ಕರ್ನಾಟಕ

karnataka

ETV Bharat / bharat

ಮನೆ ಕುಸಿದು ನಾಲ್ವರು ಮಕ್ಕಳು ಸೇರಿ 9 ಜನರ ದಾರುಣ ಸಾವು! - ಮನೆ ಕುಸಿದು ನಾಲ್ವರು ಮಕ್ಕಳು ಸೇರಿ 9 ಜನರ ದಾರುಣ ಸಾವು!

ತಮಿಳುನಾಡಿನಲ್ಲಿ ವರುಣನ ಆರ್ಭಟ (heavy rain in Tamil Nadu) ಮುಂದುವರಿದಿದ್ದು, ವೆಲ್ಲೂರಿನಲ್ಲಿ ದುರಂತವೊಂದು (Vellore house collapse) ಸಂಭವಿಸಿದೆ. ಹಠಾತ್​ ಆಗಿ ಮನೆ ಛಾವಣಿ ಕುಸಿದು ನಾಲ್ವರು ಮಕ್ಕಳು ಸಹಿತ ಒಂಬತ್ತು ಜನ ಸಾವನ್ನಪ್ಪಿರುವ (Nine people died) ದುರ್ಘಟನೆ ನಡೆದಿದೆ.

Nine people died  Nine people died in vellore  vellore house collapse  Pernambut Government Hospital  Chief Minister MK Stalin  heavy rain in Tamil Nadu  IMD  ತಮಿಳುನಾಡಿನಲ್ಲಿ ಭಾರೀ ಮಳೆ  ಒಂಬತ್ತು ಜನ ಸಾವು  ವೆಲ್ಲೂರಿನಲ್ಲಿ ಒಂಬತ್ತು ಜನ ಸಾವು  ವೆಲ್ಲೂರಿನಲ್ಲಿ ಮನೆ ಕುಸಿತ  ಪೆರ್ನಂಬಟ್ ಸರ್ಕಾರಿ ಆಸ್ಪತ್ರೆ  ಐಎಂಡಿ  ಮುಖ್ಯಮಂತ್ರಿ ಎಂಕೆ ಸ್ಟಾಲಿನ್
ತಮಿಳುನಾಡಿನಲ್ಲಿ ಮುಂದುವರಿದ ವರುಣ ಆರ್ಭಟ

By

Published : Nov 19, 2021, 2:04 PM IST

Updated : Nov 19, 2021, 3:55 PM IST

ಚೆನ್ನೈ:ತಮಿಳುನಾಡಿನಲ್ಲಿಭಾರಿ ಮಳೆಯಿಂದಾಗಿ (heavy rain in Tamil Nadu) ಮನೆಯೊಂದು ಕುಸಿದು ನಾಲ್ಕು ಮಕ್ಕಳು ಸೇರಿದಂತೆ ಒಂಬತ್ತು ಜನರು (Nine people died) ಸಾವನ್ನಪ್ಪಿರುವ ಘಟನೆ ವೆಲ್ಲೂರು ಜಿಲ್ಲೆಯಲ್ಲಿ ನಡೆದಿದೆ.

ಕುಟುಂಬದವರು ಮನೆಯಲ್ಲಿ ಮಲಗಿದ್ದಾಗ ಹಠಾತ್​ ಆಗಿ ಛಾವಣಿ ಕುಸಿದಿದೆ. ಭಾರಿ ಮಳೆಯಿಂದಾಗಿ ಅವರು ವಾಸಿಸುತ್ತಿದ್ದ ಮನೆ ಕುಸಿದಿದ್ದು (vellore house collapse), ಒಂಬತ್ತು ಜನರು ಸಾವನ್ನಪ್ಪಿದ್ದಾರೆ (Nine people died). ಈ ಘಟನೆಯಲ್ಲಿ ಎಂಟು ಜನರು ಗಾಯಗೊಂಡಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಅಗ್ನಿಶಾಮಕ, ರಕ್ಷಣಾ ಸಿಬ್ಬಂದಿ ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿ ಗಾಯಗೊಂಡವರನ್ನು ಹೊರತೆಗೆದರು. ಮೃತರಲ್ಲಿ ನಾಲ್ವರು ಮಹಿಳೆಯರು, ನಾಲ್ವರು ಮಕ್ಕಳು ಹಾಗೂ ವ್ಯಕ್ತಿಯೊಬ್ಬರು ಎಂದು ಗುರುತಿಸಲಾಗಿದೆ.

ಘಟನೆಯಲ್ಲಿ ಗಾಯಗೊಂಡ 8 ಮಂದಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಪೆರ್ನಂಬಟ್ ಸರ್ಕಾರಿ ಆಸ್ಪತ್ರೆಗೆ (Pernambut Government Hospital) ದಾಖಲಿಸಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಪೆರ್ನಂಬಟ್ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

ತಮಿಳುನಾಡಿನಲ್ಲಿ ಮುಂದುವರಿದ ವರುಣ ಆರ್ಭಟ

ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 5 ಲಕ್ಷ ಮತ್ತು ಗಾಯಾಳುಗಳಿಗೆ 50 ಸಾವಿರ ರೂ. ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ (Chief Minister MK Stalin) ಘೋಷಿಸಿದ್ದಾರೆ. ಕಳೆದ ವಾರ ಸುರಿದ ಭಾರಿ ಮಳೆಗೆ ರಾಜ್ಯದ ರಾಜಧಾನಿ ಚೆನ್ನೈ (capital Chennai) ಕೂಡ ಜಲಾವೃತವಾಗಿತ್ತು.

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಇಂದು ಮುಂಜಾನೆ ತಮಿಳುನಾಡು ಮತ್ತು ಆಂಧ್ರಪ್ರದೇಶದ ಕರಾವಳಿಯನ್ನು ದಾಟಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ನಾಳೆಯಿಂದ ಮಳೆ ಕ್ರಮೇಣ ದುರ್ಬಲಗೊಳ್ಳಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.

ತಮಿಳುನಾಡು, ಆಂಧ್ರಪ್ರದೇಶ ಮತ್ತು ಕರ್ನಾಟಕದ (Karnataka) ಕೆಲವು ಭಾಗಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ (IMD) ಇಲಾಖೆ ತಿಳಿಸಿದೆ.

Last Updated : Nov 19, 2021, 3:55 PM IST

ABOUT THE AUTHOR

...view details