ಕರ್ನಾಟಕ

karnataka

ಇಮ್ರಾನ್ ಖಾನ್​​ ನನ್ನ 'ಹಿರಿಯ ಸಹೋದರ'... ವಿವಾದಕ್ಕೆ ಕಾರಣವಾಯ್ತು ನವಜೋತ್​ ಸಿಂಗ್​ ಹೇಳಿಕೆ

By

Published : Nov 20, 2021, 4:04 PM IST

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್​ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗಿಯಾಗಿ ವಿವಾದಕ್ಕೆ ಕಾರಣವಾಗಿದ್ದ ನವಜೋತ್ ಸಿಂಗ್ ಸಿಧು ಇದೀಗ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

Navjot Singh Sidhu
Navjot Singh Sidhu

ಗುರುದಾಸ್​ಪುರ(ಪಂಜಾಬ್​):ಪಾಕಿಸ್ತಾನದ ಕರ್ತಾರ್​ಪುರ್​ ಸಾಹಿಬ್(Sahib in Kartarpur)​ ಭೇಟಿ ನೀಡಿರುವ ಪಂಜಾಬ್​ ಕಾಂಗ್ರೆಸ್​​ ಮುಖ್ಯಸ್ಥ ನವಜೋತ್ ಸಿಂಗ್​ ಸಿಧು (Navjot Singh Sidhu) ವಿವಾದಿತ ಹೇಳಿಕೆ ನೀಡಿದ್ದು, ಇದೀಗ ಅವರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ನವಜೋತ್ ಸಿಂಗ್ ಸಿಧು ಪಾಕಿಸ್ತಾನದ ಕರ್ತಾರ್​ಪುರ್​ ಸಾಹಿಬ್​ಗೆ ಭೇಟಿ ನೀಡಿರುವ ಸಂದರ್ಭದಲ್ಲಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್​ ಖಾನ್(Pak PM Imran Khan) ​ತಮ್ಮ ಹಿರಿಯ ಸಹೋದರ ಎಂದು ಹೇಳಿಕೆ ನೀಡಿದ್ದು, ಇದು ವಿವಾದಕ್ಕೆ ಕಾರಣವಾಗಿದೆ. ಇದೇ ವಿಚಾರವಾಗಿ ಪಶ್ಚಿಮ ಬಂಗಾಳದ ಬಿಜೆಪಿಯ ರಾಷ್ಟ್ರೀಯ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ಉಸ್ತುವಾರಿ ಅಮಿತ್ ಮಾಳವಿಯಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟ್ವಿಟ್ಟರ್​ನಲ್ಲಿ ಬರೆದುಕೊಂಡಿರುವ ಮಾಳವಿಯಾ, ರಾಹುಲ್​ ಗಾಂಧಿ ಅವರ ನೆಚ್ಚಿನ ನವಜೋತ್ ಸಿಂಗ್ ಸಿಧು, ಪಾಕಿಸ್ತಾನದ ಪ್ರಧಾನಿ ಇಮ್ರಾನ್​ ಖಾನ್​​ ಅವರನ್ನ ಹಿರಿಯ ಸಹೋದರ ಎಂದು ಕರೆದಿದ್ದಾರೆ. ಈ ಹಿಂದೆ ಕೂಡ ಪಾಕ್​ನ ಸೇನಾ ಮುಖ್ಯಸ್ಥ ಜನರಲ್​ ಬಾಜ್ವಾ ಅವರನ್ನ ತಬ್ಬಿಕೊಂಡಿದ್ದರು. ಇಂತಹ ವ್ಯಕ್ತಿಯನ್ನ ಪಂಜಾಬ್​​​ ಕಾಂಗ್ರೆಸ್​ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಆಶ್ಚರ್ಯ ಮೂಡಿಸಿದೆ ಎಂದಿದ್ದಾರೆ.

ಇದನ್ನೂ ಓದಿರಿ:Farm Laws: ಮೃತ ರೈತ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ನೀಡಿ.. ಪ್ರಧಾನಿಗೆ ವರುಣ್​ ಗಾಂಧಿ ಪತ್ರ

ನವೆಂಬರ್​​ 18ರಂದು ಪಾಕ್​ನ ಕರ್ತಾರ್​ಪುರ್ ಸಾಹಿಬ್​ ಭೇಟಿಗೆ ಮುಖ್ಯಮಂತ್ರಿ ಚರಣ್​ ಜೀತ್ ಸಿಂಗ್​ ಚನ್ನಿ ನೇತೃತ್ವದ ರಾಜ್ಯ ಕ್ಯಾಬಿನೆಟ್​​​ ಹಾಗೂ ನವಜೋತ್ ಸಿಂಗ್​ ಸಿಧು ಪ್ರಯಾಣ ಬೆಳೆಸಿದ್ದರು. ಅಲ್ಲಿಗೆ ತೆರಳುತ್ತಿದ್ದಂತೆ ಮಾತನಾಡಿದ್ದ ಸಿಧು, ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ (Imran Khan) ತಮ್ಮ ಹಿರಿಯ ಸಹೋದರ ಎಂದು ಹೊಗಳಿದ್ದರು.

ಸಿಖ್​ ಧರ್ಮದ ಸಂಸ್ಥಾಪಕ ಗುರುನಾನಕ್​ (Guru Nanak Dev)ಅವರ ಸ್ಥಳವಾಗಿರುವ ಪಾಕಿಸ್ತಾನದ ಕರ್ತಾರ್​ಪುರ್​ಗೆ ಪ್ರತಿ ವರ್ಷ ಭಾರತದಿಂದ ಸಿಖ್​ರು ತೆರಳುತ್ತಾರೆ. ಪಂಜಾಬ್​ನಿಂದ ಅತಿ ಹೆಚ್ಚಿನ ಜನರು ಇಲ್ಲಿಗೆ ಭೇಟಿ ನೀಡ್ತಾರೆ.

ABOUT THE AUTHOR

...view details