ಕರ್ನಾಟಕ

karnataka

ETV Bharat / bharat

ಏರ್​ ಇಂಡಿಯಾದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜಿಸಿದ್ದ ಆರೋಪಿ ಬೆಂಗಳೂರಿನಲ್ಲಿ ಬಂಧನ - accused Peeing on women in flight

ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ- ಬೆಂಗಳೂರಿನಲ್ಲಿ ಆರೋಪಿಯ ಬಂಧನ- ಆರೋಪಿ ಕುಟುಂಬದ ಮಧ್ಯೆ ಹಣದ ಕಿತ್ತಾಟ

peeing-on-flight-accused-arrest-in-bangalore
ಮೂತ್ರ ವಿಸರ್ಜಿಸಿದ್ದ ಆರೋಪಿ ಬೆಂಗಳೂರಿನಲ್ಲಿ ಬಂಧನ

By

Published : Jan 7, 2023, 12:53 PM IST

ನವದೆಹಲಿ/ಬೆಂಗಳೂರು:ಏರ್​ ಇಂಡಿಯಾ ವಿಮಾನದಲ್ಲಿ ಸಹ ಪ್ರಯಾಣಿಕ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ವಕೀಲ ಶಂಕರ್ ಮಿಶ್ರಾನನ್ನು ದೆಹಲಿ ಪೊಲೀಸರು ಬೆಂಗಳೂರಿನಲ್ಲಿ ನಿನ್ನೆ ರಾತ್ರಿ ಬಂಧಿಸಿದ್ದಾರೆ. ಈ ಮಧ್ಯೆ ಮಹಿಳೆಗೆ ಪರಿಹಾರವಾಗಿ 15 ಸಾವಿರ ನೀಡಿದ್ದೇನೆ ಎಂದು ಆರೋಪಿ ಹೇಳಿಕೊಂಡಿದ್ದು, ಅದನ್ನು ಹಿಂದಿರುಗಿಸಲಾಗಿದೆ ಎಂದು ಮಹಿಳೆಯ ಕುಟುಂಬಸ್ಥರು ಹೇಳಿದ್ದಾರೆ.

ವಕೀಲ ಮಿಶ್ರಾ ಕಳೆದ ವರ್ಷ ನವೆಂಬರ್​ 26 ರಂದು ನ್ಯೂಯಾರ್ಕ್​ನಿಂದ ದೆಹಲಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನದ ಬಿಸಿನೆಸ್ ಕ್ಲಾಸ್‌ನಲ್ಲಿ ತನ್ನ ಸಹ ಪ್ರಯಾಣಿಕ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದರು. ನೊಂದ ಮಹಿಳೆ ಏರ್ ಇಂಡಿಯಾದ ಆಡಳಿತ ಮಂಡಳಿಗೆ ದೂರು ನೀಡಿದ್ದರು. ತಕ್ಷಣ ಏರ್ ಇಂಡಿಯಾ ಆಡಳಿತ ಮಂಡಳಿ ದೆಹಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿತ್ತು. ದೂರಿನನ್ವಯ ಆರೋಪಿ ಶಂಕರ್ ಮಿಶ್ರಾನ ಕೊನೆಯ ಮೊಬೈಲ್ ಲೊಕೇಷನ್ ಆಧರಿಸಿ ತನಿಖೆ ಆರಂಭಿಸಿದ್ದ ದೆಹಲಿ‌ ಪೊಲೀಸರು ನಿನ್ನೆ ಬೆಳಿಗ್ಗೆ ಬೆಂಗಳೂರಿಗೆ ಬಂದಿಳಿದ್ದರು.

ಬೆಂಗಳೂರಿನ ಮಾರತ್ ಹಳ್ಳಿಯಲ್ಲಿರುವ ಆರೋಪಿಯ ಕಚೇರಿ, ಮನೆಗಳಲ್ಲಿ ಶೋಧ ನಡೆಸಿದ ದೆಹಲಿ ಪೊಲೀಸರು ತಡರಾತ್ರಿ ಸಂಜಯನಗರದಲ್ಲಿ ಆರೋಪಿಯನ್ನು ವಶಕ್ಕೆ ಪಡೆದು ಇಂದು ಬೆಳಗ್ಗೆ ದೆಹಲಿಗೆ ಕರೆದೊಯ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನವೆಂಬರ್ 28 ರಂದು ಮಹಿಳೆಯ ಬಟ್ಟೆ ಮತ್ತು ಬ್ಯಾಗ್‌ಗಳನ್ನು ಸ್ವಚ್ಛಗೊಳಿಸಲಾಗಿದೆ. ಬಳಿಕ ಅವುಗಳನ್ನು ನವೆಂಬರ್ 30 ರಂದು ತಲುಪಿಸಲಾಗಿದೆ. ಅಲ್ಲದೇ, ಪರಿಹಾರವಾಗಿ 15 ಸಾವಿರ ರೂಪಾಯಿ ನೀಡಲಾಗಿದೆ ಎಂದು ಆರೋಪಿಯ ವಕೀಲರು ತಿಳಿಸಿದ್ದಾರೆ. ಆರೋಪಿಗಳು ಮತ್ತು ಮಹಿಳೆಯ ನಡುವಿನ ವಾಟ್ಸಾಪ್ ಸಂದೇಶಗಳು ಇವುಗಳನ್ನು ದೃಢೀಕರಿಸಿದ್ದನ್ನು ಸ್ಪಷ್ಟವಾಗಿ ತೋರಿಸುತ್ತದೆ.

ಆರೋಪಿಯ ಕೃತ್ಯ ಮನ್ನಿಸಿದ್ದ ಮಹಿಳೆ:ವಾಟ್ಸ್​​ಆ್ಯಪ್​ ಸಂದೇಶಗಳಲ್ಲಿರುವಂತೆ ಮಹಿಳೆ ಆರೋಪಿಯ ಕೃತ್ಯವನ್ನು ಸ್ಪಷ್ಟವಾಗಿ ಮನ್ನಿಸಿದ್ದಾರೆ ಎಂದು ತಿಳಿದು ಬಂದಿದೆ. ದೂರು ದಾಖಲಿಸುವ ಉದ್ದೇಶ ಹೊಂದಿರಲಿಲ್ಲ. ಏರ್​ಲೈನ್ಸ್​ ಸಿಬ್ಬಂದಿಯ ಒತ್ತಡ ಮೇರೆಗೆ ಆಕೆ ದೂರಿದ್ದರು ಎಂಬುದು ಅದರಲ್ಲಿದೆ. ಆದಾಗ್ಯೂ ಘಟನೆಯ ಬಗ್ಗೆ ಕುಟುಂಬಸ್ಥರು ತೀವ್ರ ಬೇಸರ ವ್ಯಕ್ತಪಡಿಸಿದ್ದರು. ಆರೋಪಿಯ ಮೇಲೆ ಅವರು ಅಸಮಾಧಾನಗೊಂಡಿದ್ದರು ಎಂದು ಮಹಿಳೆಯ ಚಾಟ್​ನಲ್ಲಿದೆ.

ಬಂಧಿತ ಆರೋಪಿ ಈ ಕುರಿತು ಮಾತನಾಡಿದ್ದು, ತನಿಖೆಗೆ ಸಂಪೂರ್ಣವಾಗಿ ಸಹಕರಿಸುವೆ. ದೇಶದ ಕಾನೂನಿನ ಮೇಲೆ ನನಗೆ ನಂಬಿಕೆ ಇದೆ ಎಂದು ಹೇಳಿಕೆ ನೀಡಿದ್ದಾರೆ. ಇದೇ ವೇಳೆ ಮಿಶ್ರಾ ಅವರ ತಂದೆ ತಮ್ಮ ಮಗ ಅಮಾಯಕನಾಗಿದ್ದಾನೆ. ಪ್ರಕರಣದಲ್ಲಿ ಆತನ ತಪ್ಪಿಲ್ಲ. ಅದನ್ನು ಸರಿಪಡಿಸಿಕೊಂಡರೂ ದೂರು ದಾಖಲಿಸಲಾಗಿದೆ. ತಾಯಿಯ ವಯಸ್ಸಿನ ಮಹಿಳೆಯ ಜೊತೆಗೆ ಈ ರೀತಿಯಾಗಿ ನಡೆದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಇದಕ್ಕೂ ಮೊದಲು ಆರೋಪಿ ದೆಹಲಿಯಿಂದ ತಪ್ಪಿಸಿಕೊಂಡು ಬೆಂಗಳೂರಲ್ಲಿ ಉಳಿದುಕೊಂಡಿದ್ದರಿಂದ, ದೇಶದಿಂದ ಪಲಾಯನ ಮಾಡದಂತೆ ಅವರ ವಿರುದ್ಧ ಲುಕ್‌ಔಟ್ ನೋಟಿಸ್​ ಜಾರಿ ಮಾಡಲಾಗಿತ್ತು.

ಓದಿ:ಮಹಿಳೆಯ ಮೇಲೆ ಮೂತ್ರ ವಿಸರ್ಜಿಸಿದ ಪುರುಷ ಪ್ರಯಾಣಿಕ; ಏರ್​ ಇಂಡಿಯಾದಲ್ಲಿ ಘಟನೆ!

ABOUT THE AUTHOR

...view details