ಕರ್ನಾಟಕ

karnataka

By

Published : May 5, 2023, 1:19 PM IST

ETV Bharat / bharat

ಬುದ್ಧ ಪೂರ್ಣಿಮೆಯ ಇಂದೇ ವರ್ಷದ ಮೊದಲ ಚಂದ್ರಗ್ರಹಣ; ಭಾರತೀಯರಿಗಿಲ್ಲ ದರ್ಶನ

ಇಂದು ಚಂದ್ರಗ್ರಹಣ ಸಂಭವಿಸಲಿದ್ದು, ಭಾರತೀಯರಿಗೆ ದರ್ಶನ ಸಿಗುವುದಿಲ್ಲ.

Penumbral Lunar Eclipse today  Chandra Grahan Timing in India  buddha purnima today  ಇಂದು ಬುದ್ಧ ಪೂರ್ಣಿಮಾ  ವರ್ಷದ ಮೊದಲ ಚಂದ್ರಗ್ರಹಣ  ಭಾರತೀಯರಿಗಿಲ್ಲ ದರ್ಶನ  ಭಾರತಾದ್ಯಂತ ಬುದ್ಧ ಪೂರ್ಣಿಮೆ  ಅತ್ಯಂತ ಆಕರ್ಷಕ ಖಗೋಳ ವಿದ್ಯಮಾನ  ವಿಜ್ಞಾನ ಮತ್ತು ಜ್ಯೋತಿಷ್ಯದ ಪ್ರಕಾರ  ಖಗೋಳ ಘಟನೆಯ ಅದ್ಭುತ ನೋಟ
Penumbral Lunar Eclipse today Chandra Grahan Timing in India buddha purnima today ಇಂದು ಬುದ್ಧ ಪೂರ್ಣಿಮಾ ವರ್ಷದ ಮೊದಲ ಚಂದ್ರಗ್ರಹಣ ಭಾರತೀಯರಿಗಿಲ್ಲ ದರ್ಶನ ಭಾರತಾದ್ಯಂತ ಬುದ್ಧ ಪೂರ್ಣಿಮೆ ಅತ್ಯಂತ ಆಕರ್ಷಕ ಖಗೋಳ ವಿದ್ಯಮಾನ ವಿಜ್ಞಾನ ಮತ್ತು ಜ್ಯೋತಿಷ್ಯದ ಪ್ರಕಾರ ಖಗೋಳ ಘಟನೆಯ ಅದ್ಭುತ ನೋಟ

ನವದೆಹಲಿ:ಇಂದು ಭಗವಾನ್ ಗೌತಮ ಬುದ್ಧ ಹುಟ್ಟಿದ, ಜ್ಞಾನೋದಯವಾದ ಹಾಗೂ ನಿರ್ವಾಣ ಹೊಂದಿದ ದಿನ. ಈ ಸುದಿನವನ್ನು ದೇಶಾದ್ಯಂತ ಬುದ್ಧ ಪೂರ್ಣಿಮೆ ಎಂದು ಆಚರಿಸಲಾಗುತ್ತದೆ. ಆದ್ರೆ ಇಂದು ವರ್ಷದ ಮೊದಲ ಚಂದ್ರಗ್ರಹಣ ಸಂಭವಿಸಲಿದೆ. ಇದು ಛಾಯಾ ಚಂದ್ರಗ್ರಹಣ. ಅತ್ಯಂತ ಆಕರ್ಷಕ ಖಗೋಳ ವಿದ್ಯಮಾನ. ಸೌರವ್ಯೂಹದ ಕೆಲಸ ಮತ್ತು ಆಕಾಶಕಾಯಗಳ ಚಲನೆಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಉತ್ತಮ ಅವಕಾಶ.

ಮೂರು ವಿಧದ ಚಂದ್ರಗ್ರಹಣಗಳಿವೆ- ಪೂರ್ಣ ಚಂದ್ರಗ್ರಹಣ, ಭಾಗಶಃ ಚಂದ್ರಗ್ರಹಣ ಮತ್ತು ಪೆನಂಬ್ರಾಲ್ ಚಂದ್ರಗ್ರಹಣ. ಚಂದ್ರನು ಭೂಮಿಯ ನೆರಳಿನ ತೆಳುವಾದ ಮತ್ತು ಹೊರಗಿನ ಪ್ರದೇಶದ ಮೂಲಕ ಹಾದುಹೋದಾಗ ಪೆನಂಬ್ರಾಲ್ ಗ್ರಹಣ ಸಂಭವಿಸುತ್ತದೆ.

ವಿಜ್ಞಾನ ಮತ್ತು ಜ್ಯೋತಿಷ್ಯದ ಪ್ರಕಾರ, 2023 ರ ಮೊದಲ ಚಂದ್ರಗ್ರಹಣವು ಮೇ 5 ರಂದು ರಾತ್ರಿ 8:42 ಕ್ಕೆ ಪ್ರಾರಂಭವಾಗುತ್ತದೆ ಮತ್ತು 1:04 ಕ್ಕೆ ಕೊನೆಗೊಳ್ಳುತ್ತದೆ. ಈ ಗ್ರಹಣ ನಾಲ್ಕೂವರೆ ಗಂಟೆಗಳ ಕಾಲ ಇರುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ವರ್ಷದ ಮೊದಲ ಚಂದ್ರಗ್ರಹಣವು ಛಾಯಾ ಗ್ರಹಣವಾಗಿದೆ. ಈ ಸಮಯದಲ್ಲಿ, ಚಂದ್ರ ಭೂಮಿಯ ನೆರಳಿನ ಮೂಲಕ ಹಾದು ಹೋಗುತ್ತಾನೆ. ಇದು ಚಂದ್ರಗ್ರಹಣಕ್ಕೆ ಕಾರಣವಾಗುತ್ತದೆ. ಭೂಮಿಯ ಸಾಪೇಕ್ಷ ಗಾತ್ರವು ಚಂದ್ರನ ಗಾತ್ರಕ್ಕಿಂತ ದೊಡ್ಡದು. ಅಂದರೆ ಅದರ ನೆರಳು ಸಹ ನೈಸರ್ಗಿಕ ಉಪಗ್ರಹಕ್ಕಿಂತ ದೊಡ್ಡದಾಗಿಯೇ ಇರುತ್ತದೆ.

ಖಗೋಳ ಘಟನೆಯ ಅದ್ಭುತ ನೋಟವು ಭಾರತದಲ್ಲಿ ಗೋಚರಿಸುವುದಿಲ್ಲ. ಯಾವುದೇ ವಿಶೇಷ ಉಪಕರಣಗಳು ಅಥವಾ ದೂರದರ್ಶಕವಿಲ್ಲದೆ ಭೂಮಿಯಿಂದ ಚಂದ್ರಗ್ರಹಣವನ್ನು ನೋಡಬಹುದು. ಸಣ್ಣ ದೂರದರ್ಶಕಗಳು ಈ ನೋಟವನ್ನು ಇನ್ನಷ್ಟು ಉತ್ತಮಗೊಳಿಸಬಹುದು. ಗ್ರಹಣದ ಸಮಯದಲ್ಲಿ ಚಂದ್ರನನ್ನು ನೋಡುವುದು ತುಂಬಾ ಆಕರ್ಷಕವಾಗಿರುತ್ತದೆ. 2023 ರ ಎರಡನೇ ಚಂದ್ರಗ್ರಹಣ ಅಕ್ಟೋಬರ್ 28 ರಂದು ಸಂಭವಿಸುತ್ತದೆ. ಇದು ಭಾಗಶಃ ಚಂದ್ರಗ್ರಹಣವಾಗಿದ್ದು, ಆಸ್ಟ್ರೇಲಿಯಾ, ಪೂರ್ವ ಅಮೆರಿಕ, ಯುರೋಪ್, ಆಫ್ರಿಕಾ ಮತ್ತು ಏಷ್ಯಾದ ಹಲವು ಪ್ರದೇಶಗಳಲ್ಲಿ ಗೋಚರಿಸುತ್ತದೆ.

ಭೂಮಿಯು ಸೂರ್ಯನ ಸುತ್ತ ಸುತ್ತುತ್ತದೆ. ಚಂದ್ರನು ಭೂಮಿಯ ಸುತ್ತ ಸುತ್ತುತ್ತಾನೆ. ಈ ಪ್ರಕ್ರಿಯೆಯಲ್ಲಿ, ಚಂದ್ರ, ಭೂಮಿ ಮತ್ತು ಸೂರ್ಯ ಒಂದೇ ಸಾಲಿನಲ್ಲಿ ಬರುವ ಸಮಯ ಬರುತ್ತದೆ. ಈ ಸಮಯದಲ್ಲಿ, ಸೂರ್ಯನ ಬೆಳಕು ಭೂಮಿಯ ಮೇಲೆ ಬೀಳುತ್ತದೆ, ಆದರೆ ಚಂದ್ರನನ್ನು ತಲುಪುವುದಿಲ್ಲ. ಈ ವಿದ್ಯಮಾನವನ್ನು ಖಗೋಳ ವಿದ್ಯಮಾನವಾಗಿ ಚಂದ್ರಗ್ರಹಣ ಎಂದು ಕರೆಯಲಾಗುತ್ತದೆ.

ಭಾರತದ ಪ್ಲಾನೆಟರಿ ಸೊಸೈಟಿಯ ನಿರ್ದೇಶಕ ಎನ್.ಶ್ರೀರಘುನಂದನ ಕುಮಾರ್ ಮಾತನಾಡಿ, ‘ಪೆನಂಬ್ರಾಲ್ ಲೂನಾರ್’ ಎಂಬ ಚಂದ್ರಗ್ರಹಣ ಸಂಭವಿಸಲಿದೆ. ಭಾರತೀಯ ಕಾಲಮಾನದ ಪ್ರಕಾರ ಶುಕ್ರವಾರ ರಾತ್ರಿ 8.42 ರಿಂದ 1.04 ರವರೆಗೆ ಇರುತ್ತದೆ. ಆದರೆ ಇದು ಭಾರತದಲ್ಲಿ ಕಂಡುಬರುವುದಿಲ್ಲ, ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ಅಟ್ಲಾಂಟಿಕ್ ಪ್ರದೇಶಗಳಲ್ಲಿ ಕಂಡುಬರುತ್ತದೆ. ಭಾರತದಲ್ಲಿ ಅದರ ಪರಿಣಾಮ ಬೀರಲಿದೆ ಎಂಬುದು ಕೇವಲ ವದಂತಿಗಳು. ‘ಗ್ರಹಣದ ದುಷ್ಪರಿಣಾಮ ಅದರಲ್ಲೂ ಹುಟ್ಟುವ ಶಿಶುಗಳ ಮೇಲೆ ಆಗುವ ದುಷ್ಪರಿಣಾಮಗಳನ್ನು ನಂಬಬೇಡಿ ಎಂದು ಸ್ಪಷ್ಟಪಡಿಸಿದರು.

ಇಂದು ಬುದ್ಧ ಪೂರ್ಣಿಮೆ:ಬುದ್ದ ಪೂರ್ಣಿಮೆಯನ್ನು ಸಾಮಾನ್ಯವಾಗಿ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಆಚರಿಸಲಾಗುತ್ತದೆ. ಬುದ್ಧನ ಬೋಧನೆಗಳಿಂದ ಬೌದ್ಧ ಧರ್ಮ ಮತ್ತು ತತ್ವಶಾಸ್ತ್ರದ ಅಭಿವೃದ್ಧಿಯಾಯಿತು. ಬುದ್ಧನ ಬೋಧನೆಗಳು ಭಾರತದಿಂದ ಮಧ್ಯ ಮತ್ತು ಆಗ್ನೇಯ ಏಷ್ಯಾ, ಚೀನಾ, ಕೊರಿಯಾ ಮತ್ತು ಜಪಾನ್‌ಗೆ ಹರಡಿತು. ಏಷ್ಯಾದ ಆಧ್ಯಾತ್ಮಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಜೀವನದಲ್ಲಿ ತತ್ವಶಾಸ್ತ್ರವು ಪ್ರಮುಖ ಪಾತ್ರ ವಹಿಸುತ್ತದೆ. ಪ್ರಾಚೀನ ಬೌದ್ಧ ಧರ್ಮಗ್ರಂಥ ಮತ್ತು ಸಿದ್ಧಾಂತವು ಪಾಲಿ ಮತ್ತು ಸಂಸ್ಕೃತ ಭಾಷೆಯಲ್ಲಿದೆ.

ಇದನ್ನೂ ಓದಿ:ವರ್ಷದ ಮೊದಲ ಚಂದ್ರ ಗ್ರಹಣ; ಭಾರತೀಯರಿಗೆ ಇಲ್ಲ ದರ್ಶನ

ABOUT THE AUTHOR

...view details