ಕರ್ನಾಟಕ

karnataka

ETV Bharat / bharat

ದ್ವೇಷ ರಾಜಕಾರಣ ನಿಲ್ಲಿಸುವಂತೆ ಕರೆ ನೀಡಲು ಮೋದಿಗೆ 100ಕ್ಕೂ ಅಧಿಕ ಮಾಜಿ ಅಧಿಕಾರಿಗಳಿಂದ ಪತ್ರ

ದ್ವೇಷ ರಾಜಕಾರಣದ ಮಧ್ಯೆ ಕೂಡ ನೀವೂ ಸುಮ್ಮನಾಗಿರುವುದು ಸರಿಯಲ್ಲ. ಸಬ್​​ ಕಾ ಸಾಥ್​ ಸಬ್​ ಕಾ ವಿಕಾಸ್​​, ಸಬ್​​ ಕಾ ವಿಶ್ವಾಸ್​​ ಎಂಬ ನಿಮ್ಮ ಭರವಸೆಯನ್ನು ಹೃದಯದಿಂದ ಸ್ವೀಕರಿಸಿ, ನಿಷ್ಪಕ್ಷಪಾತವಾಗಿ ಕೆಲಸ ಮಾಡುವಂತೆ ನಾವು ಮನವಿ ಮಾಡುತ್ತೇವೆ ಎಂದಿದ್ದಾರೆ.

By

Published : Apr 26, 2022, 10:57 PM IST

100 ex-bureaucrats request PM
100 ex-bureaucrats request PM

ನವದೆಹಲಿ: ಬಿಜೆಪಿ ಅಧಿಕಾರ ನಡೆಸುತ್ತಿರುವ ರಾಜ್ಯಗಳಲ್ಲಿ ದ್ವೇಷದ ರಾಜಕಾರಣ ನಿಲ್ಲಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ 100ಕ್ಕೂ ಅಧಿಕ ಮಾಜಿ ಅಧಿಕಾರಿಗಳು ಪತ್ರ ಬರೆದು, ಮನವಿ ಮಾಡಿದ್ದಾರೆ. ದೇಶದಲ್ಲಿ ದ್ವೇಷ ತುಂಬಿದ ರಾಜಕಾರಣವನ್ನು ನಾವು ನೋಡುತ್ತಿದ್ದೇವೆ. ಅಲ್ಲಿ ಅಲ್ಪಸಂಖ್ಯಾತ ಸಮುದಾಯ ಮಾತ್ರವಲ್ಲ ಇತರ ಸಮುದಾಯದವರೂ ಕೂಡಾ ಭಯದಲ್ಲಿ ಬದುಕು ನಡೆಸುವಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ದೆಹಲಿಯ ಮಾಜಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್, ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಶಿವಶಂಕರ್ ಮೆನನ್, ಮಾಜಿ ವಿದೇಶಾಂಗ ಕಾರ್ಯದರ್ಶಿ ಸುಜಾತಾ ಸಿಂಗ್, ಮಾಜಿ ಗೃಹ ಕಾರ್ಯದರ್ಶಿ ಜಿ ಕೆ ಪಿಳ್ಳೈ ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಪ್ರಧಾನ ಕಾರ್ಯದರ್ಶಿ ಟಿಕೆ ಎ ನಾಯರ್ ಸೇರಿದಂತೆ 108 ಮಂದಿ ಪತ್ರಕ್ಕೆ ಸಹಿ ಹಾಕಿದ್ದಾರೆ.

ನಮ್ಮ ಹಿರಿಯರು ರಚಿಸಿರುವ ಸಂವಿಧಾನ ನಾಶವಾಗುತ್ತಿರುವ ಕಾರಣ ನಾವು ಈ ಪತ್ರ ಬರೆಯುತ್ತಿದ್ದು, ವಿಶೇಷವಾಗಿ ಮುಸ್ಲಿಮರ ವಿರುದ್ಧ ದ್ವೇಷ ಉಲ್ಬಣಗೊಂಡಿದೆ. ಪ್ರಮುಖವಾಗಿ ಅಸ್ಸೋಂ, ದೆಹಲಿ, ಗುಜರಾತ್, ಹರಿಯಾಣ, ಕರ್ನಾಟಕ, ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ದ್ವೇಷದ ರಾಜಕಾರಣ ನಡೆಯುತ್ತಿದೆ ಎಂದಿದ್ದಾರೆ.

ನಮ್ಮದು ಶ್ರೇಷ್ಠ ನಾಗರಿಕ ಪರಂಪರೆಯಾಗಿದೆ ಮತ್ತು ನಮ್ಮ ಸಂವಿಧಾನವನ್ನು ಸಂರಕ್ಷಿಸಲು ತುಂಬಾ ನಿಖರವಾಗಿ ವಿನ್ಯಾಸಗೊಳಿಸಲಾಗಿದೆ. ದ್ವೇಷದ ರಾಜಕಾರಣವನ್ನು ಕೊನೆಗೊಳಿಸಲು ನೀವು ಕರೆ ನೀಡುತ್ತೀರಿ ಎಂಬುದು ನಮ್ಮ ಪ್ರೀತಿಯ ಆಶಯವಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ABOUT THE AUTHOR

...view details