ಕರ್ನಾಟಕ

karnataka

By

Published : Aug 2, 2021, 5:14 PM IST

ETV Bharat / bharat

Pegasus ವಿವಾದ: ಸೂಕ್ತ ತನಿಖೆಗೆ ಒತ್ತಾಯಿಸಿದ ನಿತೀಶ್​ ಕುಮಾರ್​.. ಪ್ರತಿಪಕ್ಷಗಳ ಕೂಗಿಗೆ ಬಲ

ಪ್ರಸ್ತುತ ಸಂಸತ್​ ಅಧಿವೇಶನ ಪೆಗಾಸಸ್​ ಹಾಗೂ ರೈತ ಕಾನೂನುಗಳ ವಿಷಯವಾಗಿ ಪ್ರತಿಪಕ್ಷಗಳ ಧರಣಿಗೆ ಕಾರಣವಾಗಿದೆ. ಈ ಬಾರಿಯ ಮುಂಗಾರು ಅಧಿವೇಶನ ಪೆಗಾಸಸ್​ ಬೇಹುಗಾರಿಕಾ ಆ್ಯಪ್​​​ ವಿವಾದ ಸಂಬಂಧ ಬಲಿಯಾಗಿದೆ. ಈ ಗದ್ದಲದ ನಡುವೆ ಯಾವುದೇ ಚರ್ಚೆ ಇಲ್ಲದೇ ನಾಲ್ಕು ಮಸೂದೆಗಳು ಅಂಗೀಕಾರಗೊಂಡಿವೆ. ಈ ನಡುವೆ, ಪೆಗಾಸಸ್​ ವಿವಾದಕ್ಕೆ ಸಂಬಂಧಿಸಿದಂತೆ ತನಿಖೆ ಬಿಹಾರ ಸಿಎಂ ನಿತೀಶ್​ ಕುಮಾರ್​ ಒತ್ತಾಯಿಸಿದ್ದಾರೆ. ಇದು ಪ್ರತಿಪಕ್ಷಗಳ ಒತ್ತಾಯಕ್ಕೆ ಮತ್ತಷ್ಟು ಬಲ ತಂದಿದೆ.

ಸೂಕ್ತ ತನಿಖೆಗೆ ಒತ್ತಾಯಿಸಿದ ನಿತೀಶ್​ ಕುಮಾರ್
ಸೂಕ್ತ ತನಿಖೆಗೆ ಒತ್ತಾಯಿಸಿದ ನಿತೀಶ್​ ಕುಮಾರ್

ನವದೆಹಲಿ:ಪತ್ರಕರ್ತರು, ಪ್ರತಿಪಕ್ಷಗಳ ನಾಯಕರು ಹಾಗೂ ಕೆಲ ಕೇಂದ್ರ ಸಚಿವರ ಫೋನ್​ಗಳನ್ನ ಕದ್ದಾಲಿಸಲಾಗಿದೆ. ಹಾಗೂ ಪೆಗಾಸಸ್​ ಬೇಹುಗಾರಿಕಾ ಆ್ಯಪ್​ ನಿಂದ ನಿಗಾ ಇಡಲಾಗಿದೆ ಎಂಬ ಸುದ್ದಿ ಈಗ ಸಂಸತ್​​ನ ಉಭಯ ಸದನಗಳ ಕಲಾಪಗಳನ್ನೇ ಬಲಿ ತೆಗೆದುಕೊಂಡಿದೆ.

ಈ ನಡುವೆ ಈ ಪ್ರಕರಣದ ಬಗ್ಗೆ ನಿಜವಾಗಿಯೂ ತನಿಖೆ ಮಾಡಬೇಕಿದೆ ಎಂದು ಬಿಹಾರ ಸಿಎಂ ನಿತೀಶ್​ ಕುಮಾರ್​ ಒತ್ತಾಯಿಸಿದ್ದಾರೆ. ಈ ಮೂಲಕ ಎನ್​ಡಿಎ ಮಿತ್ರ ಪಕ್ಷದ ಸಿಎಂ ಒಬ್ಬರು ಪೆಗಾಸಸ್​​ ತನಿಖೆಗೆ ಒತ್ತಾಯಿಸುವ ಮೂಲಕ ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವಂತೆ ಮಾಡಿದ್ದಾರೆ. ಬಿಹಾರ್​ ಸಿಎಂ ಅವರ ಈ ಒತ್ತಾಯ ಪ್ರತಿಪಕ್ಷಗಳ ಒತ್ತಾಯಕ್ಕೆ ಮತ್ತಷ್ಟು ಬಲ ನೀಡಿದಂತಾಗಿದೆ.

ಇಕ್ಕಟ್ಟಿಗೆ ಸಿಲುಕಿಸುತ್ತಾ ನಿತೀಶ್​ ಹೇಳಿಕೆ

ಪೆಗಾಸಸ್​ ಸ್ಪೈವೇರ್​ ಬಗ್ಗೆ ಮಾತನಾಡಿರುವ ಬಿಹಾರ ಸಿಎಂ ನಿತೀಶ್​ ಕುಮಾರ್​, ನಿಜವಾಗಿಯೂ ಈ ಬಗ್ಗೆ ತನಿಖೆ ನಡೆಸಬೇಕಿದೆ. ನಾವು ಟೆಲಿಫೋನ್​ ಕದ್ದಾಲಿಕೆ ಬಗ್ಗೆ ಬಹಳ ದಿನಗಳಿಂದ ಕೇಳುತ್ತಿದ್ದೇವೆ. ಈ ಬಗ್ಗೆ ಸಂಸತ್​ನಲ್ಲಿ ಚರ್ಚೆ ಆಗಬೇಕಾದ ಅಗತ್ಯತೆ ಇದೆ. ಈ ಬಗ್ಗೆ ರಾಷ್ಟ್ರದ ಜನತೆಗೂ ಗೊತ್ತಾಗಬೇಕಿದೆ ಎಂದಿದ್ದಾರೆ ಎಂದು ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.

ಕೋವಿಡ್​ನ ಈ ಸಂದರ್ಭದಲ್ಲಿ ಸಂಸತ್​ ಅಧಿವೇಶನ ನಡೆಯುತ್ತಿದೆ. ಯಾವುದೇ ವಿಷಯಗಳು ಚರ್ಚೆಗೆ ಬಂದಿಲ್ಲ. ಪೆಗಾಸಸ್​ ವಿಷಯವಾಗಿ ಪ್ರತಿಪಕ್ಷಗಳು ಚರ್ಚೆಗೆ ಪಟ್ಟು ಹಿಡಿದಿವೆ. ಕೇಂದ್ರ ಸರ್ಕಾರ ಈ ಬಗ್ಗೆ ಮಾಹಿತಿ ಖಾತೆ ಸಚಿವರು ಸ್ಪಷ್ಟನೆ ನೀಡಿದ್ದಾರೆ ಎನ್ನುತ್ತಿದೆ.

ಈ ಮಧ್ಯೆ ನಾಳೆ ರಾಹುಲ್​ ಗಾಂಧಿ ನೇತೃತ್ವದಲ್ಲಿ ಪ್ರತಿಪಕ್ಷಗಳ ಮಹತ್ವದ ಸಭೆ ನಡೆಯುತ್ತಿದೆ. ಅತ್ತ ಆಗಸ್ಟ್ 4ರಂದು ಕೇಂದ್ರ ಸಚಿವ ಸಂಪುಟ ಸಭೆ ನಡೆಯಲಿದೆ.

ABOUT THE AUTHOR

...view details