ಕರ್ನಾಟಕ

karnataka

By

Published : Aug 7, 2021, 8:13 AM IST

ETV Bharat / bharat

ಅಧಿವೇಶನದ ಹೆಸರಲ್ಲಿ ಹಣ ವ್ಯರ್ಥವಾಗಲು ಪ್ರತಿಪಕ್ಷಗಳೇ ಕಾರಣ: ಕೇಂದ್ರ ಸಚಿವ ನಖ್ವಿ

ಪಾರ್ಲಿಮೆಂಟ್​ನಲ್ಲಿ ಬಿಕ್ಕಟ್ಟು ಸೃಷ್ಟಿಯಾಗಲು ಪ್ರತಿಪಕ್ಷಗಳೇ ಕಾರಣ ಎಂದು ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಆರೋಪಿಸಿದ್ದು, ಇದರಿಂದಾಗಿ ಹಣ ವ್ಯರ್ಥವಾಗುತ್ತಿದೆ ಎಂದು ಕಿಡಿಕಾರಿದ್ದಾರೆ.

opposition-is-solely-responsible-for-parliament-disruption-mukhtar-abbas-naqvi
ಅಧಿವೇಶನದ ಹೆಸರಲ್ಲಿ ಹಣ ವ್ಯರ್ಥವಾಗಲು ವಿಪಕ್ಷಗಳೇ ಕಾರಣ: ಕೇಂದ್ರ ಸಚಿವಮುಖ್ತಾರ್ ಅಬ್ಬಾಸ್ ನಖ್ವಿ

ನವದೆಹಲಿ:ಈ ಬಾರಿಯಸಂಸತ್ ಅಧಿವೇಶನದಲ್ಲಿ ಬಿಕ್ಕಟ್ಟು ಸೃಷ್ಟಿಯಾಗಲು ಪ್ರತಿಪಕ್ಷಗಳೇ ಕಾರಣ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಆರೋಪಿಸಿದ್ದಾರೆ.

'ಈಟಿವಿ ಭಾರತ' ಪ್ರತಿನಿಧಿಯೊಂದಿಗೆ ಮಸೂದೆಗಳ ಅಂಗೀಕಾರದ ಬಗ್ಗೆ ಮಾತನಾಡಿದ ಅವರು, ಅಂಗೀಕಾರಗೊಳ್ಳುತ್ತಿರುವ ಬಿಲ್​ಗಳ ಬಗ್ಗೆ ಪ್ರತಿಪಕ್ಷಗಳಿಗೆ ಆತಂಕವಿದ್ದರೆ ಅವರು, ಸದನದಲ್ಲಿ ಕುಳಿತು ಅವುಗಳ ಬಗ್ಗೆ ಚರ್ಚೆ ಮಾಡಲಿ ಎಂದು ಒತ್ತಾಯಿಸಿದ್ದಾರೆ.

ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ

ಪ್ರತಿಪಕ್ಷಗಳಿಂದಾಗಿ ಸಂಸತ್​ ಕಾರ್ಯಕಲಾಪ ಸರಿಯಾಗಿ ನಡೆಯುತ್ತಿಲ್ಲ. ಇದರಿಂದಾಗಿ ಹಣ ವ್ಯರ್ಥವಾಗುತ್ತಿದೆ. ಇದಕ್ಕೆಲ್ಲಾ ಪ್ರತಿಪಕ್ಷಗಳೇ ಕಾರಣ ಎಂದು ಮುಖ್ತಾರ್ ಅಬ್ಬಾಸ್ ನಖ್ವಿ ಕಿಡಿಕಾರಿದ್ದಾರೆ.

ಇದನ್ನೂ ಓದಿ:ಆ.15ರಂದು ಧ್ವಜಾರೋಹಣ ಮಾಡಲು ಬಿಡುವುದಿಲ್ಲ: ಯುಪಿ ಸಿಎಂ ಯೋಗಿಗೆ ಬೆದರಿಕೆ

ABOUT THE AUTHOR

...view details