ಕರ್ನಾಟಕ

karnataka

By

Published : Mar 21, 2021, 9:31 PM IST

ETV Bharat / bharat

ಪರಮ್​ ಬೀರ್​ ಸಿಂಗ್ ಅವರ ಪತ್ರ 'ಮಹಾ 'ಸರ್ಕಾರದ ಮೇಲೆ ಪರಿಣಾಮ ಬೀರಲ್ಲ : ಶರದ್​ ಪವಾರ್

ಮಹಾರಾಷ್ಟ್ರ ಗೃಹ ಸಚಿವರ ವಿರುದ್ಧದ ಆರೋಪಗಳು ಗಂಭೀರವಾಗಿವೆ. ಗೃಹ ಸಚಿವರ ವಿರುದ್ಧದ ಈ ಆರೋಪಗಳ ವಿಚಾರಣೆಗೆ ಸಂಬಂಧಿಸಿದಂತೆ ನಿರ್ಧಾರ ತೆಗೆದುಕೊಳ್ಳುವ ಸಂಪೂರ್ಣ ಅಧಿಕಾರ ಮಹಾರಾಷ್ಟ್ರ ಸಿಎಂಗೆ ಇದೆ..

Sharad Pawar
ಎನ್​ಸಿಪಿ ಮುಖ್ಯಸ್ಥ ಶರದ್​ ಪವಾರ್​

ನವದೆಹಲಿ :ಗೃಹ ಸಚಿವ ಅನಿಲ್​ ದೇಶ್​ಮುಖ್​ ದುಷ್ಕೃತ್ಯದಲ್ಲಿ ತೊಡಗಿದ್ದಾರೆ ಮತ್ತು ಅಮಾನತುಗೊಂಡ ಎಪಿಐ ಸಚಿನ್​ ವಾಜೆ ಅವರಿಗೆ ಪ್ರತಿ ತಿಂಗಳು 100 ಕೋಟಿ ರೂ. ವಸೂಲಿ ಮಾಡುವಂತೆ ಹೇಳಿದ್ದಾರೆ ಎಂದು ಆರೋಪಿಸಿ ಮಾಜಿ ಮುಂಬೈ ಪೊಲೀಸ್​ ಕಮಿಷನರ್​ ಪರಮ್​ ಬೀರ್​ ಸಿಂಗ್​ ಸಿಎಂಗೆ ಬರೆದ ಪತ್ರ ಯಾವುದೇ ರೀತಿ ಮಹಾರಾಷ್ಟ್ರ ಸರ್ಕಾರದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಎನ್​ಸಿಪಿ ಮುಖ್ಯಸ್ಥ ಶರದ್​ ಪವಾರ್​ ಹೇಳಿದ್ದಾರೆ.

"ವೇಜ್ ಅವರನ್ನು ಸೇವೆಯಲ್ಲಿ ಬಲಪಡಿಸುವ ನಿರ್ಧಾರವನ್ನು ಮಾಜಿ ಮುಂಬೈ ಪೊಲೀಸ್ ಆಯುಕ್ತರು ತೆಗೆದುಕೊಂಡಿದ್ದು, ಮುಖ್ಯಮಂತ್ರಿಯವರು ತೆಗೆದುಕೊಳ್ಳಲಿಲ್ಲ. ಹಾಗಾಗಿ, ಈ ಪತ್ರ ಮಹಾರಾಷ್ಟ್ರ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಶರದ್​ ಪವಾರ್​ ಹೇಳಿದ್ದಾರೆ.

ಓದಿ:ತೀವ್ರ ಸಂಚಲನ ಸೃಷ್ಟಿಸಿದ ಪರಮ್​​ಬೀರ್ ಸಿಂಗ್ ಪತ್ರ.. ಸಿಎಂ ಕಚೇರಿ ಹೇಳಿದ್ದೇನು.!?

"ಮಹಾರಾಷ್ಟ್ರ ಗೃಹ ಸಚಿವರ ವಿರುದ್ಧದ ಆರೋಪಗಳು ಗಂಭೀರವಾಗಿವೆ. ಗೃಹ ಸಚಿವರ ವಿರುದ್ಧದ ಈ ಆರೋಪಗಳ ವಿಚಾರಣೆಗೆ ಸಂಬಂಧಿಸಿದಂತೆ ನಿರ್ಧಾರ ತೆಗೆದುಕೊಳ್ಳುವ ಸಂಪೂರ್ಣ ಅಧಿಕಾರ ಮಹಾರಾಷ್ಟ್ರ ಸಿಎಂಗೆ ಇದೆ" ಎಂದು ಅವರು ಹೇಳಿದರು.

ಈಗ ಗೃಹರಕ್ಷಕ ದಳದ ಕಮಾಂಡೆಂಟ್ ಜನರಲ್ ಆಗಿ ನೇಮಕಗೊಂಡಿರುವ ಪರಮ್ ಬೀರ್ ಸಿಂಗ್ ಅವರ ಪತ್ರದಲ್ಲಿ "ನಿಜವಾದ ತಪ್ಪಿತಸ್ಥರಿಂದ ಗಮನವನ್ನು ಬೇರೆಡೆ ಸೆಳೆಯಲು ಅವರನ್ನು ಬಲಿಪಶುವನ್ನಾಗಿ ಮಾಡಲಾಗಿದೆ" ಎಂದು ಶರದ್​ ಪವಾರ್‌ ಹೇಳಿದ್ದಾರೆ.

ABOUT THE AUTHOR

...view details