ಕರ್ನಾಟಕ

karnataka

ETV Bharat / bharat

ಭಾರತಕ್ಕೆ ಮುಸ್ಲಿಂ ವ್ಯಕ್ತಿ ಪ್ರಧಾನಿಯಾದರೆ, ಶೇ.50ರಷ್ಟು ಹಿಂದೂಗಳು ಮತಾಂತರ: ಯತಿ ನರಸಿಂಗಾನಂದ್ - Muslim became the prime minister of India

ದೇಶದಲ್ಲಿ ಮುಸ್ಲಿಂ ವ್ಯಕ್ತಿ ಪ್ರಧಾನಿಯಾದರೆ ಶೇ.50ರಷ್ಟು ಹಿಂದೂಗಳು ಇಸ್ಲಾಂ ಮತಾಂತರವಾಗಲಿದ್ದಾರೆ. ಇದು ಹಿಂದೂಗಳ ಮುಂದಿನ ಭವಿಷ್ಯ. ಇಂತಹ ಭವಿಷ್ಯವನ್ನು ತಪ್ಪಿಸಬೇಕಾಗಿದೆ ಎಂದು ನರಸಿಂಗಾನಂದ್ ಹೇಳಿದ್ದಾರೆ.

ಯತಿ ನರಸಿಂಗಾನಂದ್
Yati Narsinghanand

By

Published : Apr 3, 2022, 9:01 PM IST

ನವದೆಹಲಿ: ಜಾಮೀನಿನ ಮೇಲೆ ಹೊರಗಡೆ ಇರುವ ಉತ್ತರ ಪ್ರದೇಶದ ಗಾಜಿಯಾಬಾದ್‌ನ ದಾಸ್ನಾ ದೇವಿ ದೇವಸ್ಥಾನದ ಪ್ರಧಾನ ಅರ್ಚಕ ಯತಿ ನರಸಿಂಗಾನಂದ್ ಮತ್ತೊಂದು ವಿವಾದಿತ ಹೇಳಿಕೆ ನೀಡಿದ್ದಾರೆ. ಮುಂದಿನ 20 ವರ್ಷಗಳಲ್ಲಿ ಭಾರತಕ್ಕೆ ಮುಸ್ಲಿಂ ವ್ಯಕ್ತಿ ಪ್ರಧಾನಿಯಾದರೆ, ಶೇ.50ರಷ್ಟು ಹಿಂದೂಗಳು ಇಸ್ಲಾಂಗೆ ಮತಾಂತರವಾಗಲಿದ್ದಾರೆ ಎಂದು ಅವರು ಹೇಳಿದ್ದಾರೆ.

ದೆಹಲಿಯ ಬುರಾರಿ ಮೈದಾನದಲ್ಲಿ ಭಾನುವಾರ ಹಿಂದೂ ಮಹಾಪಂಚಾಯತ್​ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಹಲವು ಹಿಂದೂ ನಾಯಕರು ಪಾಲ್ಗೊಂಡಿದ್ದರು. ಮಹಾಪಂಚಾಯತ್ ಉದ್ದೇಶಿಸಿ ಯತಿ ನರಸಿಂಗಾನಂದ್ ಮಾತನಾಡಿದ್ದಾರೆ. '2029 ಅಥವಾ 2034 ಅಥವಾ 2039ರಲ್ಲಿ ಮಾತ್ರ ಮುಸ್ಲಿಂ ವ್ಯಕ್ತಿ ಪ್ರಧಾನಿಯಾಗಲು ಸಾಧ್ಯವಿದೆ. ಒಂದು ವೇಳೆ ಮುಸ್ಲಿಂ ವ್ಯಕ್ತಿ ಪ್ರಧಾನಿಯಾದರೆ, ಶೇ.50ರಷ್ಟು ಹಿಂದೂಗಳು ಇಸ್ಲಾಂಗೆ ಮತಾಂತರವಾಗಲಿದ್ದಾರೆ. ಉಳಿದ ಶೇ.40ರಷ್ಟು ಹಿಂದೂಗಳು ಕೊಲೆಯಾಗಲಿದ್ದಾರೆ. ಇನ್ನುಳಿದ ಶೇ.10ರಷ್ಟು ಜನ ನಿರಾಶ್ರಿತ ಕ್ಯಾಂಪ್​ಗಳು ಅಥವಾ ಬೇರೆ ರಾಷ್ಟ್ರಗಳಿಗೆ ಹೋಗಿ ನೆಲೆಬೇಕಾಗುತ್ತದೆ. ಇದು ಹಿಂದೂಗಳ ಮುಂದಿನ ಭವಿಷ್ಯ. ಇಂತಹ ಭವಿಷ್ಯವನ್ನು ತಪ್ಪಿಸಬೇಕಾದರೆ ಶಸ್ತ್ರಸಜ್ಜಿತರಾಗಿ' ಎಂದು ಯತಿ ನರಸಿಂಗಾನಂದ್ ಹೇಳಿದ್ದಾರೆ.

ಈ ಕಾರ್ಯಕ್ರಮವನ್ನು ಸೇವ್ ಇಂಡಿಯಾ ಫೌಂಡೇಶನ್ ಸಂಸ್ಥಾಪಕ ಪ್ರೀತ್ ಸಿಂಗ್ ಆಯೋಜಿಸಿದ್ದರು. ಕಳೆದ ವರ್ಷ ಜಂತರ್ ಮಂತರ್‌ನಲ್ಲಿ ಮುಸ್ಲಿಂ ವಿರೋಧಿ ಘೋಷಣೆಗಳು ಕೂಗಿದ್ದ ಕಾರ್ಯಕ್ರಮದ ಆಯೋಜಕರಲ್ಲಿ ಪ್ರೀತ್​ ಸಿಂಗ್ ಕೂಡ ಒಬ್ಬರಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿದ್ದರು. ಆದರೆ, ಸದ್ಯ ಪ್ರೀತ್ ಸಿಂಗ್ ಜಾಮೀನಿನ ಮೇಲೆ ಹೊರಗಿದ್ದಾರೆ. ಅದೇ ರೀತಿಯಾಗಿ ಯತಿ ನರಸಿಂಗಾನಂದ್ ಸಹ ಹರಿದ್ವಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಸ್ಲಿಂ ವಿರೋಧಿ ಘೋಷಣೆ ಸಂಬಂಧ ಪ್ರಕರಣದ ಆರೋಪಿಯಾಗಿದ್ದು, ಇವರು ಕೂಡ ಜಾಮೀನಿನ ಮೇಲೆ ಹೊರಗಿದ್ದಾರೆ.

ಭಾನುವಾರ ನಡೆದ ಈ ಹಿಂದೂ ಮಹಾಪಂಚಾಯತ್​ ಕಾರ್ಯಕ್ರಮಕ್ಕೆ ಯಾವುದೇ ಅನುಮತಿ ಪಡೆದಿರಲಿಲ್ಲ ಎನ್ನಲಾಗ್ತಿದೆ. ಅಲ್ಲದೇ, ಈ ಕಾರ್ಯಕ್ರಮದ ವರದಿಗೆ ತೆರಳಿದ್ದ ಕೆಲ ಪತ್ರಕರ್ತರ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಹೇಳಲಾಗ್ತಿದೆ. ಆದರೆ, ಪತ್ರಕರ್ತರ ಮೇಲಿನ ಹಲ್ಲೆ ಆರೋಪವನ್ನು ಪೊಲೀಸರು ತಳ್ಳಿಹಾಕಿದ್ದಾರೆ.

ಇದನ್ನೂ ಓದಿ:ಕಾಶ್ಮೀರ ಕಣಿವೆಗೆ ಪಂಡಿತರು ಶೀಘ್ರವೇ ಮರಳುತ್ತಾರೆ ಎಂದ ಭಾಗವತ್: 'ದಿ ಕಾಶ್ಮೀರ್ ಫೈಲ್ಸ್' ಬಗ್ಗೆ ಹೇಳಿದ್ದೇನು?

ABOUT THE AUTHOR

...view details