ಕರ್ನಾಟಕ

karnataka

ETV Bharat / bharat

ಸಹಾಯಕ ಕಮಿಷನರ್​ ಮೇಲೆ ಎನ್​ಸಿಪಿ ನಾಯಕ ಜಿತೇಂದ್ರ ಅವ್ಹಾದ್​ ಬೆಂಬಲಿಗರಿಂದ ಹಲ್ಲೆ ಆರೋಪ - ಈಟಿವಿ ಭಾರತ ಕನ್ನಡ

ಥಾಣೆ ಮುನ್ಸಿಪಲ್​ ಸಹಾಯಕ ಕಮೀಷನರ್​​ ಮೇಲೆ ಹಲ್ಲೆ - ಎನ್​ಸಿಪಿ ಜಿತೇಂದ್ರ ಅವ್ಹಾದ್​ ಬೆಂಬಲಿಗರ ವಿರುದ್ಧ ಆರೋಪ - ಆಡಿಯೋ ಕ್ಲಿಪ್​ ವೈರಲ್​ ಬಳಿಕ ಕೃತ್ಯ

NCP workers
ಎನ್​ಸಿಪಿ ಜಿತೇಂದ್ರ ಅವ್ಹಾದ್​

By

Published : Feb 16, 2023, 11:05 AM IST

ಥಾಣೆ (ಮಹಾರಾಷ್ಟ್ರ): ಥಾಣೆ​ ಮುನ್ಸಿಪಲ್ ಸಹಾಯಕ ಕಮೀಷನರ್​ ಮಹೇಶ್​ ಅಹೆರ್​ ಮೇಲೆ ಎನ್​ಸಿಪಿ ನಾಯಕ ಜಿತೇಂದ್ರ ಅವ್ಹಾದ್​ ಬೆಂಬಲಿಗರು ಹಲ್ಲೆ ನಡೆಸಿರುವುದಾಗಿ ತಿಳಿದು ಬಂದಿದೆ. ಬುಧವಾರ ಥಾಣೆ ನಾಗರಿಕ ಸಂಸ್ಥೆಯ ಪ್ರಧಾನ ಕಚೇರಿಯ ಹೊರಗೆ ಈ ಘಟನೆ ಸಂಭವಿಸಿದೆ. ಪ್ರಕರಣಕ್ಕೆ ಸಂಬಂಧಿಸಿ ಥಾಣೆ ಪೊಲೀಸರು ಜಿತೇಂದ್ರ ಅವ್ಹಾದ್​ ಮತ್ತು ಅವರ ಬೆಂಬಲಿಗರ ವಿರುದ್ಧ ಐಪಿಸಿ ಸೆಕ್ಷನ್​ 120 ಬಿ, 353, 332, 307, 506, 143, 148, 149 ಅಡಿ ಎಫ್​ಐಆರ್​ ದಾಖಲಿಸಿದ್ದಾರೆ.

ಜಿತೇಂದ್ರ ಅವ್ಹಾದ್​ ಅವರಿಗೆ ಸಂಬಂಧಿಸಿದ ಆಡಿಯೋ ಕ್ಲಿಪ್​ ವೈರಲ್​ ಆಗಿತ್ತು. ಮಹೇಶ್​ ಅಹೆರ್​ ಅವರು ಆಡಿಯೋದಲ್ಲಿ ಜಿತೇಂದ್ರ ಅವರ ಮಗಳು ಮತ್ತು ಅಳಿಯನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಹೇಳಲಾಗಿದೆ. ಇದಕ್ಕೆ ಪ್ರತ್ಯುತ್ತರವಾಗಿ ಜಿತೇಂದ್ರ ಬೆಂಬಲಿಗರು ಮಹೇಂದ್ರ ಅವರನ್ನು ಸುತ್ತುವರಿದು ಥಾಣೆ ಮುನ್ಸಿಪಲ್​ ಕಾರ್ಪೋರೇಶನ್​ ಪಾರ್ಕಿಂಗ್​ ಪ್ರದೇಶದಲ್ಲಿ ಥಳಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ಕೆಲವು ಭದ್ರತಾ ಸಿಬ್ಬಂದಿಗಳು ಮಧ್ಯಪ್ರವೇಶಿಸಿ ಅವರನ್ನು ದೂರ ಸರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೂಡಲೇ ಗಾಯಗೊಂಡಿದ್ದ ಮಹೇಶ್​ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಯಿತು.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಜಿತೇಂದ್ರ ಅವ್ಹಾದ್​, ಮಹೇಂದ್ರ ಅಹೆರ್ ಅವರು​ ಗೂಂಡಾಗಳೊಂದಿಗೆ ಸಂಪರ್ಕದಲ್ಲಿದ್ದು ಸ್ಪೇನ್​ನಲ್ಲಿರುವ ನನ್ನ ಮಗಳನ್ನು ಕೊಲ್ಲಲು ಶೂಟರ್​ ಅನ್ನು ನೇಮಿಸಿರುವುದಾಗಿ ಆರೋಪಿಸಿದ್ದಾರೆ. ಜೊತೆಗೆ, ನನಗೆ ಅವರ ಮೇಲೆ ನಡೆದಿರುವ ಹಲ್ಲೆಯ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿಕೊಂಡಿದ್ದಾರೆ. "ಹಲ್ಲೆ ನಡೆದಿರುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಆದರೆ ಸ್ಪೇನ್​ನಲ್ಲಿರುವ ನನ್ನ ಮಗಳನ್ನು ಕೊಲ್ಲುವುದಾಗಿ ಮಹೇಶ್​ ಅಹೆರ್​ ಹೇಳಿಕೊಂಡಿದ್ದಾರೆ. ಅವರು ದಿನಕ್ಕೆ 40 ಲಕ್ಷ ರೂಪಾಯಿ ಸಂಪಾದನೆ ಮಾಡುವ ಹಾಗೆ ಮಾತನಾಡುತ್ತಾರೆ ಮತ್ತು ಒಬ್ಬ ಡಾನ್​ನಂತೆಯೇ ವರ್ತಿಸುತ್ತಾರೆ" ಎಂದು ದೂರಿದ್ದಾರೆ. ಹಲ್ಲೆ ಆರೋಪದ ಬಳಿಕ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.​

ಇದನ್ನೂ ಓದಿ:ಅಕ್ರಮ ಹಣ ವರ್ಗಾವಣೆ ಕೇಸ್: ಕೇರಳ ಸಿಎಂ ಮಾಜಿ ಮುಖ್ಯ ಕಾರ್ಯದರ್ಶಿ ಬಂಧನ

ಇತ್ತೀಚೆಗೆ ತೆಲಂಗಾಣದಲ್ಲಿ ಹಲ್ಲೆ ಆರೋಪವೊಂದು ಕೇಳಿಬಂದಿತ್ತು. ತೆಲಂಗಾಣದ ಬಿಜೆಪಿ ಅಧ್ಯಕ್ಷ ಮತ್ತು ಸಂಸದ ಬಂಡಿ ಸಂಜಯ್​ ಕುಮಾರ್​ ಪುತ್ರ ಬಂಡಿ ಭಗೀರಥ್​ ತನ್ನ ಸಹಪಾಠಿಯೊಬ್ಬನ ಮೇಲೆ ಹಲ್ಲೆ ನಡೆಸಿರುವುದಾಗಿ ವರದಿಯಾಗಿತ್ತು. ಹೈದರಾಬಾದ್​ನ ಉಪನಗರದಲ್ಲಿರುವ ಎಂಜಿನಿಯರಿಂಗ್​ ಕಾಲೇಜಿನ ವಿದ್ಯಾರ್ಥಿಯಾದ ಈತ, ಸಹ ವಿದ್ಯಾರ್ಥಿಯ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿತ್ತು.

ವಿಶ್ವವಿದ್ಯಾಲಯದ ದೂರಿನ ಮೇರೆಗೆ ದುಂಡಿಗಲ್​ ಪೊಲೀಸರು ಸೆಕ್ಷನ್​ 341, 323, 504, 506ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದರು. ಆದರೆ ಹಲ್ಲೆಗೊಳಗಾದ ವಿದ್ಯಾರ್ಥಿಯು ತನ್ನ ತಪ್ಪಿನಿಂದಲೇ ಹಲ್ಲೆ ನಡೆದಿರುವುದಾಗಿ ಒಪ್ಪಿಕೊಂಡಿದ್ದ. ಈ ಬಗ್ಗೆ ಬಂಡಿ ಸಂಜಯ್​ ಕುಮಾರ್​ರವರು, ಇದು ರಾಜಕೀಯ ಷಡ್ಯಂತರವೆಂದು ಹೇಳಿಕೊಂಡಿದ್ದರು.

ಇದನ್ನೂ ಓದಿ:ನಿಕ್ಕಿ ಯಾದವ್ ಕತ್ತು ಹಿಸುಕಿ ಹತ್ಯೆ ಮಾಡಿರುವುದು ಮರಣೋತ್ತರ ಪರೀಕ್ಷೆಯಲ್ಲಿ ದೃಢ... ತಂದೆಯಿಂದ ಮರಣದಂಡನೆಗೆ ಒತ್ತಾಯ

ABOUT THE AUTHOR

...view details