ಕಾಸರಗೋಡು (ಕೇರಳ) :ಕಾಸರಗೋಡಿನಲ್ಲಿ ಹೆದ್ದಾರಿ ವಿಸ್ತರಣೆ ಕಾಮಗಾರಿಯ ಭಾಗವಾಗಿ ಬಸ್ ತಂಗುದಾಣ ಕೆಡವಲಾಗಿದೆ. ಹೀಗಾಗಿ, ಶಾಲಾ ಮಕ್ಕಳು ಸೇರಿದಂತೆ ಪ್ರಯಾಣಿಕರು ಬಿಸಿಲು ಇಲ್ಲವೇ ಮಳೆಯನ್ನೇ ತಾಳಿಕೊಂಡು ಬಯಲಿನಲ್ಲಿ ಬಸ್ಗಾಗಿ ಕಾಯುವಂತಾಗಿದೆ.
ಇದನ್ನರಿತ ಪೆರಿಯದ ಯುವಕರ ತಂಡ ವಿಶಿಷ್ಟ ಉಪಾಯವನ್ನು ಮಾಡಿದೆ. ಮೊಬೈಲ್ ಬಸ್ ವೇಟಿಂಗ್ ಶೆಡ್ ನಿರ್ಮಿಸಲು ಯುವಕರು ಯೋಜಿಸಿದ್ದಾರೆ. ಅಂತೆಯೇ ಈ ಶೆಡ್ ನಿರ್ಮಿಸಲು ಬೇಕಾದ ಹಣವನ್ನು ಈ ಪ್ರದೇಶದ ವ್ಯಾಪಾರಿಗಳು ಮತ್ತು ಸಾಮಾಜಿಕ ಸಂಸ್ಥೆಗಳನ್ನು ಸಂಪರ್ಕಿಸಿ ಸಂಗ್ರಹಿಸಿದ್ದಾರೆ. ಇದೇ ಹಣದಲ್ಲಿ ವಿನೂತನವಾದ ಮೊಬೈಲ್ ಬಸ್ ತಂಗುದಾಣವನ್ನು ನಿರ್ಮಿಸಿ ಸೈ ಎನಿಸಿಕೊಂಡಿದ್ದಾರೆ.