ಹೈದರಾಬಾದ್:ತೆಲಂಗಾಣದ ಸಿಕಂದರಾಬಾದ್ನಿಂದ ಆಂಧ್ರಪ್ರದೇಶದ ವಿಶಾಖಪಟ್ಟಣಂ ಅನ್ನು ಸಂಪರ್ಕಿಸುವ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಭಾನುವಾರ ಚಾಲನೆ ನೀಡಿದ್ದಾರೆ. 700 ಕಿಮೀ ಅಂತರದ ಈ ರೈಲು ಎರಡು ತೆಲುಗು ಭಾಷಿಕ ರಾಷ್ಟ್ರಗಳನ್ನು ಬೆಸೆಯಲಿದೆ. ಇದು ದೇಶದ ಒಟ್ಟಾರೆ 8ನೇ ವಂದೇ ಭಾರತ್ ರೈಲಾಗಿದೆ.
ರೈಲಿಗೆ ಚಾಲನೆ ನೀಡಿ ಮಾತನಾಡಿದ ಮೋದಿ, 'ಸಿಕಂದರಾಬಾದ್ ಮತ್ತು ವಿಶಾಖಪಟ್ಟಣಂ ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ ಸಂಚಾರ ಆರಂಭವಾಗಿದ್ದು, ನನಗೆ ಸಂತೋಷವಾಗಿದೆ. ಇದು ಜನರ ಸಂಚಾರ ಸೌಕರ್ಯ, ಪ್ರವಾಸೋದ್ಯಮ ಮತ್ತು ಆರ್ಥಿಕತೆಗೆ ಉತ್ತೇಜನ ನೀಡಲಿದೆ. ತೆಲಂಗಾಣ ಮತ್ತು ಆಂಧ್ರಪ್ರದೇಶದ ಜನರಿಗೆ ನೀಡಿದ ಉಡುಗೊರೆಯಾಗಿ ಭಾವಿಸುವೆ' ಎಂದು ಹೇಳಿದರು.
ಜನರಿಗೆ ಲಾಭವೇನು?: 'ಉಭಯ ನಗರಗಳ ನಡುವೆ ಇರುವ ಅಂತರವನ್ನು ಈ ರೈಲು 700 ಕಿ.ಮೀ ತಗ್ಗಿಸಿದೆ. ಪ್ರಯಾಣದ ಸಮಯವನ್ನು ಕಡಿತಗೊಳಿಸುವುದರ ಜೊತೆಗೆ ಪ್ರವಾಸೋದ್ಯಮಕ್ಕೂ ಪುಷ್ಠಿ ನೀಡಲಿದೆ. ಈ ಎಕ್ಸ್ಪ್ರೆಸ್ ರೈಲು ತೆಲಂಗಾಣ ಮತ್ತು ಆಂಧ್ರಪ್ರದೇಶದ ಸಂಸ್ಕೃತಿ ಮತ್ತು ಪರಂಪರೆಯನ್ನು ಬಿಂಬಿಸುತ್ತದೆ. ವಂದೇ ಭಾರತ್ ಎಕ್ಸ್ಪ್ರೆಸ್ನಿಂದಾಗಿ ದೇಶದ ಎಲ್ಲದರಲ್ಲೂ ಉತ್ತಮವಾದುದು ಎಂದು ಸೂಚಿಸುತ್ತದೆ. ಈ ಎಕ್ಸ್ಪ್ರೆಸ್ ಹೊಸ ಸಂಕಲ್ಪ ಮತ್ತು ಸಾಮರ್ಥ್ಯದ ಸಂಕೇತವಾಗಿದೆ' ಎಂದು ಪ್ರಧಾನಿ ಬಣ್ಣಿಸಿದರು. ರೈಲು ಚಾಲನೆಗೆ ಪ್ರಧಾನಿ ಮೋದಿ ಅವರ ಪ್ರತಿನಿಧಿಯಾಗಿ ಕೇಂದ್ರ ರೈಲ್ವೆ ಇಲಾಖೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ಕೇಂದ್ರ ಸಂಸ್ಕೃತಿ ಸಚಿವ ಜಿ ಕಿಶನ್ ರೆಡ್ಡಿ ಅವರು ಸಿಕಂದರಾಬಾದ್ ರೈಲು ನಿಲ್ದಾಣದ ಪ್ಲಾಟ್ಫಾರ್ಮ್ ಸಂಖ್ಯೆ 10 ರಲ್ಲಿ ಭೌತಿಕವಾಗಿ ಉಪಸ್ಥಿತರಿದ್ದು, ಚಾಲನೆಗೆ ಅನುಮೋದಿಸಿದರು.
ಎಲ್ಲೆಲ್ಲಿ ನಿಲುಗಡೆ?: ರೈಲ್ವೇ ಇಲಾಖೆಯ ಪ್ರಕಾರ, ಸಿಕಂದರಾಬಾದ್ ವಿಶಾಖಪಟ್ಟಣವನ್ನು ಸಂಪರ್ಕಿಸುವ ಎಕ್ಸ್ಪ್ರೆಸ್, ತೆಲುಗು ಮಾತನಾಡುವ ರಾಜ್ಯಗಳಾದ ತೆಲಂಗಾಣ ಮತ್ತು ಆಂಧ್ರಪ್ರದೇಶದ ಮೊದಲ ರೈಲಾಗಿದೆ. ಸುಮಾರು 700 ಕಿ.ಮೀ. ಅಂತರ ಸಾಗುವ ಇದು ಆಂಧ್ರಪ್ರದೇಶದ ವಿಶಾಖಪಟ್ಟಣಂ, ರಾಜಮಂಡ್ರಿ ಮತ್ತು ವಿಜಯವಾಡ ಮತ್ತು ತೆಲಂಗಾಣದ ಖಮ್ಮಂ, ವಾರಂಗಲ್ ಮತ್ತು ಸಿಕಂದರಾಬಾದ್ ನಿಲ್ದಾಣಗಳಲ್ಲಿ ನಿಲುಗಡೆಯನ್ನು ಹೊಂದಿದೆ.