ನವದೆಹಲಿ:ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪರಿಸರ ಸ್ನೇಹಿ ದೀಪಾವಳಿ ಆಚರಣೆ ಮಾಡಲು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮನವಿ ಮಾಡಿಕೊಂಡಿದ್ದು, ಯಾವುದೇ ಕಾರಣಕ್ಕೂ ಪಟಾಕಿ ಸಿಡಿಸಬೇಡಿ ಎಂದು ದೆಹಲಿ ಜನರಿಗೆ ಸಂದೇಶ ರವಾನೆ ಮಾಡಿದ್ದಾರೆ.
ಪಟಾಕಿ ಸಿಡಿಸಬೇಡಿ, ಮನೆಯಿಂದಲೇ ಲಕ್ಷ್ಮಿ ಪೂಜೆಯಲ್ಲಿ ಭಾಗಿಯಾಗಿ: ಕೇಜ್ರಿವಾಲ್ ಮನವಿ - ದೆಹಲಿ ಜನತೆ ಬಳಿ ಕೇಜ್ರಿವಾಲ್ ಮನವಿ
ದೀಪಾವಳಿ ವೇಳೆ ಪಟಾಕಿ ಸಿಡಿಸದಂತೆ ಈಗಾಗಲೇ ಅನೇಕ ರಾಜ್ಯಗಳು ಕ್ರಮ ಕೈಗೊಂಡಿದ್ದು, ಇದೀಗ ದೆಹಲಿಯಲ್ಲೂ ಈ ಯೋಜನೆ ಜಾರಿಗೊಳಿಸಲು ಕೇಜ್ರಿವಾಲ್ ಮುಂದಾಗಿದ್ದಾರೆ.
![ಪಟಾಕಿ ಸಿಡಿಸಬೇಡಿ, ಮನೆಯಿಂದಲೇ ಲಕ್ಷ್ಮಿ ಪೂಜೆಯಲ್ಲಿ ಭಾಗಿಯಾಗಿ: ಕೇಜ್ರಿವಾಲ್ ಮನವಿ Arvind Kejriwal](https://etvbharatimages.akamaized.net/etvbharat/prod-images/768-512-9441416-thumbnail-3x2-wdfdf.jpg)
Arvind Kejriwal
ದೆಹಲಿ ಜತೆ ಬಳಿ ಕೇಜ್ರಿವಾಲ್ ಮನವಿ
ದಯವಿಟ್ಟು ಯಾವುದೇ ಕಾರಣಕ್ಕೂ ಪಟಾಕಿ ಸಿಡಿಸಬೇಡಿ, ಇವುಗಳನ್ನ ಸಿಡಿಸುವುದರಿಂದ ನಿಮ್ಮ ಸ್ವಂತ ಕುಟುಂಬಕ್ಕೆ ತೊಂದರೆ ನೀಡುವುದರ ಜತೆಗೆ ಅವರ ಪ್ರಾಣದೊಂದಿಗೆ ನೀವೇ ಆಟವಾಡಿದ ರೀತಿಯಾಗಿರುತ್ತವೆ. ನವೆಂಬರ್ 14ರಂದು ಸಂಜೆ 7:49ರಿಂದ ದೆಹಲಿಯ 2 ಕೋಟಿ ನಾಗರಿಕರು ಲಕ್ಷ್ಮಿ ಪೂಜೆಯಲ್ಲಿ ಮನೆಯಿಂದ ಭಾಗಿಯಾಗಲಿದ್ದಾರೆ. ನಾನು ಕೂಡ ಪೂಜೆ ಆರಂಭ ಮಾಡಲಿದ್ದು, ಇದರ ನೇರ ಪ್ರಸಾರ ಟಿವಿಯಲ್ಲಿ ಇರಲಿದೆ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.
ದೆಹಲಿಯ 2 ಕೋಟಿ ಜನರು ಒಟ್ಟಿಗೆ ಸೇರಿ ಲಕ್ಷ್ಮಿ ಪೂಜೆ ಹಾಗೂ ದೀಪಾವಳಿ ಆಚರಣೆ ಮಾಡುವುದರಿಂದ ನಮಗಿರುವ ಕಷ್ಟಗಳೆಲ್ಲವೂ ದೂರ ಆಗಲಿವೆ ಎಂದಿದ್ದಾರೆ.