ಕರ್ನಾಟಕ

karnataka

By

Published : Jul 8, 2022, 5:09 PM IST

ETV Bharat / bharat

'ಶಿವಸೇನೆಯ ಬಿಲ್ಲು-ಬಾಣ ಚಿಹ್ನೆ ತೆಗೆದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ': ಉದ್ಧವ್ ಠಾಕ್ರೆ

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಇದೇ ಮೊದಲ ಸಲ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಉದ್ಧವ್ ಠಾಕ್ರೆ ಮಾತನಾಡಿದರು. ಈ ವೇಳೆ ಮಧ್ಯಂತರ ಚುನಾವಣೆಗೆ ಅವರು ಆಗ್ರಹಿಸಿದ್ದಾರೆ.

Uddhav Thackeray on Shiv sena
Uddhav Thackeray on Shiv sena

ಮುಂಬೈ(ಮಹಾರಾಷ್ಟ್ರ): ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ಶಿವಸೇನೆಯ ವಿರುದ್ಧ ಬಂಡಾಯವೆದ್ದ ಏಕನಾಥ್ ಶಿಂದೆ ಬಳಗ ಇದೀಗ ಭಾರತೀಯ ಜನತಾ ಪಾರ್ಟಿ ಜೊತೆ ಸೇರಿ ಸರ್ಕಾರ ರಚನೆ ಮಾಡಿದೆ. ಆದರೆ, ಶಿವಸೇನೆಯ ಚಿಹ್ನೆಯಾಗಿರುವ ಬಿಲ್ಲು, ಬಾಣ ಯಾವ ಬಣದ ಪಾಲಾಗಲಿದೆ ಎಂಬುದು ಎಲ್ಲರಲ್ಲೂ ಹುಟ್ಟಿರುವ ಪ್ರಶ್ನೆಯಾಗಿದೆ. ಇದಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಸಲ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮಾತನಾಡಿದ್ದಾರೆ.

ಶಿವಸೇನೆಯಿಂದ ಬಿಲ್ಲು, ಬಾಣ ತೆಗೆದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ಅದು ಶಿವಸೇನೆಗೆ ಸೇರಿದ್ದು. ಏನೇ ಆಗಲಿ ನಾವು ಹಿಂದೆ ಸರಿಯುವುದಿಲ್ಲ ಎಂದು ಉದ್ಧವ್ ಠಾಕ್ರೆ ಸ್ಪಷ್ಟಪಡಿಸಿದ್ದಾರೆ. ಪಕ್ಷ ಹೊಸ ಚಿಹ್ನೆಯ ಬಗ್ಗೆ ಯೋಚಿಸುವ ಅಗತ್ಯವಿಲ್ಲ ಎಂದಿದ್ದಾರೆ. ಉದ್ಧವ್ ಠಾಕ್ರೆ ವಿರುದ್ಧ ಬಂಡಾಯವೆದ್ದಿರುವ ಏಕನಾಥ್ ಶಿಂದೆ ಬಳಗಕ್ಕೆ ಶಿವಸೇನೆಯ ಬಿಲ್ಲು, ಬಾಣ ಚಿಹ್ನೆ ಸಿಗಲಿದೆ ಎಂಬು ಮಾತು ಕೇಳಿ ಬರುತ್ತಿದ್ದು, ಇದರ ಬೆನ್ನಲ್ಲೇ ಉದ್ಧವ್ ಠಾಕ್ರೆ ಮಾತನಾಡಿದ್ದಾರೆ.

ಇದನ್ನೂ ಓದಿರಿ:ಶಿಂಜೋ ಅಬೆ ಹತ್ಯೆ: ಗೌರವಾರ್ಥವಾಗಿ ನಾಳೆ ಭಾರತದಲ್ಲಿ ಶೋಕಾಚರಣೆ ಘೋಷಿಸಿದ ಮೋದಿ

ಶಿವಸೇನೆಯ ಬಿಲ್ಲು, ಬಾಣ ಹಿಡಿಯಲು ಯಾರಿಂದಲೂ ಸಾಧ್ಯವಿಲ್ಲ. ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಿದ ಬಳಕವೇ ನಾನು ಮಾತನಾಡುತ್ತಿದ್ದೇನೆ. ಶಿವಸೇನೆಯ ಶಾಸಕರು ಪಲಾಯನ ಮಾಡಿದ್ದಾರೆ. ಶಾಸಕರ ಪಲಾಯನದೊಂದಿಗೆ ಪಕ್ಷ ಪತನವಾಗುವುದಿಲ್ಲ. ಮಾತೋಶ್ರೀ ಬಗ್ಗೆ ಜನರಲ್ಲಿ ಅಪಾರವಾದ ಹೆಮ್ಮೆ ಇದೆ ಎಂದಿದ್ದಾರೆ.

ಮಧ್ಯಂತರ ಚುನಾವಣೆಗೆ ಉದ್ಧವ್ ಆಗ್ರಹ: ಮಹಾರಾಷ್ಟ್ರದಲ್ಲಿ ಮಧ್ಯಂತರ ಚುನಾವಣೆ ನಡೆಸುವಂತೆ ಉದ್ಧವ್ ಠಾಕ್ರೆ ಆಗ್ರಹಿಸಿದ್ದಾರೆ. ಇವತ್ತೇ ವಿಧಾನಸಭೆ ಚುನಾವಣೆ ನಡೆಸಿ ಎಂದು ನಾನು ಅವರಿಗೆ ಸವಾಲು ಹಾಕುತ್ತೇನೆ. ನಾನು ತಪ್ಪು ಮಾಡಿದ್ದರೆ ಜನರೇ ನಮ್ಮನ್ನು ಮನೆಗೆ ಕಳುಹಿಸುತ್ತಾರೆ. ಈಗ ಮಾಡಿರುವುದನ್ನ ಕಳೆದ ಎರಡೂವರೆ ವರ್ಷಗಳ ಹಿಂದೆಯೇ ಮಾಡಬೇಕಿತ್ತು. ಗೌರವದ ರೀತಿಯಲ್ಲಿ ಮಾಡಬೇಕಿತ್ತು ಎಂದು ಪ್ರಶ್ನೆ ಮಾಡಿದರು.

ಬಂಡಾಯ ಶಿವಸೇನೆ ಶಾಸಕರು ಮಾತೋಶ್ರೀ ಬಗ್ಗೆ ಗೌರವವಿದೆ ಎಂದು ಹೇಳುತ್ತಿದ್ದಾರೆ. ಆದರೆ, ಈ ಹಿಂದೆ ಬಿಜೆಪಿ ನಮ್ಮ ಮೇಲೆ ವಾಗ್ದಾಳಿ ನಡೆಸಿದಾಗ ನಿವೆಲ್ಲರೂ ಮೌನವಹಿಸಿದ್ದೀರಿ. ಅವರೊಂದಿಗೆ ಸಂಪರ್ಕದಲ್ಲಿದ್ದು, ಇದೀಗ ನಮಗೆ ಮೋಸ ಮಾಡಿದ್ದೀರಿ ಎಂದರು.

ABOUT THE AUTHOR

...view details