ಕರ್ನಾಟಕ

karnataka

By

Published : May 7, 2021, 12:03 PM IST

ETV Bharat / bharat

ಛತ್ತೀಸ್‌ಗಢದಲ್ಲಿ ಮಾದಕ ಔಷಧಿ ಸೇವಿಸಿ 9 ಸಾವು: ಹೋಮಿಯೋಪಥಿ ವೈದ್ಯ​ನ ಬಂಧನ

ಮಾದಕ ಔಷಧಿ ಕುಡಿದು 9 ಜನರ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಹೋಮಿಯೋಪಥಿ ವೈದ್ಯನನ್ನು ಛತ್ತೀಸ್​ಗಢದ ಬಿಲಾಸ್ಪುರದಲ್ಲಿ ಪೊಲೀಸರು ಬಂಧಿಸಿದ್ದಾರೆ.

Opposition Leader dharam lal kaushik  Opposition Leader dharam lal kaushik reached to house of dead in Kormi village  9 people died in kormi village after drinking toxic syrup  bilaspur news  chhattisgarh news  Opposition Leader dharam lal kaushik targeted congress  Homeopathy doctor SR Chakraborty arrested  ಘಟನೆಗೆ ಕಾರಣವಾಗಿದ್ದ ಹೋಮಿಯೋಪಥಿ ಡಾಕ್ಟರ್​ ಅರೆಸ್ಟ್  ಬಿಲಾಸ್ಪುರ ಘಟನೆಗೆ ಕಾರಣವಾಗಿದ್ದ ಹೋಮಿಯೋಪಥಿ ಡಾಕ್ಟರ್​ ಅರೆಸ್ಟ್  ಮಾದಕ ಔಷಧಿ ಕುಡಿದು 9 ಸಾವು ಪ್ರಕರಣ  ಬಿಲಾಸ್ಪುರದಲ್ಲಿ ಮಾದಕ ಔಷಧಿ ಕುಡಿದು 9 ಸಾವು ಪ್ರಕರಣ  ಬಿಲಾಸ್ಪುರ ಅಪರಾಧ ಸುದ್ದಿ
ಘಟನೆಗೆ ಕಾರಣವಾಗಿದ್ದ ಹೋಮಿಯೋಪಥಿ ಡಾಕ್ಟರ್​ ಅರೆಸ್ಟ್

ಬಿಲಾಸ್ಪುರ(ಛತ್ತೀಸ್​​ಗಢ): ಹೋಮಿಯೋಪಥಿ ವೈದ್ಯ ನೀಡಿದ ಔಷಧಿ ಸೇವಿಸಿದ ಒಂದೇ ಗ್ರಾಮದ 9 ಮಂದಿ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವೈದ್ಯನೊಬ್ಬನನ್ನು ಬಂಧಿಸಲಾಗಿದೆ.

ಘಟನೆಯ ವಿವರ

ಛತ್ತೀಸ್​ಗಢದಲ್ಲಿ ಲಾಕ್​ಡೌನ್ ಜಾರಿಗೊಳಿಸಿರುವ ಕಾರಣ ಮದ್ಯ​ ಸಿಗುತ್ತಿಲ್ಲ. ಬಿಲಾಸ್ಪುರದ ಸಿರ್ಗಿಟ್ಟಿ ಗ್ರಾಮದಲ್ಲಿ ಯುವಕನೊಬ್ಬ ಹೋಮಿಯೋಪಥಿ ವೈದ್ಯರ ಬಳಿ ಕೆಮ್ಮು ಮತ್ತು ನೆಗಡಿಗೆ ‘ಡ್ರೋಸೆರಾ 30’ ಔಷಧಿ ಪಡೆದಿದ್ದಾನೆ. ಈ ಔಷಧಿಯಲ್ಲಿ ಶೇ.91ರಷ್ಟು ಆಲ್ಕೋಹಾಲ್​ ಇರುತ್ತೆ. ಇದನ್ನರಿತ ಯುವಕ ನೀರಿನಲ್ಲಿ ಬೆರೆಸಿ ಕುಡಿದಿದ್ದಾನೆ. ಇದನ್ನರಿತ ಕೆಲವರು ಯುವಕನ ಹಾದಿಯನ್ನೇ ಹಿಡಿದಿದ್ದಾರೆ. ಅದು ಓವರ್ ಡೋಸ್​ ಆಗಿದೆ. ಹೀಗಾಗಿ ಗ್ರಾಮದ 9 ಜನರು ಮೃತಪಟ್ಟಿದ್ದು, ನಾಲ್ವರು ಸ್ಥಿತಿ ಚಿಂತಾಜನಕವಾಗಿದೆ.

ಇದನ್ನೂ ಓದಿ:ಧೈರ್ಯದಿಂದ ಯಮನೊಂದಿಗೆ ಹೋರಾಡಿ ಪ್ರಾಣ ಗೆದ್ದ ಪೋರ: 90 ಅಡಿಗಳಿಂದ ಮೇಲೆ ಬಂದ ‘ಮೃತ್ಯುಂಜಯ’

ಸತ್ತವರೆಲ್ಲರೂ 25 ರಿಂದ 30 ವರ್ಷ ವಯಸ್ಸಿನ ಯುವಕರಾಗಿದ್ದಾರೆ. ಈ ಘಟನೆಗೆ ಕಾರಣರಾದ ವೈದ್ಯ ಎಸ್​.ಆರ್​ ಚಕ್ರವತಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ವೈದ್ಯನ ಮೇಲೆ ಐಪಿಸಿ ಸೆಕ್ಷನ್ 304 ಮತ್ತು ನರ್ಸಿಂಗ್ ಹೋಮ್ ಆಕ್ಟ್ 12, 13 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ:ಸಿಗದ ಅಲ್ಕೊಹಾಲ್, ಮಾದಕ ಔಷಧಿ ಕುಡಿದು 9 ಸಾವು

For All Latest Updates

ABOUT THE AUTHOR

...view details