ಕರ್ನಾಟಕ

karnataka

By

Published : May 26, 2021, 3:12 PM IST

ETV Bharat / bharat

ಕೊರೊನಾ ನಂತರದ ಜಗತ್ತು ಇದೇ ರೀತಿ ಇರುವುದಿಲ್ಲ: ಪ್ರಧಾನಿ ಮೋದಿ

ಒಂದು ವರ್ಷ ಕಳೆದರೂ ಕೋವಿಡ್ ಇನ್ನೂ ನಮ್ಮನ್ನು ಬಿಟ್ಟು ಹೋಗಿಲ್ಲ. ಈ ಸಾಂಕ್ರಾಮಿಕವು ದುರಂತ ಮತ್ತು ಸಂಕಟಗಳನ್ನು ಅನೇಕರ ಮನೆ ಬಾಗಿಲಿಗೆ ತಂದಿದೆ ಮತ್ತು ಪ್ರತಿ ರಾಷ್ಟ್ರದ ಮೇಲೆ ಪರಿಣಾಮ ಬೀರಿದೆ..

modi
modi

ನವದೆಹಲಿ :ಜೀವಿತಾವಧಿಯಲ್ಲಿ ಒಮ್ಮೆ ಉಂಟಾಗುವ ಸಾಂಕ್ರಾಮಿಕ ಬಹುದೊಡ್ಡ ಪರಿಣಾಮ ಉಂಟುಮಾಡಿದೆ. ಕೊರೊನಾ ನಂತರ ಜಗತ್ತು ಇದೇ ರೀತಿ ಇರುವುದಿಲ್ಲ ಎಂದು ಪ್ರಧಾನಿ ಮೋದಿ ಹೇಳಿದರು.

ಬುದ್ದ ಪೂರ್ಣಿಮಾ ಕುರಿತ ವರ್ಚುವಲ್​ ವೆಸಾಕ್​ ಗ್ಲೋಬಲ್​ ಸೆಲೆಬ್ರೇಷನ್​ ಸಂದರ್ಭದಲ್ಲಿ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್​ ಮೂಲಕ ಭಾಷಣ ಮಾಡಿದರು.

ಸಾಂಕ್ರಾಮಿಕ ರೋಗದ ವಿರುದ್ಧ ಮಾನವೀಯತೆಯ ಹೋರಾಟವನ್ನು ನಡೆಸುತ್ತಿರುವ ಎಲ್ಲಾ ಮುಂಚೂಣಿ ಕಾರ್ಮಿಕರಿಗೆ ಅವರು ಕಳೆದ ವರ್ಷದ ವೆಸಾಕ್ ದಿನದ ಕಾರ್ಯಕ್ರಮವನ್ನು ಅರ್ಪಿಸಿದರು.

ಇದೇ ವೇಳೆ ಒಂದು ವರ್ಷದಲ್ಲಿ ಕೊರೊನಾ ಲಸಿಕೆ ತಯಾರಿಸಲು ಶ್ರಮಿಸಿದ ವಿಜ್ಞಾನಿಗಳ ಪರಿಶ್ರಮವನ್ನು ಶ್ಲಾಘಿಸಿದರು. ಒಂದು ವರ್ಷ ಕಳೆದರೂ ಕೋವಿಡ್ ಇನ್ನೂ ನಮ್ಮನ್ನು ಬಿಟ್ಟು ಹೋಗಿಲ್ಲ.

ಈ ಸಾಂಕ್ರಾಮಿಕವು ದುರಂತ ಮತ್ತು ಸಂಕಟಗಳನ್ನು ಅನೇಕರ ಮನೆ ಬಾಗಿಲಿಗೆ ತಂದಿದೆ ಮತ್ತು ಪ್ರತಿ ರಾಷ್ಟ್ರದ ಮೇಲೆ ಪರಿಣಾಮ ಬೀರಿದೆ.

ಸಾಂಕ್ರಾಮಿಕ ರೋಗದಿಂದ ಆರ್ಥಿಕತೆ ಮೇಲೆ ಹೆಚ್ಚು ಪರಿಣಾಮ ಉಂಟಾಗಿದೆ. ಕೊರೊನಾ ನಂತರ ಜಗತ್ತು ಇದೇ ರೀತಿ ಇರುವುದಿಲ್ಲ ಎಂದು ಪ್ರಧಾನಿ ಮೋದಿ ಹೇಳಿದರು.

ABOUT THE AUTHOR

...view details