ಕರ್ನಾಟಕ

karnataka

ETV Bharat / bharat

ಮುಂಬೈ ಕ್ರೂಸ್ ಡ್ರಗ್ಸ್ ಪ್ರಕರಣ: ಹಣಕಾಸಿನ ವ್ಯವಹಾರದ ಗಂಭೀರ ಆರೋಪ ಕುರಿತು ಎನ್‌ಸಿಬಿ ತನಿಖೆ ಚುರುಕು - ಹಣಕಾಸಿನ ವ್ಯವಹಾರದ ಗಂಭೀರ ಆರೋಪ ಕುರಿತು ಎನ್‌ಸಿಬಿ ತನಿಖೆ ಚುರುಕು

ಕೇಂದ್ರ ಏಜೆನ್ಸಿಯಿಂದ ಖಾಲಿ ಕಾಗದಕ್ಕೆ ಸಹಿ ಹಾಕಲಾಗಿದೆ ಎಂದು ಪ್ರಕರಣದ ಪ್ರತ್ಯಕ್ಷದರ್ಶಿ ಪ್ರಭಾಕರ್ ಸೈಲ್ ಆರೋಪಿಸಿದ್ದಾರೆ. ಇನ್ನು ವರದಿಗಳ ಪ್ರಕಾರ, ಕೆಪಿ ಗೋಸಾವಿ ನಾಪತ್ತೆಯಾದ ನಂತರ ಎನ್‌ಸಿಬಿ ಮುಖ್ಯಸ್ಥ ಸಮೀರ್ ವಾಂಖೆಡೆಯಿಂದ ತನ್ನ ಜೀವಕ್ಕೆ ಅಪಾಯವಿದೆ ಎಂದು ಸೈಲ್ ಗಂಭೀರ ಆರೋಪ ಮಾಡಿದ್ದಾರೆ.

ಹಣಕಾಸಿನ ವ್ಯವಹಾರದ ಗಂಭೀರ ಆರೋಪ ಕುರಿತು ಎನ್‌ಸಿಬಿ ತನಿಖೆ ಚುರುಕು
ಹಣಕಾಸಿನ ವ್ಯವಹಾರದ ಗಂಭೀರ ಆರೋಪ ಕುರಿತು ಎನ್‌ಸಿಬಿ ತನಿಖೆ ಚುರುಕು

By

Published : Oct 25, 2021, 3:39 PM IST

ಮುಂಬೈ: ಮುಂಬೈ ಕ್ರೂಸ್ ಡ್ರಗ್ಸ್ ಪ್ರಕರಣದ ಸಾಕ್ಷಿ ಪ್ರಭಾಕರ್ ಸೈಲ್ ಅವರ ಹಣದ ವ್ಯವಹಾರದ ಆರೋಪದ ಕುರಿತು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ತನಿಖೆ ಆರಂಭಿಸಿದೆ.

ಡಿಡಿಜಿ ನೈಋತ್ಯ ವಲಯದಿಂದ ವರದಿಯನ್ನು ನಮ್ಮ ಡಿಜಿ ಸ್ವೀಕರಿಸಿದ್ದಾರೆ. ಅವರು ವಿಜಿಲೆನ್ಸ್ ವಿಭಾಗಕ್ಕೆ ವಿಚಾರಣೆಯನ್ನು ವಹಿಸಿದ್ದಾರೆ. ಮುಖ್ಯ ವಿಜಿಲೆನ್ಸ್ ಅಧಿಕಾರಿಯು ವಿಚಾರಣೆಯನ್ನು ಸೂಕ್ತವಾಗಿ ನಿಭಾಯಿಸುತ್ತಾರೆ. ವಿಚಾರಣೆ ಪ್ರಾರಂಭವಾಗಿದೆ, ಅದರ ಬಗ್ಗೆ ಪ್ರತಿಕ್ರಿಯಿಸುವುದು ಸರಿಯಲ್ಲ ಎಂದುಎನ್​ಸಿಬಿ ಉಪ ಮಹಾನಿರ್ದೇಶಕ ಜ್ಞಾನೇಶ್ವರ್ ಸಿಂಗ್ ಹೇಳಿದ್ದಾರೆ.

ಇನ್ನು ಕಳೆದ ದಿನ, ಶಿವಸೇನೆ ಸಂಸದ ಸಂಜಯ್ ರಾವತ್ ಟ್ವಿಟ್ಟರ್ ನಲ್ಲಿ ಆರ್ಯನ್ ಖಾನ್ 'ಸಾಕ್ಷಿ' ಜೊತೆ ಕುಳಿತಿರುವ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಖಾಲಿ ಕಾಗದದ ಮೇಲೆ ಸಹಿ ಮಾಡುವಂತೆ ಸಾಕ್ಷಿಗೆ ಒತ್ತಡ ಹೇರಿರುವುದು ಆಘಾತಕಾರಿ ಎಂದು ರಾವತ್ ಹೇಳಿದ್ದಾರೆ.

ಪೊಲೀಸರು ಈ ವಿಷಯದ ಬಗ್ಗೆ ಸುಮೊಟೋ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದಿರುವ ಅವರು, ಅರಿವು ಕೋರಿ, ರಾವತ್ ಅವರು ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರನ್ನು ಟ್ವೀಟ್​ನಲ್ಲಿ ಟ್ಯಾಗ್ ಮಾಡಿದ್ದಾರೆ ಮತ್ತು ಮಹಾರಾಷ್ಟ್ರವನ್ನು ಅವಹೇಳನ ಮಾಡಲು ಈ ರೀತಿ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ಕೇಂದ್ರ ಏಜೆನ್ಸಿಯಿಂದ ಖಾಲಿ ಕಾಗದಕ್ಕೆ ಸಹಿ ಹಾಕಲಾಗಿದೆ ಎಂದು ಪ್ರಕರಣದ ಪ್ರತ್ಯಕ್ಷದರ್ಶಿ ಪ್ರಭಾಕರ್ ಸೈಲ್ ಆರೋಪಿಸಿದ್ದಾರೆ. ಇನ್ನು ವರದಿಗಳ ಪ್ರಕಾರ, ಕೆಪಿ ಗೋಸಾವಿ ನಾಪತ್ತೆಯಾದ ನಂತರ ಎನ್‌ಸಿಬಿ ಮುಖ್ಯಸ್ಥ ಸಮೀರ್ ವಾಂಖೆಡೆಯಿಂದ ತನ್ನ ಜೀವಕ್ಕೆ ಅಪಾಯವಿದೆ ಎಂದು ಸೈಲ್ ಗಂಭೀರ ಆರೋಪ ಮಾಡಿದ್ದಾರೆ.

ಗೋಸಾವಿ ಅವರು ಆರ್ಯನ್ ಖಾನ್ ಜೊತೆಗಿನ ಸೆಲ್ಫಿಯಲ್ಲಿ ಕಾಣಿಸಿಕೊಂಡಿದ್ದಾರೆ. ಅಕ್ಟೋಬರ್ 2 ರಂದು ಫೋಟೊ ವೈರಲ್ ಆದ ನಂತರ ಈ ವ್ಯಕ್ತಿ ಸುದ್ದಿಯಲ್ಲಿದ್ದಾರೆ. ಈ ಡ್ರಗ್ ಪ್ರಕರಣಕ್ಕೆ ಸಂಬಂಧಿಸಿದ ಇತರ ಏಳು ಜನರೊಂದಿಗೆ ಎನ್‌ಸಿಬಿ ಆರ್ಯನ್ ಖಾನ್ ನನ್ನು ಬಂಧಿಸಿದಾಗ ಆತ ಗೋವಾಕ್ಕೆ ಪ್ರಯಾಣ ಬೆಳೆಸಿದ್ದರು. ಗೋಸಾವಿಗಾಗಿ ಪೊಲೀಸರು ಲುಕೌಟ್ ನೋಟಿಸ್ ಕೂಡ ಜಾರಿ ಮಾಡಿದ್ದಾರೆ.

2018 ರಲ್ಲಿ ಗೋಸಾವಿ ವಿರುದ್ಧ ಪ್ರಕರಣ :

ಇನ್ನು ಮಲೇಷಿಯಾದಲ್ಲಿ ಕೆಲಸ ಕೊಡಿಸುವುದಾಗಿ ಭರವಸೆ ನೀಡಿ ಪುಣೆ ಯುವಕನಿಂದ 3 ಲಕ್ಷ ರೂ.ಗಳನ್ನು ವಂಚಿಸಿದ್ದಕ್ಕಾಗಿ ಮೇ 29, 2018 ರಂದು ಪುಣೆಯಲ್ಲಿ ಗೋಸಾವಿ ವಿರುದ್ಧ ಪ್ರಕರಣ ದಾಖಲಾಗಿತ್ತು. ನಂತರ, ಅವರು ತಲೆಮರೆಸಿಕೊಂಡಿದ್ದಾರೆ ಎಂದು ಘೋಷಣೆ ಮಾಡಿ, ಭಾರತೀಯ ದಂಡ ಸಂಹಿತೆಯ ಕಾಯ್ದೆ 419, 420 ರ ಅಡಿ ಮಾಹಿತಿ ತಂತ್ರಜ್ಞಾನ (IT) ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ನಾನು ತಪ್ಪು ಮಾಡಿಲ್ಲ:

ಇನ್ನು ಎನ್​ಸಿಬಿ ಅಧಿಕಾರಿ ವಾಂಖೆಡೆ ಅವರು ಮುಂಬೈ ಸೆಷನ್ ನ್ಯಾಯಾಲಯದ ವಿಶೇಷ ಮಾದಕದ್ರವ್ಯ ಔಷಧಗಳು ಮತ್ತು ಸೈಕೋಟ್ರೋಪಿಕ್ ಪದಾರ್ಥಗಳ ಕಾಯಿದೆ (NDPS) ನ್ಯಾಯಾಲಯದಲ್ಲಿ ಅಫಿಡವಿಟ್ ಸಲ್ಲಿಸಿದ್ದಾರೆ. ನಾನು ನನ್ನ ವೃತ್ತಿಜೀವನದಲ್ಲಿ ಯಾವತ್ತೂ ಕೆಟ್ಟದಾಗಿ ನಡೆದುಕೊಂಡಿಲ್ಲ ಅಥವಾ ತಪ್ಪು ಮಾಡಿಲ್ಲ. ನನ್ನ ವಿರುದ್ಧ ಬಂದಿರುವ ಎಲ್ಲಾ ಆರೋಪಗಳು ಸುಳ್ಳು. ನಾನು ಯಾವುದೇ ವಿಚಾರಣೆಯನ್ನು ಎದುರಿಸಲು ಸಿದ್ಧನಿದ್ದೇನೆ. ಕೆಲವರು ನನ್ನನ್ನು, ನನ್ನ ಕುಟುಂಬವನ್ನು ಗುರಿಯಾಗಿಸಿಕೊಂಡಿದ್ದಾರೆ. ನನ್ನ ಕೆಲವು ವೈಯಕ್ತಿಕ ಫೋಟೋಗಳು ಸೋರಿಕೆಯಾಗಿವೆ ಎಂದು ವಾಂಖೆಡೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ.

ಎನ್​ಸಿಪಿ ನಾಯಕ - ವಾಂಖೆಡೆ ನಡುವೆ ಗಲಾಟೆ:

ಡ್ರಗ್ಸ್-ಆನ್-ಕ್ರೂಸ್ ಪ್ರಕರಣದ ತನಿಖೆಯ ಆರಂಭದಿಂದಲೂ ಎನ್​ಸಿಪಿ ನಾಯಕ ಮತ್ತು ವಾಂಖೆಡೆ ಜೊತೆ ಜಗಳವಾಗುತ್ತಿದೆ. ಮಾಲ್ಡೀವ್ಸ್ ಮತ್ತು ದುಬೈಗೆ ಹಣ ವಸೂಲಿ ಮಾಡಲು ವಾಂಖೆಡೆ ಮತ್ತು ಅವರ ಕುಟುಂಬದವರು ಹೋಗುತ್ತಿದ್ದಾರೆ ಎಂದು ಮಲಿಕ್ ಆರೋಪಿಸಿದ್ದರು. ಆರೋಪಗಳನ್ನು ತಳ್ಳಿಹಾಕಿದ ವಾಂಖೆಡೆ, ಡ್ರಗ್ಸ್ ವಿರುದ್ಧದ ಕೆಲಸಕ್ಕಾಗಿ ತನ್ನನ್ನು ಗುರಿಯಾಗಿಸಲಾಗುತ್ತಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ತನ್ನ ದುಬೈ ಭೇಟಿಯ ಆರೋಪಗಳನ್ನು ತಳ್ಳಿಹಾಕಿದ ವಾಂಖೆಡೆ, ತನ್ನ ಸೇವೆಯ ಅವಧಿಯಲ್ಲಿ ದುಬೈಗೆ ಹೋಗಿಲ್ಲ. ಆದರೆ, ಮಾಲ್ಡೀವ್ಸ್‌ಗೆ ಭೇಟಿ ನೀಡಿದ್ದೇನೆ. ನಾನು ನನ್ನ ಕುಟುಂಬ ಮತ್ತು ಮಕ್ಕಳೊಂದಿಗೆ ಮಾಲ್ಡೀವ್ಸ್‌ಗೆ ಹೋಗಿದ್ದೆ. ಈ ಸಂಬಂಧ ಸಮರ್ಥ ಸಂಬಂಧಿಸಿದ ಅಧಿಕಾರಿಗಳಿಂದ ಅನುಮತಿ ಪಡೆದ ನಂತರ ಹೋಗಿದ್ದೆ ಎಂದಿದ್ದಾರೆ.

ಇದಕ್ಕೂ ಮುನ್ನ ಮಲಿಕ್ ಕಟುವಾದ ಆರೋಪಗಳನ್ನು ಮಾಡಿದ್ದಾರೆ. ಅವರು ಬಿಜೆಪಿಯ ಕೈಗೊಂಬೆ. ಬೋಗಸ್ ಪ್ರಕರಣಗಳನ್ನು ಬೆಳಕಿಗೆ ತರುತ್ತಾರೆ. ನಾನು ವಾಂಖೆಡೆಗೆ ಸವಾಲು ಹಾಕುತ್ತೇನೆ, ಅವರು ಒಂದು ವರ್ಷದಲ್ಲಿ ಕೆಲಸ ಕಳೆದುಕೊಳ್ಳುತ್ತಾರೆ. ನಮ್ಮ ಬಳಿ ಬೋಗಸ್ ಪ್ರಕರಣಗಳ ಪುರಾವೆಗಳಿವೆ ಎಂದು ಮಲ್ಲಿಕ್ ವಾಖಂಡೆ ವಿರುದ್ಧ ಹರಿಹಾಯ್ದಿದ್ದಾರೆ.

ಎನ್​ಸಿಬಿ ಹೊಸ ಪ್ರಕರಣ ದಾಖಲು:

ಇದೆಲ್ಲದರ ನಡುವೆ ಆರ್ಯನ್ ಖಾನ್ ಮತ್ತು ಅವರ ಸ್ನೇಹಿತರ ವಿರುದ್ಧ ಎನ್​ಸಿಬಿ ಹೊಸ ಪ್ರಕರಣವನ್ನು ದಾಖಲಿಸಿದೆ. ಏಜೆನ್ಸಿಯ ಪ್ರಕಾರ, ಆರೋಪಿಗಳು ಮಾದಕವಸ್ತು ಸಂಬಂಧಿತ ವಹಿವಾಟುಗಳಿಗೆ ಡಾರ್ಕ್‌ನೆಟ್ ಬಳಸುತ್ತಿರುವುದು ತನಿಖೆಯಿಂದ ತಿಳಿದು ಬಂದಿದೆ. ಆರ್ಯನ್ ಖಾನ್ ಸ್ವತಃ ಹಣ ಪಾವತಿಸಿದ್ದಾರೆಯೇ ಎಂದು ತನಿಖೆ ನಡೆಯುತ್ತಿದೆ. ಎನ್‌ಸಿಬಿ ಮೂಲಗಳ ಪ್ರಕಾರ, ಆರೋಪಿಗಳಿಂದ ವಶಪಡಿಸಿಕೊಂಡ ಹೈಡ್ರೋಪೋನಿಕ್ ವೀಡ್ ಅನ್ನು ಡಾರ್ಕ್‌ನೆಟ್ ಮೂಲಕ ಖರೀದಿಸಲಾಗಿದೆ.

ವಾಂಖೆಡೆ ನೇತೃತ್ವದ ಎನ್‌ಸಿಬಿ ತಂಡವು ಅಕ್ಟೋಬರ್ 2 ರಂದು ಗೋವಾಕ್ಕೆ ತೆರಳುತ್ತಿದ್ದ ಕಾರ್ಡೆಲಿಯಾ ಕ್ರೂಸ್ ಹಡಗಿನಲ್ಲಿ ಡ್ರಗ್ಸ್ ಪಾರ್ಟಿಯನ್ನು ಭೇದಿಸಿತ್ತು. ಆರ್ಯನ್ ಜೊತೆಗೆ ಇಬ್ಬರು ನೈಜೀರಿಯನ್ ಪ್ರಜೆಗಳು ಸೇರಿದಂತೆ ಒಟ್ಟು 20 ಜನರನ್ನು ಇಲ್ಲಿಯವರೆಗೆ ಬಂಧಿಸಲಾಗಿದೆ.

ABOUT THE AUTHOR

...view details