ಕರ್ನಾಟಕ

karnataka

ETV Bharat / bharat

ಖಡ್ಗದಂಥ ಆಯುಧದಿಂದ ಕೇಕ್ ಕತ್ತರಿಸಿದ NSUI ಮುಖಂಡನ ಬಂಧನ - ವಿಕ್ರೋಲಿ ರೈಲು ನಿಲ್ದಾಣದ ಬಳಿ ಹುಟ್ಟುಹಬ್ಬ

ಪೊಲೀಸರ ಪ್ರಕಾರ, ಶುಕ್ರವಾರ ಯಾದವ್ ತನ್ನ ಬೆಂಬಲಿಗರೊಂದಿಗೆ ವಿಕ್ರೋಲಿ ರೈಲು ನಿಲ್ದಾಣದ ಬಳಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಆ ಸಮಯದಲ್ಲಿ ಕತ್ತಿಯಂಥ ಆಯುಧದಿಂದ ಕೇಕ್ ಕತ್ತರಿಸಿದ್ದಾರೆ ಎನ್ನಲಾಗಿದೆ.

ಖಡ್ಗದಂಥ ಆಯುಧದಿಂದ ಕೇಕ್ ಕತ್ತರಿಸಿದ NSUI ಮುಖಂಡನ ಬಂಧನ
NSUI leader arrested for cutting cake with sword-like weapon

By

Published : Dec 2, 2022, 4:07 PM IST

ಮುಂಬೈ:ಕತ್ತಿಯಂಥ ಆಯುಧದಿಂದ ಹುಟ್ಟುಹಬ್ಬದ ಕೇಕ್ ಕತ್ತರಿಸಿದ ಆರೋಪದ ಮೇಲೆ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ (ಎನ್‌ಎಸ್‌ಯುಐ) ನಗರ ಘಟಕದ ಅಧ್ಯಕ್ಷ ಪ್ರದ್ಯುಮ್ನ್ ಯಾದವ್ (25) ಎಂಬಾತನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.

ಖಡ್ಗದಂಥ ಆಯುಧದಿಂದ ಕೇಕ್ ಕತ್ತರಿಸಿದ NSUI ಮುಖಂಡ

ಪೊಲೀಸರ ಪ್ರಕಾರ, ಶುಕ್ರವಾರ ಯಾದವ್ ತನ್ನ ಬೆಂಬಲಿಗರೊಂದಿಗೆ ವಿಕ್ರೋಲಿ ರೈಲು ನಿಲ್ದಾಣದ ಬಳಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಆ ಸಮಯದಲ್ಲಿ ಕತ್ತಿಯಂಥ ಆಯುಧದಿಂದ ಕೇಕ್ ಕತ್ತರಿಸಿದ್ದಾರೆ ಎನ್ನಲಾಗಿದೆ.

ಈ ಸಂಭ್ರಮಾಚರಣೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೊಲೀಸರು ಈ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿದ್ದಾರೆ. ಯಾದವ್ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆ ಮತ್ತು ಮುಂಬೈ ಪೊಲೀಸ್ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಜನರು ಚಿಂತೆಯಲ್ಲಿರುವಾಗ ಕಾಂಗ್ರೆಸ್​ನವರು ಕೇಕ್ ಕತ್ತರಿಸಿ ವಿಕೃತಿ ಮೆರೆಯುತ್ತಿದ್ದಾರೆ: ಸಿದ್ದರಾಮೋತ್ಸವಕ್ಕೆ ಬಿಜೆಪಿ ಟೀಕೆ

ABOUT THE AUTHOR

...view details