ಕರ್ನಾಟಕ

karnataka

ಜನರ ನಿಲ್ಲದ ಕಣ್ಣೀರು ಪ್ರಧಾನಿ ಕಣ್ಣೀರಿಗಿಂತ ಮುಖ್ಯವಾಗಿದೆ: ಕಾಂಗ್ರೆಸ್

ಮೋದಿ ತಮ್ಮ ಸಂಸದೀಯ ಕ್ಷೇತ್ರ ವಾರಣಾಸಿಯ ಮುಂಚೂಣಿ ಕಾರ್ಯಕರ್ತರೊಂದಿಗೆ ವಿಡಿಯೋ ಸಂವಾದ ನಡೆಸುವ ವೇಳೆ ಭಾವುಕರಾಗಿದ್ದ ಕುರಿತು ಟೀಕೆ ಮಾಡಿರುವ ಕಾಂಗ್ರೆಸ್​ ಜನರ ನಿಲ್ಲದ ಕಣ್ಣೀರು ಪ್ರಧಾನಿ ಕಣ್ಣೀರಿಗಿಂತ ಮುಖ್ಯವಾಗಿದೆ ಎಂದಿದೆ.

By

Published : May 21, 2021, 10:55 PM IST

Published : May 21, 2021, 10:55 PM IST

modi
modi

ನವದೆಹಲಿ:ಪ್ರಧಾನಿ ಮೋದಿ ತಮ್ಮ ಸಂಸದೀಯ ಕ್ಷೇತ್ರ ವಾರಣಾಸಿಯ ಮುಂಚೂಣಿ ಕಾರ್ಯಕರ್ತರೊಂದಿಗೆ ವಿಡಿಯೋ ಸಂವಾದ ನಡೆಸುವ ವೇಳೆ ಕೋವಿಡ್​ನಿಂದ ಸಾವನ್ನಪ್ಪಿದವರನ್ನು ನೆನೆದು ಭಾವುಕರಾಗಿದ್ದನ್ನು ಕುರಿತು ಟೀಕೆ ಮಾಡಿರುವ ಕಾಂಗ್ರೆಸ್​ ಪ್ರಧಾನಮಂತ್ರಿ ಕಣ್ಣೀರಿಗಿಂತ ಜನರ ನಿಲ್ಲದ ಕಣ್ಣೀರು ಮುಖ್ಯವಾಗಿದೆ ಎಂದಿದೆ.

ಈ ಬಗ್ಗೆ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ವಕ್ತಾರ ಪವನ್ ಖೇರಾ, "ಪ್ರಧಾನಿ ಇಂದು ಸ್ವಲ್ಪ ಕಣ್ಣೀರು ಸುರಿಸಿದರೆ, ಅದು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರ ನೋವು ಮತ್ತು ಕಣ್ಣೀರನ್ನು ತೊಳೆದುಕೊಳ್ಳುತ್ತದೆಯೇ? ಪ್ರಧಾನಮಂತ್ರಿಯ ಕಣ್ಣೀರು ಈ ಜನರ ದುಃಖವನ್ನು ತೊಳೆಯಬಹುದೇ? ಪ್ರಧಾನಮಂತ್ರಿಗಿಂತ ಜನರ ನಿಲ್ಲದ ಕಣ್ಣೀರು ಮುಖ್ಯವಾಗಿದೆ ಎಂದಿದೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಕೂಡ ಈ ವಿಷಯದ ಬಗ್ಗೆ ಮಾತನಾಡುತ್ತಾ, "ಈ ಯುದ್ಧವು 21 ದಿನಗಳಲ್ಲಿ ಮುಗಿಯುತ್ತದೆ ಎಂದು ಪ್ರಧಾನಿ ಹೇಳಿದ್ದರು. ಆದರೆ, ಈಗ ಅವರು ಅರಿತುಕೊಂಡಿದ್ದಾರೆ, ಇದು ಸುದೀರ್ಘ ಯುದ್ಧ, ಆದರೆ, ಈ ದೀರ್ಘ ಹೋರಾಟಕ್ಕಾಗಿ ಯುದ್ಧ, ಕೇಂದ್ರ ಸರ್ಕಾರವು ಎಷ್ಟು ಮುನ್ನೆಚ್ಚರಿಕೆ ವಹಿಸಿದೆ ಎಂದು ಪ್ರಶ್ನಿಸಿದ್ದಾರೆ.

ಕಪ್ಪು ಶಿಲೀಂಧ್ರದ ಪ್ರಕರಣಗಳ ಹೆಚ್ಚಳವನ್ನು ಪ್ರಸ್ತಾಪಿಸುತ್ತಾ, ವೇಣುಗೋಪಾಲ್, "ಕಪ್ಪು ಶಿಲೀಂಧ್ರವು ಜನರಲ್ಲಿ ಭಾರಿ ಭಯವನ್ನು ಉಂಟುಮಾಡುತ್ತಿದೆ. ಕಪ್ಪು ಶಿಲೀಂಧ್ರಕ್ಕೆ ಔಷಧಗಳ ಸಂಪೂರ್ಣ ಕೊರತೆಯಿದೆ ಎಂದು ವೈದ್ಯರು ನಮಗೆ ಹೇಳುತ್ತಿದ್ದಾರೆ. ಭಾಷಣಗಳ ಬದಲು, ಸಲಹೆಯ ಬದಲು , ಪ್ರಧಾನಮಂತ್ರಿ ಈಗ ಕಾರ್ಯನಿರ್ವಹಿಸಬೇಕಾಗಿದೆ. ಈ ಸಾಂಕ್ರಾಮಿಕ ಅವಧಿಯಲ್ಲಿ ಕೇಂದ್ರ ಸರ್ಕಾರದಿಂದ ಕ್ರಮ, ಪ್ರಧಾನಮಂತ್ರಿಯವರ ಕ್ರಮವು ಸಂಪೂರ್ಣವಾಗಿ ಕಾಣೆಯಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ABOUT THE AUTHOR

...view details