ಕರ್ನಾಟಕ

karnataka

ETV Bharat / bharat

ರಾಷ್ಟ್ರೀಯ ವಾಲಿಬಾಲ್ ಆಟಗಾರ್ತಿಯಾದರೂ ಜೀವನಕ್ಕಾಗಿ ಕಿರಾಣಿ ಅಂಗಡಿಯಲ್ಲಿ ಕೆಲಸ - ರಾಷ್ಟ್ರೀಯ ವಾಲಿಬಾಲ್ ಆಟಗಾರ್ತಿ ಸಬಿತಾ ಕಾಚಿಮ್

ನಾವು ಬಡವರು. ಪಡಿತರ ರೇಷನ್​ ಸಹ ಪಡೆಯುವುದು ಕಷ್ಟವಾಗುತ್ತಿದೆ. ನಾನು ಕೆಲಸ ಮಾಡಲು ಪ್ರಾರಂಭಿಸಿದ್ದರಿಂದ ನನ್ನ ಕುಟುಂಬಕ್ಕೆ ಸ್ವಲ್ಪ ಸಹಾಯವಾಗಿದೆ. ನಾನು ಕಾಲೇಜ್​ಗೆ ಹೋಗುತ್ತೇನೆ, ಬಿಡುವಿನ ಸಮಯದಲ್ಲಿ ಅಂಗಡಿಗೆ ಹೋಗಿ ಕೆಲಸ ಮಾಡುತ್ತೇನೆ..

Poverty-stricken national volleyball player
ರಾಷ್ಟ್ರೀಯ ವಾಲಿಬಾಲ್ ಆಟಗಾರ್ತಿಯಾದರು ಜೀವನಕ್ಕಾಗಿ ಕೀರಾಣಿ ಅಂಗಡಿಯಲ್ಲಿ ಕೇಲಸ

By

Published : Jan 3, 2021, 9:07 AM IST

ಮಲ್ಕಂಗಿರಿ(ಒಡಿಶಾ): ರಾಜ್ಯದಲ್ಲಿ ಕ್ರೀಡೆಗಳನ್ನು ಉತ್ತೇಜಿಸಲು ಮತ್ತು ಅಭಿವೃದ್ಧಿಪಡಿಸಲು ಒಡಿಶಾ ಸರ್ಕಾರ ಕ್ರಮಕೈಗೊಂಡಿದ್ದರೂ ಹಲವಾರು ರಾಷ್ಟ್ರೀಯ ಕ್ರೀಡಾಪಟುಗಳು ಆರ್ಥಿಕ ಬಿಕ್ಕಟ್ಟು ಮತ್ತು ಸರ್ಕಾರದ ನೆರವಿನ ಕೊರತೆಯಿಂದಾಗಿ ಈಗ ತಮ್ಮ ಜೀವನೋಪಾಯಕ್ಕಾಗಿ ಬೇರೆ ಬೇರೆ ಕೆಲಸ ಮಾಡುತ್ತಿದ್ದಾರೆ.

ಅದೇ ರೀತಿ ರಾಷ್ಟ್ರಮಟ್ಟದ ಮಹಿಳಾ ವಾಲಿಬಾಲ್ ತಂಡದಲ್ಲಿ ಸ್ಥಾನ ಪಡೆದಿದ್ದ ಒಡಿಶಾದ ಮಲ್ಕಂಗಿರಿ ಜಿಲ್ಲೆಯ ನುಗುಡಾ ಗ್ರಾಮದ 21 ವರ್ಷದ ಬುಡಕಟ್ಟು ಹುಡುಗಿ ಸಬಿತಾ ಕಾಚಿಮ್, ಈಗ ಜೀವನೋಪಾಯಕ್ಕಾಗಿ ಕಿರಾಣಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾಳೆ.

ಸಬಿತಾ ದಲಿತ ಕುಟುಂಬಕ್ಕೆ ಸೇರಿದವಳು. ಆಕೆಯ ತಂದೆ ತೀರಿಕೊಂಡ ನಂತರ ಕುಟುಂಬದ ಜವಾಬ್ದಾರಿ ಇವರ ಹೇಗಲೇರಿತು. ಜಿಲ್ಲಾ ಮಟ್ಟದಲ್ಲಿ ಅವರ ಉತ್ತಮ ಪ್ರದರ್ಶನದ ನಂತರ, ಅವರನ್ನು ರಾಜ್ಯಮಟ್ಟದ ಸ್ಪರ್ಧೆಗಳಿಗೆ ಆಯ್ಕೆ ಮಾಡಲಾಯಿತು. ಇವರು ಹಲವಾರು ರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಭಾಗವಹಿಸಿದ್ದಾರೆ. ಉತ್ತಮ ವಾಲಿಬಾಲ್​ ಆಟಗಾರ್ತಿಯಾಗಿರುವ ಸಬಿತಾ ಕಾಚಿಮ್ ಪ್ರಸ್ತುತ ಮಲ್ಕಂಗಿರಿಯಲ್ಲಿ ಸರ್ಕಾರಿ ಪದವಿ ಕಾಲೇಜ್​ನಲ್ಲಿ ಮೊದಲ ವರ್ಷದ ಪದವಿ ಓದುತ್ತಿದ್ದಾರೆ.

ರಾಷ್ಟ್ರೀಯ ವಾಲಿಬಾಲ್ ಆಟಗಾರ್ತಿಯಾದರು ಜೀವನಕ್ಕಾಗಿ ಕೀರಾಣಿ ಅಂಗಡಿಯಲ್ಲಿ ಕೇಲಸ

ಈಟಿವಿ ಭಾರತ್​ ಜೊತೆ ಮಾತನಾಡಿದ ಸಬಿತಾ ಕಾಚಿಮ್, "ನಾವು ಬಡವರು. ಪಡಿತರ ರೇಷನ್​ ಸಹ ಪಡೆಯುವುದು ಕಷ್ಟವಾಗುತ್ತಿದೆ. ನಾನು ಕೆಲಸ ಮಾಡಲು ಪ್ರಾರಂಭಿಸಿದ್ದರಿಂದ ನನ್ನ ಕುಟುಂಬಕ್ಕೆ ಸ್ವಲ್ಪ ಸಹಾಯವಾಗಿದೆ. ನಾನು ಕಾಲೇಜ್​ಗೆ ಹೋಗುತ್ತೇನೆ, ಬಿಡುವಿನ ಸಮಯದಲ್ಲಿ ಅಂಗಡಿಗೆ ಹೋಗಿ ಕೆಲಸ ಮಾಡುತ್ತೇನೆ" ಎಂದು ಹೇಳಿದರು.

ಓದಿ : ಹಿಂದೂ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸಿದ ಆರೋಪ ; ಮುನಾವರ್ ಫಾರೂಕಿ ನ್ಯಾಯಾಂಗ ಕಸ್ಟಡಿಗೆ!

"ನಾನು ರಾಷ್ಟ್ರಮಟ್ಟದ ಪದಕ ವಿಜೇತೆ. ಆದರೆ, ನನ್ನ ಮನೆಯಲ್ಲಿನ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲ. ನನಗೆ ಸಹಾಯ ಮಾಡುವಂತೆ ನಾನು ಸರ್ಕಾರಕ್ಕೆ ಮನವಿ ಮಾಡುತ್ತೇನೆ. ನನಗೆ ಬಹಳಷ್ಟು ಕನಸುಗಳಿವೆ. ಆದರೆ, ಇಂತಹ ಪರಿಸ್ಥಿತಿಯಲ್ಲಿ ನನ್ನ ಆಕಾಂಕ್ಷೆಗಳು ಮರೆಯಾಗುತ್ತಿವೆ "ಎಂದು ಅವರು ವಿಷಾದಿಸಿದರು.

ABOUT THE AUTHOR

...view details