಇವು ಹಿಂದೂ ತತ್ವಶಾಸ್ತ್ರದ ಎಲ್ಲ ಅಭಿವ್ಯಕ್ತಿಗಳ ಮೂಲ ಅಂಶಗಳಾಗಿವೆ.

ಸ್ಟಾಂಪ್ ಬುಕ್ ವಿವಿಧ ಸಮಾಜಗಳು ಶ್ರೀ ರಾಮನ ಮೇಲಿಟ್ಟಿರುವ ಶ್ರದ್ಧೆಯನ್ನು ಬಿಂಬಿಸುವ ಪ್ರಯತ್ನವಾಗಿದೆ. 48 ಪುಟಗಳ ಈ ಪುಸ್ತಕವು ಅಮೆರಿಕ, ನ್ಯೂಜಿಲ್ಯಾಂಡ್​, ಸಿಂಗಾಪುರ್, ಕೆನಡಾ, ಕಾಂಬೋಡಿಯಾ ಮತ್ತು ವಿಶ್ವಸಂಸ್ಥೆಯಂತಹ ಸಂಸ್ಥೆಗಳು ಸೇರಿದಂತೆ 20 ಕ್ಕೂ ಹೆಚ್ಚು ದೇಶಗಳು ಬಿಡುಗಡೆ ಮಾಡಿದ ಅಂಚೆಚೀಟಿಗಳನ್ನು ಒಳಗೊಂಡಿದೆ.

"ಇಂದು, ರಾಮ ಮಂದಿರ ಪ್ರಾಣ ಪ್ರತಿಷ್ಠಾನ ಸಮಾರಂಭಕ್ಕೆ ಸಂಬಂಧಿಸಿದ ಮತ್ತೊಂದು ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳಲು ನನಗೆ ಅವಕಾಶ ಸಿಕ್ಕಿದೆ. ಇಂದು ರಾಮ ಮಂದಿರಕ್ಕೆ ಸಮರ್ಪಿತವಾದ ಆರು ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಲಾಗಿದೆ. ಇದಲ್ಲದೇ, ವಿಶ್ವದಾದ್ಯಂತ ಭಗವಾನ್ ರಾಮನ ಬಗ್ಗೆ ಬಿಡುಗಡೆ ಮಾಡಿದ ಅಂಚೆಚೀಟಿಗಳ ಪುಸ್ತಕವನ್ನು ಸಹ ಬಿಡುಗಡೆ ಮಾಡಲಾಯಿತು" ಎಂದು ಪ್ರಧಾನಿ ಮೋದಿ ವಿಡಿಯೋ ಹೇಳಿಕೆಯಲ್ಲಿ ತಿಳಿಸಿದ್ದಾರೆ.

"ಭಗವಾನ್ ರಾಮ, ಸೀತಾ ದೇವಿ ಮತ್ತು ರಾಮಾಯಣದ ಕಥೆಗಳು ಧರ್ಮ ಅಥವಾ ಜಾತಿಯನ್ನು ಲೆಕ್ಕಿಸದೇ ಎಲ್ಲರೊಂದಿಗೂ ಸಂಬಂಧ ಹೊಂದಿವೆ. ಎಲ್ಲ ಸವಾಲುಗಳ ಹೊರತಾಗಿಯೂ ಪ್ರೀತಿಯ ವಿಜಯದ ಬಗ್ಗೆ ರಾಮಾಯಣವು ನಮಗೆ ಕಲಿಸುತ್ತದೆ. ಇದು ಇಡೀ ಮಾನವೀಯತೆಯನ್ನು ಸಂಪರ್ಕಿಸುತ್ತದೆ ಮತ್ತು ಅದಕ್ಕಾಗಿಯೇ ಇದು ಇಡೀ ಪ್ರಪಂಚದಾದ್ಯಂತ ಮೆಚ್ಚುಗೆ ಗಳಿಸಿದೆ" ಎಂದು ಅವರು ಹೇಳಿದರು. ರಾಮ ಮಂದಿರದ ಉದ್ಘಾಟನೆಯು ಭಾರತೀಯರಿಗೆ ಮಹತ್ವದ ಸಂದರ್ಭವಾಗಿದೆ. ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಆಯೋಜಿಸಿರುವ ಈ ಕಾರ್ಯಕ್ರಮವು 2024 ರ ಜನವರಿ 22 ರಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಡೆಯಲಿದೆ.

ಇದನ್ನೂ ಓದಿ : 'ಜೈ ಶ್ರೀ ರಾಮ್' ಘೋಷಣೆಯೊಂದಿಗೆ ಅಯೋಧ್ಯೆ ದೇಗುಲದ ಗರ್ಭಗುಡಿ ತಲುಪಿದ ರಾಮಲಲ್ಲಾ ಮೂರ್ತಿ

ABOUT THE AUTHOR

...view details