ಕರ್ನಾಟಕ

karnataka

ಕೋವಿಡ್​ ಉಲ್ಬಣ: ಮುಂದಿನ 4 ವಾರ ಭಾರತಕ್ಕೆ ಬಹಳ ನಿರ್ಣಾಯಕ ಎಂದ ಕೇಂದ್ರ!

By

Published : Apr 6, 2021, 8:28 PM IST

ಎರಡನೇ ಹಂತದ ಕೋವಿಡ್​ ಅಬ್ಬರ ದೇಶದಲ್ಲಿ ಹೆಚ್ಚಾಗಿದ್ದು, ಇದಕ್ಕೆ ಕಳವಳ ವ್ಯಕ್ತಪಡಿಸಿರುವ ಕೇಂದ್ರ ಸರ್ಕಾರ ಮುಂದಿನ ಕೆಲ ವಾರ ಭಾರತಕ್ಕೆ ನಿರ್ಣಾಯಕ ಎಂದಿದೆ.

Rajesh Bhushan
Rajesh Bhushan

ನವದೆಹಲಿ: ಮಹಾಮಾರಿ ಕೊರೊನಾ ವೈರಸ್​ 2ನೇ ಅಲೆ ದೇಶದಲ್ಲಿ ಮೀತಿ ಮೀರಿದ್ದು, ಇದರಿಂದ ಜನರು ಈ ಹಿಂದಿಗಿಂತಲೂ ಅತಿ ಹೆಚ್ಚು ಸಂಖ್ಯೆಯಲ್ಲಿ ಸೋಂಕಿತರಾಗುತ್ತಿದ್ದಾರೆ. ಇದೇ ವಿಷಯವಾಗಿ ಕೇಂದ್ರ ಆರೋಗ್ಯ ಇಲಾಖೆ ಇಂದು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿತು.

ಮಹಾರಾಷ್ಟ್ರ, ಪಂಜಾಬ್​, ಛತ್ತೀಸ್​ಗಢ, ಕರ್ನಾಟಕ ಸೇರಿದಂತೆ ಕೆಲವೊಂದು ರಾಜ್ಯಗಳಲ್ಲಿ ಮಹಾಮಾರಿ ಅಬ್ಬರ ಜೋರಾಗಿದ್ದು, ಮುಂದಿನ ನಾಲ್ಕು ವಾರ ಭಾರತಕ್ಕೆ ಬಹಳ ನಿರ್ಣಾಯಕವಾಗಲಿದೆ ಎಂದಿದೆ.

ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಆರೋಗ್ಯ ಕಾರ್ಯದರ್ಶಿ ಭೂಷಣ್​

ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿದ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್​ ಭೂಷಣ್​, ದೇಶದಲ್ಲಿ 10 ಜಿಲ್ಲೆಗಳಲ್ಲಿ ಅತಿ ಹೆಚ್ಚು ಕೋವಿಡ್​ ಪ್ರಕರಣಗಳಿದ್ದು, ಅದರಲ್ಲಿ ಮಹಾರಾಷ್ಟ್ರದ ಏಳು ಹಾಗೂ ಕರ್ನಾಟಕ, ಛತ್ತೀಸಗಢ ಮತ್ತು ದೆಹಲಿ ತಲಾ ಒಂದು ಜಿಲ್ಲೆಯಲ್ಲಿ ಇದರ ಹಾವಳಿ ಜೋರಾಗಿದೆ ಎಂದರು. ದೇಶದಲ್ಲಿ ಅತಿ ಹೆಚ್ಚು ಆರ್​ಟಿ - ಪಿಸಿಆರ್​​ ಟೆಸ್ಟ್​ ಮಾಡಿಸುವಂತೆ ಸೂಚನೆ ನೀಡಲಾಗಿದ್ದು, ಮಹಾರಾಷ್ಟ್ರದಲ್ಲಿ ಕೇವಲ ಶೇ.60ರಷ್ಟು ಟೆಸ್ಟಿಂಗ್​ ಆಗಿವೆ ಎಂದರು. ಪಂಜಾಬ್​ ಹಾಗೂ ಛತ್ತೀಸ್​ಗಢದಲ್ಲಿ ಹೆಚ್ಚಿನ ಸಾವು ಪ್ರಕರಣ ದಾಖಲಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ ಎಂದರು.

ನಿನ್ನೆ ಒಂದೇ ದಿನ ದೇಶಾದ್ಯಂತ 43 ಲಕ್ಷ ಕೋವಿಡ್​ ವ್ಯಾಕ್ಸಿನ್​ ನೀಡಲಾಗಿದ್ದು, ಇಲ್ಲಿಯವರೆಗೆ 8.31 ಕೋಟಿ ವ್ಯಾಕ್ಸಿನ್​ ನೀಡಿದ್ದೇವೆ ಎಂದರು. ವ್ಯಾಕ್ಸಿನ್​ ಸುರಕ್ಷಿತವಾಗಿದ್ದು, ಇದರ ಬಗ್ಗೆ ಯಾವುದೇ ಸಂದೇಹ ಬೇಡ ಎಂಬ ಕಿವಿಮಾತು ಸಹ ಹೇಳಿದರು.

ಇದನ್ನೂ ಓದಿ: ಕೇರಳ ಚುನಾವಣೆ: ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ಪ್ರಮುಖ ಅಭ್ಯರ್ಥಿಗಳು

ಇದೇ ವೇಳೆ ಮಾತನಾಡಿದ ನೀತಿ ಆಯೋಗದ ವಿಕೆ ಪೌಲ್​, ದೇಶದಲ್ಲಿ ಕೊರೊನಾ ಪ್ರಕರಣದ ಹಾವಳಿ ಹೆಚ್ಚಾಗಿದ್ದು, ನಿತ್ಯ ಅತಿ ಹೆಚ್ಚು ಸೋಂಕಿತ ಪ್ರಕರಣ ಕಾಣಿಸಿಕೊಳ್ಳುತ್ತಿವೆ. ಯಾವುದೇ ಕಾರಣಕ್ಕೂ ಪರಿಸ್ಥಿತಿ ಲಘುವಾಗಿ ತೆಗೆದುಕೊಳ್ಳಬೇಡಿ ಎಂದು ವಾರ್ನ್​ ಮಾಡಿದ್ದಾರೆ. ಮಹಾಮಾರಿ ಹೆಚ್ಚಾಗಿರುವ ಮಹಾರಾಷ್ಟ್ರ, ಛತ್ತೀಸಗಢ ಹಾಗೂ ಪಂಜಾಬ್​ದಲ್ಲಿ ಹೊಸ ವೈದ್ಯಕೀಯ ತಂಡ ರವಾನೆ ಮಾಡಲಾಗಿದ್ದು, ಅಲ್ಲಿನ ಪರಿಸ್ಥಿತಿ ಮೇಲೆ ನಿಗಾ ಇಡಲಿದ್ದಾರೆ ಎಂದರು.

ABOUT THE AUTHOR

...view details