ಕರ್ನಾಟಕ

karnataka

ETV Bharat / bharat

ನಕಲಿ ಎನ್​ಕೌಂಟರ್​ ಪ್ರಕರಣ:21 ವರ್ಷಗಳ ನಂತರವೂ, ನ್ಯಾಯಕ್ಕಾಗಿ ಕಾಯುತ್ತಿರುವ ಕುಟುಂಬಗಳು - ನಕಲಿ ಎನ್​ಕೌಂಟರ್​

ಅನಂತನಾಗ್​ನ ಪತ್ರಿಬಲ್ ಮಾರ್ಚ್ 25, 2000 ರಲ್ಲಿ ನಡೆದ ನಕಲಿ ಎನ್​ಕೌಂಟರ್​ ಪ್ರಕರಣ ನಡೆದು 21 ವರ್ಷಗಳೇ ಕಳೆದ್ರೂ ಇಂದಿಗೂ ಆ ಘಟನೆ ವಿರೋಧಿಸಿ ಸಂತ್ರಸ್ತರ ಕುಟುಂಬಗಳೂ ಪ್ರತಿಭಟನೆ ನಡೆಸುತ್ತಿವೆ.

Pathribal fake encounter
ನ್ಯಾಯಕ್ಕಾಗಿ ಪ್ರತಿಭಟಿಸುತ್ತಿರುವ ಕುಟುಂಬಸ್ಥರು

By

Published : Mar 26, 2021, 7:18 AM IST

ಅನಂತನಾಗ್​/ಜಮ್ಮು-ಕಾಶ್ಮೀರ: ಮಾರ್ಚ್ 25, 2000 ರಲ್ಲಿ ನಡೆಸಿದ ಪತ್ರಿಬಲ್ ನಕಲಿ ಎನ್​ಕೌಂಟರ್​ ಘಟನೆ ನಡೆದು 21 ವರ್ಷಗಳು ಕಳೆದಿವೆ. ಪ್ರಕರಣವು ಮುಕ್ತಾಯಗೊಂಡಿದ್ದರೂ ಸಹ ಸಂತ್ರಸ್ತರ ಕುಟುಂಬಗಳು ಇಂದಿಗೂ ನ್ಯಾಯಕ್ಕಾಗಿ ಕಾಯುತ್ತಿವೆ. ಪ್ರಕರಣವನ್ನು ಮತ್ತೆ ತೆರೆಯಲು ಮತ್ತು ಮರುಪರಿಶೀಲಿಸಲು ಸಂತ್ರಸ್ತರ ಕುಟುಂಬಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ.

ನ್ಯಾಯಕ್ಕಾಗಿ ಪ್ರತಿಭಟಿಸುತ್ತಿರುವ ಕುಟುಂಬಸ್ಥರು

ಮಾರ್ಚ್ 25, 2000 ರಂದು, ಜಮ್ಮು ಮತ್ತು ಕಾಶ್ಮೀರದ ಅನಂತನಾಗ್​ ಜಿಲ್ಲೆಯ ಪತ್ರಿಬಲ್ ಪ್ರದೇಶದಲ್ಲಿ ಐದು ವಿದೇಶಿ ಉಗ್ರರನ್ನು ಹತ್ಯೆ ಮಾಡಿರುವುದಾಗಿ ಸೇನೆಯು ಹೇಳಿಕೊಂಡಿತ್ತು. ಅವರು ಚಟ್ಟಿಸಿಂಗ್‌ಪೊರಾ ಹತ್ಯಾಕಾಂಡದಲ್ಲಿ ಭಾಗಿಯಾಗಿದ್ದಾರೆಂದು ಸೇನೆಯು ತಿಳಿಸಿತ್ತು. ಆದರೆ, ಸೇನೆಯಿಂದ ಹತ್ಯೆಗೊಳಗಾದವರು ವಿದೇಶಿ ಉಗ್ರರಲ್ಲ ಬದಲಿಗೆ ಐದು ಜನರು ಸ್ಥಳೀಯ ಗ್ರಾಮಸ್ಥರು ಎನ್ನಲಾಗಿತ್ತು. ಮಾರ್ಚ್ 20, 2000 ರಂದು, ಅಂದಿನ ಯುಎಸ್ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರ ಭಾರತ ಭೇಟಿಯ ಮುನ್ನಾ ದಿನದಂದು ಚಟ್ಟಿಸಿಂಗ್‌ಪೊರಾದಲ್ಲಿ 35 ಸಿಖ್ಖರನ್ನು ಅಪರಿಚಿತ ಬಂದೂಕುಧಾರಿಗಳು ಹತ್ಯೆ ಮಾಡಿದ್ದರು. ಘಟನೆ ನಡೆದ 5 ದಿನಗಳ ನಂತರ, 35 ಸಿಖ್ಖರ ಹತ್ಯೆಯಲ್ಲಿ ಭಾಗಿಯಾಗಿದ್ದ ಹಿನ್ನೆಲೆ ಐವರು "ಉಗ್ರರನ್ನು" ಕೊಂದಿರುವುದಾಗಿ ಸೇನೆ ಹೇಳಿಕೊಂಡಿತ್ತು.

ಆದರೆ, ಸ್ಥಳೀಯರು ಸೇನೆಯ ಈ ಹೇಳಿಕೆಯನ್ನು ಒಪ್ಪಿಕೊಳ್ಳಲು ನಿರಾಕರಿಸಿದ್ರು. ಸೇನೆಯಿಂದ ಕೊಲ್ಲಲ್ಪಟ್ಟ ಐದು ಜನರು ಉಗ್ರರಲ್ಲ, ಸ್ಥಳೀಯ ನಾಗರಿಕರು ಎಂದು ಹೇಳಿ ಕೊಲೆಯಾದ ಐದೂ ಜನರ ಸಂಬಂಧಿಕರು ಬೀದಿಗಿಳಿದು ಸೈನ್ಯದ ವಿರುದ್ಧ 2000 ರ ಏಪ್ರಿಲ್ 3 ರಂದು ಪ್ರತಿಭಟನೆ ನಡೆಸಿದ್ರು. ಈ ವೇಳೆ ಭದ್ರತಾ ಪಡೆಗಳು ಅವರ ಮೇಲೆ ಗುಂಡು ಹಾರಿಸಿ, ಅವರಲ್ಲಿ 8 ಜನರು ಸಾವನ್ನಪ್ಪಿದರು.

ಈ ಹಿನ್ನೆಲೆ ತಮಗೆ ನ್ಯಾಯ ದೊರಕುವವರೆಗೂ ಈ ಘಟನೆ ವಿರುದ್ಧ ಶಾಂತಿಯುತವಾಗಿ ಪ್ರತಿಭಟನೆ ಮುಂದುವರಿಸುವುದಾಗಿ ಹತ್ಯೆಗೀಡಾದ ನಾಗರಿಕರ ಕುಟುಂಬಗಳು ತಿಳಿಸಿದ್ದು, ಪ್ರತಿಭಟನೆ ಮುಂದುವರಿಸಿವೆ.

ABOUT THE AUTHOR

...view details