ಕರ್ನಾಟಕ

karnataka

By

Published : Nov 16, 2021, 12:13 PM IST

ETV Bharat / bharat

CAG ಕಚೇರಿಯಲ್ಲಿ ಮೊದಲ ಆಡಿಟ್​ ದಿನಾಚರಣೆ.. ಪ್ರಧಾನಿಯಿಂದ ಸರ್ದಾರ್​ ವಲ್ಲಭಭಾಯಿ ಪಟೇಲ್​ ಪುತ್ಥಳಿ ಅನಾವರಣ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಲೆಕ್ಕಪತ್ರ ದಿನದ ಅಂಗವಾಗಿ(Audit Diwas) ಇಲ್ಲಿನ ಕಂಟ್ರೋಲರ್​ ಆ್ಯಂಡ್​ ಅಡಿಟರ್​ ಜನರಲ್(CAG)​ ಕಚೇರಿಯಲ್ಲಿ ಸರ್ದಾರ್​ ವಲ್ಲಭಭಾಯಿ ಪಟೇಲ್​ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದರು.

pm modi addresses
ಸಿಎಜಿ ಕಚೇರಿಯಲ್ಲಿ ಮೊದಲ ಆಡಿಟ್​ ದಿನ ಆಚರಣೆ

ನವದೆಹಲಿ:ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಲೆಕ್ಕಪತ್ರ ದಿನದ ಅಂಗವಾಗಿ (Audit Diwas)ಇಲ್ಲಿನ ಕಂಟ್ರೋಲರ್​ ಆ್ಯಂಡ್​ ಅಡಿಟರ್​ ಜನರಲ್​(CAG) ಕಚೇರಿಯಲ್ಲಿ ಸರ್ದಾರ್​ ವಲ್ಲಭಭಾಯಿ ಪಟೇಲ್​ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದರು.

'ಲೆಕ್ಕಪತ್ರ ಪರಿಶೋಧನಾ ಸಂಸ್ಥೆಯ ಆಡಳಿತ, ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ದೇಶಕ್ಕೆ ತೋರಿಸಲು ಇಂದು ಆಡಿಟ್​ ದಿನವನ್ನು ಆಚರಿಸಲಾಯಿತು. ಸಿಎಜಿ ಸಂಸ್ಥೆ ಆಡಳಿತದಲ್ಲಿ ತೋರಿದ ಕಾರ್ಯಕ್ಷಮತೆ ಗಮನಾರ್ಹ' ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಟ್ವೀಟ್​ ಮಾಡಿ ಶ್ಲಾಘಿಸಿದ್ದಾರೆ.

ಇದನ್ನೂ ಓದಿ: ಭಾರತಕ್ಕೆ ವಿಶ್ವಸಂಸ್ಥೆಯ ರೆಸಿಡೆಂಟ್ ಕೋ -ಆರ್ಡಿನೇಟರ್ ಆಗಿ ಶೊಂಬಿ ಶಾರ್ಪ್​ ನೇಮಕ

ಸಿಎಜಿ ಸಂಸ್ಥೆಯು ಉತ್ತಮ ಆಡಳಿತ, ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಪ್ರದರ್ಶಿಸಿದ್ದು, ದೇಶಕ್ಕೆ ಸಂಸ್ಥೆ ನೀಡಿದ ಕೊಡುಗೆಯನ್ನು ಗುರುತಿಸಲು ಇದೇ ಮೊದಲ ಬಾರಿಗೆ ನವೆಂಬರ್​ 16(ಇಂದು) ಆಡಿಟ್​ ದಿವಸವನ್ನು ಆಚರಿಸಲಾಗುತ್ತಿದೆ.

ಕಾರ್ಯಕ್ರಮದಲ್ಲಿ ಕಂಟ್ರೋಲರ್​ ಆ್ಯಂಡ್​ ಅಡಿಟರ್​ ಜನರಲ್ ಆದ ಗಿರೀಶ್​ ಚಂದ್ರ ಮುರ್ಮು ಉಪಸ್ಥಿತರಿದ್ದರು.

ABOUT THE AUTHOR

...view details