ಹೈದರಾಬಾದ್ (ಸಿಂಧ್):ಟೊಮೇಟೊ ಆಮದನ್ನು ಮುಂದುವರಿಸಿದ್ದಕ್ಕಾಗಿ ಪ್ರಧಾನಿ ಇಮ್ರಾನ್ ಖಾನ್ ಸರ್ಕಾರದ ವಿರುದ್ಧ ಸಿಂಧ್ ಪ್ರಾಂತ್ಯದ ಹೈದರಾಬಾದ್ ನಗರದ ರೈತರು ಪ್ರತಿಭಟನೆ ನಡೆಸಿದ್ದಾರೆ.
ಟೊಮೇಟೊ ಬೆಲೆ ಇಳಿಕೆಯಾಗಿರುವುದರಿಂದ ಬೇಸತ್ತ ಪ್ರತಿಭಟನಾ ನಿರತ ರೈತರು, ಕೊಯ್ಯಲು ಸಿದ್ದವಾಗಿದ್ದ ಸ್ಥಳೀಯ ಟೊಮೇಟೊ ಬೆಳೆ ನಾಶಪಡಿಸಿದ್ದಾರೆ.
ಸಿಂಧ್ ಅಬಾದ್ಗರ್ ಮಂಡಳಿ (ಎಸ್ಎಬಿ) ಪ್ರಕಾರ, ಒಂದೂವರೆ ತಿಂಗಳ ಹಿಂದೆ ಪರಿಸ್ಥಿತಿಯ ಬಗ್ಗೆ ಫೆಡರಲ್ ಸರ್ಕಾರಕ್ಕೆ ಮಾಹಿತಿ ನೀಡಲಾಗಿದ್ದರೂ ಆಮದು ಪ್ರಕ್ರಿಯೆಯನ್ನು ನಿಲ್ಲಿಸಿರಲಿಲ್ಲ. ಆಮದು ಮಾಡಿದ ಟೊಮೇಟೊ ಮಾರುಕಟ್ಟೆಗಳಿಗೆ ಸರಬರಾಜು ಮಾಡುವುದನ್ನು ಮುಂದುವರಿಸುತ್ತಿದ್ದಂತೆ, ಸ್ಥಳೀಯ ದರವೂ ಕುಸಿಯಿತು. ಆಮದಿಗೂ ಮೊದಲು ಸ್ಥಳೀಯ ರೈತರು ಪ್ರತಿ ಕೆಜಿ ಟೊಮೇಟೊವನ್ನು 15 ರೂ.ಗೆ ಮಾರಾಟ ಮಾಡುತ್ತಿದ್ದರು. ಆದ್ರೀಗ ಟೊಮೇಟೊ ದರವನ್ನು ದಿಢೀರ್ 5 ರೂಪಾಯಿಗೆ ಇಳಿಸಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.